ಕನ್ನಡಪ್ರಭ ವಾರ್ತೆ ಹನೂರು
ಲೈಟ್ ಬೆಳಕು ನೋಡಿ ಓಡಿ ಹೋದ ಚಿರತೆ:
ರಾತ್ರಿ 11.30ಕ್ಕೆ ಬೂದಿ ಪಡಗ ಹಾಗೂ ಹೊಸದೊಡ್ಡಿ ಈ ಮಾರ್ಗದಲ್ಲಿಯೇ ಅರಣ್ಯ ಪ್ರದೇಶದ ರಸ್ತೆ ಬದಿ ಚಿರತೆ, ಕುಳಿತಿರುವ ಬಗ್ಗೆ ವಾಹನ ಸವಾರರು ಲೈಟ್ ಬೆಳಕಿನಲ್ಲಿ ಚಿರತೆ ಇರುವುದನ್ನು ಮೊಬೈಲ್ನಲ್ಲಿ ಸೆರೆಹಿಡಿಯುತ್ತಿದ್ದಂತೆ ವಾಹನದ ಲೈಟ್ ಬೆಳಕು ಕಂಡು ರಸ್ತೆ ಮಧ್ಯದಲ್ಲಿಯೇ ಚಿರತೆ ಓಡಿ ಹೋಗಿದೆ.ವಾಹನ ಸವಾರರಿಗೆ ಆತಂಕ:
ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಠಿ:
ಚಿರತೆ ಸಾಕು ಪ್ರಾಣಿಗಳನ್ನು ತಿಂದ ಘಟನೆ ಮಾಸುವ ಮುನ್ನವೇ ಅರಣ್ಯದಂಚಿನ ರಸ್ತೆ ಬದಿಯಲ್ಲಿ ಓಡಾಡುವುದನ್ನು ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದರಿಂದ ಗ್ರಾಮಸ್ಥರು ಹಾಗೂ ತೋಟದ ಮನೆಗಳಲ್ಲಿ ವಾಸಿಸುವ ರೈತರು ಭಯಭೀತರಾಗಿದ್ದಾರೆ. ಅರಣ್ಯ ಅಧಿಕಾರಿಗಳು ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಎಚ್ಚರಿಕೆಯ ಸಂದೇಶ, ಕರಪತ್ರ ಮೂಲಕ ಅರಿವು ಮೂಡಿಸಬೇಕೆಂಬುದು ಪ್ರಾಣಿ ಪ್ರಿಯರು ಒತ್ತಾಯವಾಗಿದೆ.ವಾಹನ ಸವಾರರಿಗೆ ಎಚ್ಚರಿಕೆ ಮನವಿ:
ನಿತ್ಯ ಈ ಭಾಗದಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು, ಬೈಕ್ನಲ್ಲಿ ರೈತರು, ಗ್ರಾಮಸ್ಥರು ಹಗಲು, ರಾತ್ರಿ ಎನ್ನದೆ ಓಡಾಡುತ್ತಿದ್ದು, ಈ ರಸ್ತೆಯಲ್ಲಿ ಚಿರತೆ ಕಂಡುಬಂದಿರುವುದರಿಂದ ಗ್ರಾಮಸ್ಥರು, ರೈತರು ಎಚ್ಚರಿಕೆಯಿಂದ ಓಡಾಡಬೇಕು. ಜೊತೆಗೆ ಒಬ್ಬೊಬ್ಬರೇ ಈ ರಸ್ತೆಯಲ್ಲಿ ಸಂಚರಿಸುವ ವೇಳೆಯಲ್ಲಿ ಅನಾಹುತ ಸಂಭವಿಸುವ ಮುನ್ನ ಜಾಗೃತರಾಗಿರುವಂತೆ ಅರಣ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ.