ತಾಲೂಕಿನ ಶಿವಪುರ ಎಂಬಲ್ಲಿ ಚಿರತೆಯೊಂದು ಮನೆಗೆ ನುಗ್ಗಿ ನಾಯಿಯನ್ನು ಬೇಟೆಯಾಡಲು ಯತ್ನಿಸಿ, ವಿಫಲವಾಗಿ ಹೊರಟ ಘಟನೆಯು ಶುಕ್ರವಾರ ರಾತ್ರಿ ನಡೆದಿದೆ.
ಮಾಲೀಕನ ಸದ್ದುಕೇಳಿ ಕಾಲ್ಕಿತ್ತ ಚಿರತೆ । ಸೆರೆಗೆ ಆಗ್ರಹ
---
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಶಿವಪುರ ಎಂಬಲ್ಲಿ ಚಿರತೆಯೊಂದು ಮನೆಗೆ ನುಗ್ಗಿ ನಾಯಿಯನ್ನು ಬೇಟೆಯಾಡಲು ಯತ್ನಿಸಿ, ವಿಫಲವಾಗಿ ಹೊರಟ ಘಟನೆಯು ಶುಕ್ರವಾರ ರಾತ್ರಿ ನಡೆದಿದೆ.
ಶಿವಪುರದ ಲೋಕೇಶ್ ಎಂಬುವರ ತೋಟದ ಮನೆಯ ಕಾಂಪೌಂಡ್ ಒಳಗೆ ಸುಮಾರು 2.45ರ ವೇಳೆಗೆ ಚಿರತೆ ಬಂದಿದೆ. ಈ ವೇಳೆ ಚಿರತೆಯ ಸದ್ದು ಕೇಳಿ ಲೋಕೇಶ್ ಅವರು ನಾಯಿಯನ್ನು ರಕ್ಷಿಸಲು ಸದ್ದು ಮಾಡಿದ್ದಾರೆ. ಈ ವೇಳೆ ಚಿರತೆಯು ಕಾಲ್ಕಿತ್ತಿದೆ. ನಾಯಿಯನ್ನು ಬೇಟೆಯಾಡದೆ ಹಾಗೆಯೇ ಬಿಟ್ಟು ಕಾಲ್ಕಿತ್ತಿದೆ.
ಈ ಎಲ್ಲ ಸನ್ನಿವೇಶವು ಸಿಸಿಟೀವಿಯಲ್ಲಿ ಸೆರೆಯಾಗಿದೆ.
ಸೆರೆಗೆ ಆಗ್ರಹ:
ಇತ್ತೀಚಿನ ದಿನಗಳಲ್ಲಿ ಚಿರತೆ ದಾಳಿಯು ಹೆಚ್ಚುತ್ತಿದ್ದು, ಕೂಡಲೇ ಅರಣ್ಯ ಇಲಾಖೆಯು ಚಿರತೆಯನ್ನು ಸೆರೆಹಿಡಿಯಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
---
೪ಜಿಪಿಟಿ೪
ಗುಂಡ್ಲುಪೇಟೆ ತಾಲೂಕಿನ ಶಿವಪುರ ಬಳಿಯ ಲೋಕೇಶ್ ತೋಟದ ಮನೆಯಲ್ಲಿ ಚಿರತೆ ಬಂದ ದೃಶ್ಯ.
೪ಜಿಪಿಟಿ೫ಗುಂಡ್ಲುಪೇಟೆ ತಾಲೂಕಿನ ಶಿವಪುರದ ಬಳಿಯ ಲೋಕೇಶ್ ಸೇರಿದ ನಾಯಿ ಹಿಡಿದ ಚಿರತೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.