ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ಪ್ರತಿಯೊಬ್ಬರ ಸಾಧನೆ ಹಿಂದೆ ಗುರು ಇರುತ್ತಾರೆ. ಗುರುವನ್ನು ನಂಬಿದರೆ ಯಾರೂ ಕೆಡಲ್ಲ. ಗುರುವಿಗೆ ನಿಮ್ಮ ಭವಿಷ್ಯ ರೂಪಿಸುವ ಶಕ್ತಿ ಇದೆ. ವಿದ್ಯಾರ್ಥಿಗಳು ಹೆಚ್ಚಿನ ಪುಸ್ತಕಗಳನ್ನು ಓದಬೇಕು. ಓದಿದರೆ ಮಾತ್ರ ಜ್ಞಾನಾರ್ಜನೆಯಾಗುತ್ತದೆ. ಮೊಬೈಲ್ ಅತಿಯಾದ ಬಳಕೆ ಅಪಾಯಕಾರಿ. ಈಗಿನ ಕಾಲದ ವಿದ್ಯಾರ್ಥಿಗಳು ಮೊಬೈಲ್ ಗೀಳನ್ನು ಬಿಟ್ಟು ಹೆಚ್ಚು ಓದಬೇಕು. ಅಹಂಕಾರವಿದ್ದರೆ ಕಲೆ ಯಾರ ಬಳಿಯೂ ಸುಳಿಯಲ್ಲ. ಭಾರತದಂತಹ ಪವಿತ್ರ ಮಣ್ಣು. ಇಡೀ ಜಗತ್ತಿನಲ್ಲೇ ಇಲ್ಲ. ಇಂತಹ ಮಣ್ಣಿನ ನಾಥ ಪಂಥದ ಬಾಲಗಂಗಾಧರನಾಥ ಸ್ವಾಮೀಜಿಯವರ ಸಂಸ್ಥೆಯಲ್ಲಿ ನೀವು ವ್ಯಾಸಂಗ ಮಾಡುತ್ತಿರುವುದು ನಿಮ್ಮ ಪುಣ್ಯ. ನಮ್ಮ ಕೆಲಸವನ್ನು ನಾವು ಯಾರಿಗೂ ತೊಂದರೆ ನೀಡದಂತೆ ಮಾಡಿದರೆ, ಫಲ ತನ್ನಷ್ಟಕ್ಕೆ ತಾನು ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.
ಹಿರಿಯ ನಟ ದೊಡ್ಡಣ್ಣ ಅವರು ಭಾಷಣದಲ್ಲಿ ಕನ್ನಡದ ಮೇರು ಕವಿಗಳಾದ ರಾಘವಾಂಕ, ಕುವೆಂಪು, ಪಂಪ, ದಿನಕರ ದೇಸಾಯಿ, ಡಿ.ವಿ.ಗುಂಡಪ್ಪ ಸೇರಿದಂತೆ ಹಲವರ ಸಾಹಿತ್ಯ ಜತೆ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ಬುದ್ಧಿ ಹೇಳಿದರು.ಸಮಾರಂಭಕ್ಕೂ ಮುನ್ನ ಕಾಲೇಜಿನ ಪ್ರವೇಶದ್ವಾರದಿಂದ ಮಂಗಳನಾಥ ಸ್ವಾಮೀಜಿ, ನಟ ದೊಡ್ಡಣ್ಣ ಹಾಗೂ ಅತಿಥಿಗಳನ್ನು ತೆರೆದ ವಾಹನದಲ್ಲಿ ಸಾಂಪ್ರದಾಯಿಕ ಮೆರವಣಿಗೆ ಮೂಲಕ ವಿದ್ಯಾರ್ಥಿಗಳು ನಾನಾ ವೇಷಭೂಷಣಗಳನ್ನು ತೊಟ್ಟು ಗಣ್ಯರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ, ಎಸ್ಜೆಸಿಐಟಿ ಪ್ರಾಂಶುಪಾಲ ಡಾ.ಜಿ.ಟಿ. ರಾಜು,ಆಡಳಿತಾಧಿಕಾರಿ ರಂಗಸ್ವಾಮಿ ಜಿ.ಆರ್, ಡೀನ್ ಅಕಾಡೆಮಿಕ್ಸ್ ಮುಖ್ಯಸ್ಥ ಡಾ.ಮಂಜುನಾಥ್ ಕುಮಾರ್ ಬಿ.ಹೆಚ್, ಡೀನ್ ಅಕಾಡೆಮಿಕ್ಸ್, ಸ್ಟುಡೆಂಟ್ ವೆಲ್ಫೇರ್ ಡೀನ್ ಡಾ.ಜಿ.ನಾರಾಯಣ್, ಎಲ್ಲಾ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು. ಸಿಕೆಬಿ-3 ನಗರ ಹೊರವಲಯದ ಎಸ್ಜೆಸಿಐಟಿ ಆವರಣದ ಬಿಜಿಎಸ್ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮ 2026 ಸಮಾರಂಭಕ್ಕೆ ನಟ ದೊಡ್ಡಣ್ಣ ಚಾಲನೆ ನೀಡಿದರು. ಆದಿಚುಂಚನಗಿರಿ ಶಾಖಾಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ ಮತ್ತಿತರರು ಇದ್ದರು.