ಕನ್ನಡಪ್ರಭ ವಾರ್ತೆ ಸುರಪುರ
ಪಟ್ಟಣದಲ್ಲಿ ನಡೆದ ಸಂಶಯಾಸ್ಪದ ಕ್ಷಯ ರೋಗ ಪತ್ತೆ ಹಚ್ಚುವ ಮೊಬೈಲ್ ಕ್ಷ ಕಿರಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ವೈದ್ಯಾಧಿಕಾರಿ ಡಾ. ಗಿರೀಶ ಕುಲಕರ್ಣಿ, ರೋಗಿಗಳಲ್ಲಿ ಕಂಡು ಬರುವ ಹಲವು ದಿನಗಳಿಂದ ಇರುವ ಕೆಮ್ಮು ಕಫಾ ಸೇರಿ ಹಲವು ಸಮಸ್ಯೆ ಎದುರಿಸುತ್ತಿರುವವರು ಮುಂಜಾಗ್ರತಾ ಕ್ರಮವಾಗಿ ಕ್ಷ-ಕಿರಣ ಮಾಡಿಸಿಕೊಳ್ಳಬೇಕು. ಬಹಳ ದಿನಗಳಿಂದ ಕೆಮ್ಮು ಜ್ವರ ತಲೆಸುತ್ತುವ ಸಮಸ್ಯೆ ಇದ್ದವರು ತಪ್ಪದೆ ಈ ತಪಾಸಣೆ ಮಾಡಿಸುವಂತೆ ಮನವಿ ಮಾಡಿದರು.
ಮೊಬೈಲ್ ಎಕ್ಸ್ ರೇ ವರದಿ ಬಂದ ನಂತರ ರೋಗಿಗಳಿಗೆ ಔಷಧಿ ಮಾತ್ರೆ ವಿತರಿಸಲಾಗುವುದು ಎಂದು ಹೇಳಿದರು. ತಾಲೂಕು ಆಸ್ಪತ್ರೆಯಿಂದ ಆಗಮಿಸಿದ ವಿಶೇಷ ತಜ್ಞರ ತಂಡ ಸುಮಾರು 116 ರೋಗಿಗಳಿಗೆ ತಪಾಸಣೆ ನಡೆಸಿದರು.ತಾಲೂಕು ಕ್ಷಯರೋಗ ನಿರ್ಮೂಲನಾ ತಂಡದ ಹನುಮಂತ, ಚಿದಾನಂದ, ರಾಘವೇಂದ್ರ ನಾಯಕ, ಆರೋಗ್ಯ ನಿರೀಕ್ಷಕ ರೇವಣಸಿದ್ದಪ್ಪ, ನಿಂಗಮ್ಮ, ಭೀಮರಾಯ ಇದ್ದರು.