ನರಗುಂದ: ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯದ ಜತೆಗೆ ನಾಯಕತ್ವ ಗುಣ ಬೆಳೆಯುತ್ತದೆ ಎಂದು ಲಾಲ್ಸಾಬ್ ಅರಗಂಜಿ ಹೇಳಿದರು.
ಸಂಕಲ್ಪ ಶೆಟ್ಟರ್ ಮಾತನಾಡಿ, ಯುವಕರು ಚಿಕ್ಕವರಾದರೂ ಅವರ ಕಾರ್ಯ ದೊಡ್ಡದು, ಇಂತಹ ಕಾರ್ಯಕ್ರಮಗಳಿಗೆ ಸದಾ ನನ್ನ ಬೆಂಬಲ ಇರುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, ಗುರುಬಸವ ಶ್ರೀಗಳ ಸ್ಮರಣಾರ್ಥ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ. ಇದು ಯುವಕರಲ್ಲಿ ಹೆಚ್ಚಿನ ಉತ್ಸಾಹ ತುಂಬುತ್ತದೆ ಎಂದರು.ಈ ಸಂದರ್ಭದಲ್ಲಿ ಗದುಗಿನ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು, ಶ್ರೀ ಜಗದ್ಗುರ ಯಚ್ಚರೇಶ್ವರ ಮಹಾಸ್ವಾಮಿಗಳ ಗವಿಮಠದ ಅಭಿನವ ಯಚ್ಚರ ಶ್ರಿಗಳು, ದ್ಯಾಮಣ್ಣ ಕಾಡಪ್ಪನವರ, ಪ್ರಕಾಶಗೌಡ ತಿರಕನಗೌಡ್ರ, ಬಸಯ್ಯ ಮಠದ, ವೀರಯ್ಯ ನಾಗಲೋಟಿಮಠ, ಶಿವಾನಂದ ಬಡಿಗೇರ ಸೇರಿದಂತೆ ಶಿರೋಳ ಲೆಜೆಂಡ್ಸ್ ಟೀಂ ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು.
ಸತತ ಮೂರು ದಿನಗಳ ಕಾಲ ನಡೆದ ಕ್ರಿಕೆಟ್ ಟೂರ್ನಾಮೆಂಟ್ನಲ್ಲಿ ಮೊದಲ ಬಹುಮಾನ ಎಸ್.ಕೆ.ಪಿ.ಯು ಹೊಳೆಆಲೂರು ತಂಡ ಪಡೆಯಿತು. ವೀರಕೇಸರಿ ವಾಸನ ಎರಡನೇ ಬಹುಮಾನ ಪಡೆದರೆ, ಶ್ರೀಮಾರುತೇಶ್ವರ ಬೂದಿಹಾಳ ತಂಡ ಮೂರನೇ ಬಹುಮಾನ ಪಡೆಯಿತು. ಗಿರೀಶಗೌಡ ನವಲಗುಂದ ಉತ್ತಮ ಬಾಲರ್, ರಾಜು ಉತ್ತಮ ಬ್ಯಾಟ್ಸ್ಮನ್, ಉತ್ತಮ ತಂಡ ಪ್ರಶಸ್ತಿಯನ್ನು ಶಿರೋಳ ಲೆಜೆಂಡ್ಸ್ ತಂಡ ಪಡೆದುಕೊಂಡಿತು.