)
ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆಗೆ ಪರ ವಿರೋಧ ತೀವ್ರಗೊಂಡ ಬೆನ್ನ ಹಿಂದೆಯೇ ಭೂ ಸ್ವಾಧೀನಕ್ಕಾಗಿ ಅಂತಿಮ ಅಧಿಸೂಚನೆ ಹೊರಡಿಸಿದ್ದ ಗ್ರಾಮಗಳ ರೈತರಿಗೆ ಭೂ ಪರಿಹಾರ ವಿತರಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.
ಆನಂತರ ಮಾತನಾಡಿದ ಶಾಸಕ ಬಾಲಕೃಷ್ಣ, ಬಿಡದಿ ಟೌನ್ ಶಿಪ್ ಯೋಜನೆಯ ಭೂಸ್ವಾಧೀನಕ್ಕೆ ಒಪ್ಪಿಗೆ ಪತ್ರ ಕೊಟ್ಟ ಒಂದು ವಾರದಲ್ಲೇ ಅಂತಹ ಭೂಮಾಲೀಕರ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತವನ್ನು ಆರ್ಟಿಜಿಎಸ್ ಮೂಲಕ ವರ್ಗಾಯಿಸಲಾಗುವುದು ಎಂದು ಹೇಳಿದರು.
ಈಗಾಗಲೇ 9 ಗ್ರಾಮಗಳ ಪೈಕಿ 3 ಗ್ರಾಮಗಳ 519 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕೆಂಪಯ್ಯನಪಾಳ್ಯ, ಮಂಡಲಹಳ್ಳಿ, ವಡೇರಹಳ್ಳಿ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಪ್ರಕಟಿಸಿದೆ. ನೋಟಿಸ್ ಪಡೆದು ಒಪ್ಪಿಗೆ ನೀಡಿರುವ ರೈತರಿಗೆ ಭೂ ಪರಿಹಾರ ಹಣ ವಿತರಣೆ ಮಾಡಲಾಗುತ್ತಿದೆ. ಭೂಸ್ವಾಧೀನ ಸೇರಿದಂತೆ ಯೋಜನೆಗೆ ಬೇಕಾಗಿರುವ ಅಗತ್ಯ ಆರ್ಥಿಕ ಸಂಪನ್ಮೂಲ ಜಿಬಿಡಿಎ ಬಳಿ ಇಲ್ಲವೆಂಬ ಟೀಕೆಗಳು ಕೇಳಿ ಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಈ ಯೋಜನೆಗೆ ಬೇಕಾಗಿರುವ 20 ಸಾವಿರ ಕೋಟಿ ರುಪಾಯಿ ಸಿದ್ದವಿದೆ. ಅಗತ್ಯ ಹಣ ಇಲ್ಲದಿದ್ದರೆ, ಯೋಜನೆ ರೂಪಿಸಲು ಸಾಧ್ಯವೇ ಎಂದರು.ಭೂ ಮಾಲೀಕರಿಗೆ 5 ಲಕ್ಷ ಇಡಿಗಂಟು:
ಭೂಸ್ವಾಧೀನವಾಗುವ 1 ಗುಂಟೆ, 1 ಎಕರೆ ಹೀಗೆ ಎಷ್ಟೇ ಪ್ರಮಾಣದ ಜಮೀನು ಸ್ವಾಧೀನಕ್ಕೆ ಒಳಪಟ್ಟರೆ ಅಂತಹ ಮಾಲೀಕರಿಗೆ ಇಡಿಗಂಟು ಮೊತ್ತ 5 ಲಕ್ಷ ರುಪಾಯಿ ಸಿಗಲಿದೆ. ಹೋರಾಟಗಳಿಗೆ ಹೆದರಿ ಇಡಿಗಂಟು ಮೊತ್ತವನ್ನು ನಿಗದಿ ಪಡಿಸಿಲ್ಲ. ಕಾನೂನು ಪ್ರಕಾರವೇ ನಿರ್ಧರಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್, ನಿರ್ದೇಶಕರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಮರಮಾಲಿಕೆಗಳಿಗೆ ದುಪ್ಪಟ್ಟು ಪರಿಹಾರ:
ಬಾಕ್ಸ್ ..............
