ಹುಬ್ಬಳ್ಳಿ:
ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೇವಂತ ರೆಡ್ಡಿ ಕೈ ಕುಲುಕದೆ ಇದ್ದರೂ ಡಿ.ಕೆ. ಶಿವಕುಮಾರ ಅವರನ್ನು ನಾನೇ ಗೆಲ್ಲಿಸಿದ್ದು ಎಂದು ಹೇಳಿದ್ದರು. ವಾಲ್ಮೀಕಿ ಹಗರಣದ ಹಣವನ್ನು ತೆಲಂಗಾಣಕ್ಕೆ ಹೋಗಿದ್ದು ಇದೀಗ ಅಭಿವೃದ್ಧಿಯಲ್ಲಿ ನಮಗೆ ಸವಾಲು ಹಾಕುತ್ತಿದ್ದಾರೆ. ಇದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಪಾಪರ್ ಆಗಿದೆ. ಖಜಾನೆ ಪೂರ್ಣ ಖಾಲಿಯಾಗಿದೆ. ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮೀಯ ₹ 5000 ಕೋಟಿ ನುಂಗಿ ಹಾಕಿದರು. ಈ ಹಗರಣವನ್ನು ನಾವು ಹೊರಗೆ ತೆಗೆದಿದ್ದೇವೆ. ಆ ಹಣ ಎಲ್ಲಿ ಹೋಯಿತು ಎಂಬ ಪ್ರಶ್ನೆಗೆ ಈ ವರೆಗೂ ಉತ್ತರ ನೀಡುತ್ತಿಲ್ಲ. ಸಿಎಂ ಹೇಗೋ ಅಡ್ಜೆಸ್ಟ್ ಮಾಡಿ ಹಾಕುತ್ತೇನೆ ಎಂದಿದ್ದರು. ಆದರೆ, ಈ ವರೆಗೂ ಮಹಿಳೆಯರ ಖಾತೆಗೆ ಜಮಾ ಮಾಡಿಲ್ಲ. ಹಣಕಾಸು ಇಲಾಖೆ ಅಲೋಕೇಶನ್ ಮಾಡಿದ್ದರೆ ಆ ದುಡ್ಡು ಎಲ್ಲಿ ಹೋಯಿತು. ಆ ಹಣವೂ ತೆಲಂಗಾಣಕ್ಕೆ ಹೋಗಿದೆಯಾ ಎಂದು ಪ್ರಶ್ನಿಸಿದರು.ರಾಜ್ಯ ಆಳುತ್ತಿರುವ ಕೇರಳ:
ವೇದಿಕೆ ಏಕೆ ಹಂಚಿಕೊಂಡಿರಿ:
ರಿಯಲ್ ಸಿಎಂ ವೇಣುಗೋಪಾಲ:
ಮನರೇಗಾ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಕೆಟ್ಟ ಸರ್ಕಾರ ನೋಡಿಲ್ಲ. ಕೊಲೆ, ಅತ್ಯಾಚಾರ ಡ್ರಗ್ಸ್ ಬಗ್ಗೆ ವಿಶೇಷ ಅಧಿವೇಶನ ಕರೆಯಲಿ. ರಾಜ್ಯದ ಯುವಕರ ರಕ್ಷಣೆ ಮಾಡಲಿ. ತಮಗೆ ಕಮಿಷನ್ ಬರುವುದಿಲ್ಲವೆಂದು ಅಧಿವೇಶನ ಕರೆಯಲು ಮುಂದಾಗಿದ್ದಾರೆ. ವಿಶೇಷ ಅಧಿವೇಶನ ಕರೆದರೆ ಅದು ಕಾಂಗ್ರೆಸ್ ಅಧಿವೇಶನ ಆಗುತ್ತದೆ. ಅದಕ್ಕೆ ಹೋಗಬೇಕೋ ಬೇಡವೋ ಎಂಬುದನ್ನು ನಾಯಕರ ಜತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.ವಿವಸ್ತ್ರ ಪ್ರಕರಣದ ತನಿಖೆ ನಡೆಸದೆ ತಮ್ಮ ಪಕ್ಷದ ಪಾಲಿಕೆ ಸದಸ್ಯೆ ಹಾಗೂ ಪೊಲೀಸರಿಗೆ ಡಿಸಿಎಂ ಡಿ.ಕೆ. ಶಿವಕುಮಾರ ಕ್ಲೀನ್ಚಿಟ್ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತೆಯೇ ಬಟ್ಟಿ ಬಿಚ್ಚಿಕೊಂಡಿದ್ದಾಳೆಂದು ಹೇಳಿದ್ದಾರೆ. ಹಾಗಾದರೆ 40 ಪೊಲೀಸ್ ಸಿಬ್ಬಂದಿ ಕತ್ತೆ ಕಾಯುತ್ತಿದ್ದರಾ? ಬಟ್ಟೆ ಬಿಚ್ಚಿಕೊಳ್ಳುವುದನ್ನು ಯಾಕೆ ತಡೆಯಲಿಲ್ಲ. ಪೊಲೀಸರು ದುಶ್ಯಾಸನ ರೀತಿ ವರ್ತಿಸಿದ್ದಾರೆ.