ನರಗುಂದ: ಕನ್ನಡ ನಾಡಿನಲ್ಲಿ ಕನ್ನಡ ಉಳಿಯಬೇಕೆಂದರೆ ಪ್ರತಿಯೊಬ್ಬರಿಂದ ಕನ್ನಡ ಕಟ್ಟುವ ಕೆಲಸ ಆಗಬೇಕೆಂದು ಕಸಾಪ ತಾಲೂಕಾಧ್ಯಕ್ಷ, ಉಪನ್ಯಾಸಕ ಪ್ರೊ. ಬಿ.ಸಿ.ಹನಮಂತಗೌಡ್ರ ಹೇಳಿದರು.
ಪ್ರಾ. ಎಸ್.ಜಿ. ಜಕ್ಕಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಕನ್ನಡ ಉಪನ್ಯಾಸಕ ಪ್ರೊ.ಎಚ್.ಎ. ಮುದಿಯಪ್ಪನವರ ಅವರು, ಕರ್ನಾಟಕದ ಗತವೖಭವ, ಹಿರಿಮೆ-ಗರಿಮೆ, ಇತಿಹಾಸ ಸಂಸ್ಕೃತಿ, ಕನ್ನಡಿಗರ ಜೀವನ ಮೌಲ್ಯಗಳು ಹಾಗೂ ಕರ್ನಾಟಕದ ಏಕೀಕರಣದ ಇತಿಹಾಸ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ವೇಳೆ ಎಸ್.ಬಿ. ಭಜಂತ್ರಿ, ಬಿ.ವೈ. ಹಲಕುರ್ಕಿ, ರವಿ ಭೋಗಾರ, ಮಂಜು ಕರಬಸನ್ನವರ, ನಿರ್ಮಲಾ ಚಂದ್ರತ್ತನವರ, ಪುಷ್ಪಲತಾ ವೀರಾಪೂರ, ರಚನಾ ಪಾಟೀಲ ಸೇರಿದಂತೆ ಮುಂತಾದವರು ಇದ್ದರು. ಎಚ್.ವೈ. ಜೊತೆನ್ನವರ ಸ್ವಾಗತಿಸಿದರು. ಪ್ರೊ. ಹದ್ಲಿ ನಿರೂಪಿಸಿ ವಂದಿಸಿದರು.