ರಾಮನಗರ: ಬಿಡದಿ ಹೋಬಳಿ ಬೈರಮಂಗಲ-ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಡದಿ ಟೌನ್ ಶಿಪ್ ನಿರ್ಮಿಸುವ ಯೋಜನೆ ರೂಪಿಸುವುದು ಎಚ್.ಡಿ.ಕುಮಾರಸ್ವಾಮಿರವರ ಕನಸಿನ ಕೂಸು. ಹೀಗಾಗಿಯೇ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿರವರು ಎರಡು ಬಾರಿ ಮುಖ್ಯಮಂತ್ರಿಯಾದರು ಈ ಯೋಜನೆಯನ್ನು ಪೂರ್ಣಗೊಳಿಸಲಿಲ್ಲ. ಜೊತೆಗೆ ರೆಡ್ ಜೋನ್ ಅನ್ನು ತೆರವುಗೊಳಿಸುವ ಪ್ರಯತ್ನವನ್ನೂ ಮಾಡಲಿಲ್ಲ ಎಂದು ದೂರಿದರು.
ರೆಡ್ ಜೋನ್ ಆಗಿದ್ದರಿಂದ ಈ ಭಾಗದ ಭೂಮಾಲೀಕರು ಭೂಮಿಯನ್ನು ಅಭಿವೃದ್ಧಿ ಪಡಿಸಲಾಗದೆ, ಭೂಮಿಯನ್ನು ಮಾರಲಾಗದೆ ತೊಂದರೆ ಅನುಭವಿಸುತ್ತಿದ್ದರು. ಕೆಲವರು ಮದುವೆ ಮುಂತಾದ ಕಾರ್ಯಗಳಿಗಾಗಿ 30 ರಿಂದ 70 ಲಕ್ಷ ರು.ಗಳಿಗೆ ಭೂಮಿಯನ್ನು ಪರಭಾರೆ ಮಾಡಿದ್ದಾರೆ.ದಶಕಗಳಿಂದ ತೊಳಲಾಡುತ್ತಿದ್ದ ಭೂಮಾಲೀಕರು ನಮ್ಮ ಬಳಿ ಮುಕ್ತಿ ಕೊಡಿಸಿ ಎಂದು ಮನವಿ ಮಾಡಿದ್ದರಿಂದಲೇ ಇಲ್ಲಿ ಟೌನ್ ಶಿಪ್ ನಿರ್ಮಿಸಲು ಕ್ರಮ ತೆಗೆದುಕೊಂಡಿದ್ದೇವೆ. ರೆಡ್ ಜೋನ್ ತೆರವಾಗಿದ್ದರೆ ಬಹುಶಃ ಈ ಹಿಂದೆಯೇ ಈ ಭೂಮಿಯೆಲ್ಲ ಬಡಾವಣೆಗಳಾಗಿ ಪರಿವರ್ತನೆಯಾಗುತ್ತಿದ್ದವು. ಈ ಯೋಜನೆಗೆ ಭೂಮಿಯೇ ಸಿಗುತ್ತಿರಲಿಲ್ಲ ಎಂದು ಬಾಲಕೃಷ್ಣ ಹೇಳಿದರು.
19ಕೆಆರ್ ಎಂಎನ್ 4.ಜೆಪಿಜಿಶಾಸಕ ಬಾಲಕೃಷ್ಣ ಭೂಸ್ವಾಧೀನಕ್ಕೆ ಒಪ್ಪಿಗೆ ನೀಡಿದ ರೈತನಿಗೆ ಪರಿಹಾರ ಚೆಕ್ ವಿತರಿಸಿದರು.