ಚಿಕ್ಕಮಗಳೂರುಕಾನೂನು ಅಂದರೆ ಸಾಮಾಜಿಕ ಬದಲಾವಣೆಯ ಪರಿಣಾಮಕಾರಿ ಸಾಧನ. ಜನ ಸಾಮಾನ್ಯರಿಗೆ ಕಾನೂನು ಸೇವೆ ಸುಲಭ ವಾಗಿ ಸಿಗಬೇಕು. ಈ ಉದ್ದೇಶದಿಂದಲೇ ಅಧಿವಕ್ತಾ ಪರಿಷತ್ ಸ್ಥಾಪನೆಯಾಗಿದೆ ಎಂದು ದ.ಪ್ರಾಂತ ಅಧಿವಕ್ತಾ ಪರಿಷತ್ ಉಪಾಧ್ಯಕ್ಷ ಕೆ.ಆರ್.ಜಗದೀಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಾನೂನು ಅಂದರೆ ಸಾಮಾಜಿಕ ಬದಲಾವಣೆಯ ಪರಿಣಾಮಕಾರಿ ಸಾಧನ. ಜನ ಸಾಮಾನ್ಯರಿಗೆ ಕಾನೂನು ಸೇವೆ ಸುಲಭ ವಾಗಿ ಸಿಗಬೇಕು. ಈ ಉದ್ದೇಶದಿಂದಲೇ ಅಧಿವಕ್ತಾ ಪರಿಷತ್ ಸ್ಥಾಪನೆಯಾಗಿದೆ ಎಂದು ದ.ಪ್ರಾಂತ ಅಧಿವಕ್ತಾ ಪರಿಷತ್ ಉಪಾಧ್ಯಕ್ಷ ಕೆ.ಆರ್.ಜಗದೀಶ್ ಹೇಳಿದರು.
ನಗರದ ವಿಶ್ವವಿದ್ಯಾಲಯದ ಶಾಲಾ ಸಭಾಂಗಣದಲ್ಲಿ ಅಧಿವಕ್ತಾ ಪರಿಷತ್ ಕರ್ನಾಟಕದ ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಅನೇಕ ವಕೀಲರ ಸಂಘಟನೆಗಳಿವೆ. ಆದರೆ ರಾಜಕೀಯೇತರ ಹಾಗೂ ನಿಸ್ವಾರ್ಥ ಸೇವಾ ಮನೋ ಭಾವದ ಇನ್ನೊಂದು ಸಂಸ್ಥೆ ಅಧಿವಕ್ತಾ ಸ್ಥಾಪನೆಯಾಗಿದೆ. ಇದರ ಉದ್ದೇಶ ಈಡೇರಿಕೆಗೆ ದೇಶ ಪ್ರೇಮವುಳ್ಳ ಹಾಗೂ ನಿಸ್ವಾರ್ಥ ಮನೋಭಾವದ ವಕೀಲರು ಮುಂದೆ ಬರಬೇಕು ಎಂದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗುರುಪ್ರಸಾದ್ ರಾಘವೇಂದ್ರ ಕುಲಕರ್ಣಿ, ಪರಿಷತ್ ರಾಜ್ಯ ಕಾರ್ಯದರ್ಶಿ ನಟರಾಜ್, ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ, ಖಜಾಂಚಿ ದೀಪಕ್, ವಕೀಲರಾದ ಸುಧಾಕರ್, ಭರತ್ಕುಮಾರ್, ಎಸ್.ಎಸ್.ವೆಂಕಟೇಶ್, ಎಂ.ಆರ್.ಯತಿರಾಜ್, ಪರೀಕ್ಷಿತ್ಗೌಡ, ದೀಫಕ್, ಡಿ.ಎಸ್.ಮಮತ, ಜಿ.ಎನ್. ರಾಣಿ ಮೊದಲಾದವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.