ಮಹಾರಾಜ ಪಾರ್ಕ್ ಪಕ್ಕದಲ್ಲಿದ್ದ ಹಳೆಯ ಬೃಹತ್ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಂತ್ರಗಳ ಮೂಲಕ ತೆರವುಗೊಳಿಸಿದರು. ಆದರೆ ಮರದಲ್ಲಿ ಆಶ್ರಯ ಪಡೆದಿದ್ದ ನೂರಾರು ಬಾವಲಿಗಳು ನಿರಾಶ್ರಿತವಾಗಿ ಮೂಕ ರೋಧನೆ ಅನುಭವಿಸಿದವು. ಮರವು ಹಳೆಯಾಗಿದ್ದು, ಈ ಮರದಲ್ಲಿನ ಹಲವು ಕೊಂಬೆಗಳು ಓಡಾಡುವ ಸಾರ್ವಜನಿಕರು ಹಾಗೂ ವಾಹನಗಳ ಮೇಲೆ ಬಿದ್ದು ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿತ್ತು.
ಹೊಳೆನರಸೀಪುರ: ಪಟ್ಟಣದ ಮಹಾರಾಜ ಪಾರ್ಕ್ ಪಕ್ಕದಲ್ಲಿದ್ದ ಹಳೆಯ ಬೃಹತ್ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಂತ್ರಗಳ ಮೂಲಕ ತೆರವುಗೊಳಿಸಿದರು. ಆದರೆ ಮರದಲ್ಲಿ ಆಶ್ರಯ ಪಡೆದಿದ್ದ ನೂರಾರು ಬಾವಲಿಗಳು ನಿರಾಶ್ರಿತವಾಗಿ ಮೂಕ ರೋಧನೆ ಅನುಭವಿಸಿದವು.
ಪಟ್ಟಣದ ಮಹಾರಾಜ ಪಾರ್ಕ್ ಪಕ್ಕದಲ್ಲಿದ್ದ ಹತ್ತಾರು ವರ್ಷಗಳಿಂದ ಈ ಮರಗಳು ಬೃಹದಾಕಾರವಾಗಿ ಬೆಳೆದು ದೊಡ್ಡ ದೊಡ್ಡ ಕೊಂಬೆಗಳು ಸುತ್ತಲೂ ಹರಡಿಕೊಂಡಿದ್ದವು. ಮರವು ಹಳೆಯಾಗಿದ್ದು, ಈ ಮರದಲ್ಲಿನ ಹಲವು ಕೊಂಬೆಗಳು ಓಡಾಡುವ ಸಾರ್ವಜನಿಕರು ಹಾಗೂ ವಾಹನಗಳ ಮೇಲೆ ಬಿದ್ದು ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿತ್ತು. ಜತೆಗೆ ಕಳೆದ ವಾರದ ಹಿಂದೆ ಸಂಚರಿಸುತ್ತಿದ್ದ ವಾಹನದ ಮೇಲೆ ಸಣ್ಣ ಕೊಂಬೆಗಳು ಬಿದ್ದು ಅವಘಡ ಸೃಷ್ಟಿಯಾಗಿತ್ತು. ಆದರೆ ಯಾವುದೇ ಅನಾಹುತ ನಡೆದಿರಲಿಲ್ಲ. ಈ ಘಟನೆ ಸಂಬಂಧ ಸಂಸದ ಶ್ರೇಯಸ್ ಎಂ.ಪಟೇಲ್ ಅವರಿಗೆ ಕಾರ್ಯಕರ್ತರು ಮತ್ತು ವಾಹನ ಚಾಲಕರು ದೂರು ನೀಡಿದ ಹಿನ್ನೆಲೆಯಲ್ಲಿ ಸಂಸದರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಈ ಬೃಹತ್ ಮರದ ಕೊಂಬೆಗಳು ಕೆಳಗೆ ಬೀಳುತ್ತಿರುವುದನ್ನು ತಪ್ಪಿಸಲು ಕ್ರಮಕೈಗೊಳ್ಳಬೇಕೆಂದು ಮಾಹಿತಿ ನೀಡಿದರು ಎಂಬ ಸೂಚನೆ ಪ್ರಕಾರ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳಿದರು. ತೆರವು ಕಾರ್ಯದ ವೇಳೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು ಹಾಗೂ ಪಟ್ಟಣದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.