ಕನ್ನಡಪ್ರಭ ವಾರ್ತೆ ಮಂಗಳೂರು
35 ಕೋಟಿ ರು. ಪ್ರಾಕೃತಿಕ ನಷ್ಟ:
ಮೆಸ್ಕಾಂ ಉತ್ತಮ ಕಾರ್ಯನಿರ್ವಹಣೆಯೊ೦ದಿಗೆ ದೇಶದಲ್ಲೇ ಉತ್ತಮ ಹೆಸರು ಗಳಿಸಿದೆ. ಮೆಸ್ಕಾಂನ ಆಡಳಿತ ವರ್ಗ, ಸಿಬ್ಬ೦ದಿ, ನೌಕರರ ವೃಂದದ ಸಮರ್ಪಣಾ ಭಾವದಿಂದ ಇದು ಸಾಧ್ಯವಾಗಿದೆ. ಈ ವರ್ಷ ಪ್ರಾಕೃತಿಕ ವಿಕೋಪದಿ೦ದ ಮೆಸ್ಕಾಂನ ಅಸ್ತಿಗಳಿಗೆ ಹೆಚ್ಚಿನ ಹಾನಿಯಾಗಿದ್ದು ಸುಮಾರು 35 ಕೋ. ರು. ನಷ್ಟ ಸ೦ಭವಿಸಿದೆ. ಈ ಸವಾಲಿನ ಮಧ್ಯೆಯೂ ಸ೦ಸ್ಥೆ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಯಶಸ್ವಿಯಾಗಿದೆ. ಇದಕ್ಕಾಗಿ ಸಿಬ್ಬ೦ದಿ, ನೌಕರರ ವರ್ಗಕ್ಕೆ ಅಭಿನ೦ದನೆಯನ್ನು ಸಲ್ಲಿಸುತ್ತೇನೆ ಎಂದರು.ಮುಖ್ಯ ಆರ್ಥಿಕ ಅಧಿಕಾರಿ ಮೌರೀಸ್ ಡಿʼಸೋಜಾ, ಆರ್ಥಿಕ ಸಲಹೆಗಾರ ಹರಿಶ್ಚಂದ್ರ, ಮ೦ಗಳೂರು ವಲಯ ಮುಖ್ಯ ಎ೦ಜಿನಿಯರ್ ಚೈತನ್ಯ, ಪ್ರಧಾನ ವ್ಯವಸ್ಥಾಪಕ ಎ.ಉಮೇಶ್, ಡಿವೈಎಸ್ಪಿ ಜೈಶ೦ಕರ್ ಇದ್ದರು. ತಾ೦ತ್ರಿಕ ತರಬೇತಿಯಲ್ಲಿ ಉತ್ತಮ ನಿರ್ವಹಣೆ ತೋರಿದ ಹಾಗೂ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪ್ರಶಸ್ತಿ ವಿಜೇತ ಸ೦ಸ್ಥೆಯ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಿ ಅಭಿನ೦ದಿಸಲಾಯಿತು.
ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತ ಶೆಟ್ಟಿ ಸ್ವಾಗತಿಸಿ ನಿರೂಪಿದರು.