ಮಳೆ ಅಬ್ಬರ ತಗ್ಗಿದರೂ ನಿಲ್ಲದ ಗುಡ್ಡಕುಸಿತ

KannadaprabhaNewsNetwork |  
Published : Jun 18, 2025, 11:48 PM IST
ೇ್‌ | Kannada Prabha

ಸಾರಾಂಶ

ಶೃಂಗೇರಿತಾಲೂಕಿನಾದ್ಯಂತ ಬುಧವಾರ ಮಳೆಯ ಅಬ್ಬರ ಕಡಿಮೆಯಾಗಿತ್ತು. ಕೆಲ ಹೊತ್ತು ಬಿಸಿಲ ವಾತಾವರಣ, ಸಾದಾರಣ ಮಳೆ ಇತ್ತು. ಆದರೆ ಆಗಾಗ ಸುರಿಯುತ್ತಿರವ ಮಳೆಯಿಂದ ಗುಡ್ಡ ಕುಸಿತ, ಭೂಕುಸಿತ ಮುಂದುವರಿದಿದೆ.

ಕನ್ನಡಪ್ರಭ ವಾರ್ತೆ ಶೃಂಗೇರಿ

ತಾಲೂಕಿನಾದ್ಯಂತ ಬುಧವಾರ ಮಳೆಯ ಅಬ್ಬರ ಕಡಿಮೆಯಾಗಿತ್ತು. ಕೆಲ ಹೊತ್ತು ಬಿಸಿಲ ವಾತಾವರಣ, ಸಾದಾರಣ ಮಳೆ ಇತ್ತು. ಆದರೆ ಆಗಾಗ ಸುರಿಯುತ್ತಿರವ ಮಳೆಯಿಂದ ಗುಡ್ಡ ಕುಸಿತ, ಭೂಕುಸಿತ ಮುಂದುವರಿದಿದೆ.

ಕೆಲದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಶೃಂಗೇರಿ ಮಂಗಳೂರು ಸಂಪರ್ಕ ರಾ.ಹೆ ನೆಮ್ಮಾರು ಸಾಲ್ಮರ ಬಳಿ ಗುಡ್ಡ ಕುಸಿದಿದ್ದು ರಸ್ತೆ ಸಂಚಾರ ಅಪಾಯದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ರಾತ್ರಿ ಸಂಚಾರ ಬಂದ್ ಮಾಡಿ ಜಿಲ್ಲಾಡಳಿತ ಜೂನ್ 17 ರಿಂದ 20 ರವರೆಗೆ ದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ 7 ರಿಂದ ಬುಧವಾರ ಬೆಳಿಗ್ಗೆ 8 ರವರೆಗೆ ಶೃಂಗೇರಿ ಮಂಗಳೂರು ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಬಸ್ ಸೇರಿದಂತೆ ಖಾಸಗಿ ವಾಹನ ಸಂಚಾರ ಇರಲಿಲ್ಲ.

ಬೆಳಿಗ್ಗೆ ಮಂಗಳೂರು ಕಡೆ ಹೋಗುವ ಬಸ್ ಸಂಚಾರ, ಸಂಜೆ ಮಂಗಳೂರು ಕಡೆಯಿಂದ ಬರುವ ಬಸ್ ಗಳು ಸಂಚರಿಸದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ನೆಮ್ಮಾರಿನಲ್ಲಿ ಖಾಸಗಿ ವಾಹನ, ಲಾರಿಗಳು ಮಂಗಳವಾರ ಸಂಜೆಯಿಂದ ಬುಧವಾರ ಬೆಳಗಿನವರೆಗೂ ಸಾಲುಗಟ್ಟಿ ನಿಂತಿತ್ತು. ಗುಡ್ಡ ಸಂಪೂರ್ಣವಾಗಿ ಹಂತಹಂತವಾಗಿ ಕುಸಿಯುತ್ತಿದ್ದು, ಬೃಹತ್ ಮರಗಳು ಗುಡ್ಡದ ಮೇಲೆ ಇದ್ದು, ರಸ್ತೆಯ ಮೇಲೆ ಬೀಳುವ ಹಂತದಲ್ಲಿದೆ. ರಸ್ತೆ ಅಗಲೀಕರಣ ಸಂದರ್ಭದಲ್ಲಿ ಜೆಸಿಬಿಯಿಂದ ಗುಡ್ಡ ಕೊರೆಯಲಾಗಿತ್ತು.

ಜನವಸತಿ ಪ್ರದೇಶವಾದ ಸಾಲ್ಮರ ಬಳಿ ಗುಡ್ಡದ ಮೇಲೆ ಕೆಲ ಮನೆಗಳಿದ್ದು ಗುಡ್ಡ ಕುಸಿಯುತ್ತಿರುವುದರಿಂದ ಮನೆಗಳು ಅಪಾಯದ ಸ್ಥಿತಿಯಲ್ಲಿದೆ. ಸಮೀಪದಲ್ಲಿ ತುಂಗಾ ನದಿಯಿದ್ದು, ಅಲ್ಲಿಯೂ ತಡೆಬೇಲಿ, ತಡೆಗೋಡೆ ಇಲ್ಲದಿರುವುದರಿಂದ ಈ ಪ್ರದೇಶದಲ್ಲಿ ಸಂಚಾರ ಇನ್ನಷ್ಟು ಅಪಾಯಕಾರಿಯಾಗಿದೆ. ಸಾಧಾರಣ ಮಳೆ ಮುಂದುವರಿದಿದೆ.

18 ಶ್ರೀ ಚಿತ್ರ 1-

ಶೃಂಗೇರಿ ನೆಮ್ಮಾರು ಬಳಿ ತನಿಕೋಡು ಎಸ್ ಕೆ ಬಾರ್ಡರ್ ಮಾರ್ಗದಲ್ಲಿ ರಾತ್ರಿ ಸಂಚಾರ ಬಂದ್ ಮಾಡಿರುವುದರಿಂದ ವಾಹನಗಳು ಸಾಲುಗಟ್ಟಿ ನಿಂತಿರುವುದು.

18 ಶ್ರೀ ಚಿತ್ರ 3-

ಶೃಂಗೇರಿ ರಾ.ಹೆ 169 ರ ಶೃಂಗೇರಿ ಮಂಗಳೂರು ಸಂಪರ್ಕ ಸಾಲ್ಮರ ಸಮೀಪ ಗುಡ್ಡಕುಸಿಯುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ನೆಮ್ಮದಿ ಜೀವನಕ್ಕಾಗಿ ಗ್ಯಾರಂಟಿಯಲ್ಲಿ ಪ್ರಾಮುಖ್ಯತೆ: ಚಲುವರಾಯಸ್ವಾಮಿ
ರಂಗ ನಿರ್ದೇಶಕ ಕೆ.ಪಿ.ದೊಡ್ಡಿ ದೇವರಾಜುಗೆ ಬಂಗಾರದ ಕಡಗ ಸಮರ್ಪಣೆ