ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ
ಜಗತ್ತು ಇಂದು ಎದುರಿಸುತ್ತಿರುವ ನಾನಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರವು ಬಸವಣ್ಣನವರ ತತ್ವ-ಸಂದೇಶಗಳ ಪಾಲನೆಯಲ್ಲಿದೆ. ಬಸವಣ್ಣನವರು ತೋರಿದ ಮಾರ್ಗದಲ್ಲಿ ನಡೆಯುವ ಮೂಲಕ ನಾವು ಅವರು ಕಂಡ ಕಲ್ಯಾಣ ರಾಷ್ಟ್ರದ ಸಮಾನತೆಯ ಕನಸನ್ನು ಸಾಕಾರಗೊಳಿಸೋಣ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಸೋಮವಾರ ಪಟ್ಟಣದ ತಾಲೂಕಾಡಳಿತ ಸೌಧದಲ್ಲಿ ಆಯೋಜಿಸಿದ ಬಸವ ಜಯಂತಿ-2026ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಬಸವಣ್ಣನವರ ತತ್ವಗಳು ಕೇವಲ ಒಂದೇ ಜಾತಿಗೆ ಸೀಮಿತವಾಗದೇ ಅವು ಇಡೀ ವಿಶ್ವಕ್ಕೆ ಅನ್ವಯಿಸುತ್ತವೆ. 21ನೇ ಶತಮಾನದಲ್ಲಿ ಒಂದೆಡೆ ಆವಿಷ್ಕಾರ, ಸಂಶೋಧನೆಗಳ ಮಧ್ಯೆ ಮಾನವ ಮಾತ್ರ ಅಭಿವೃದ್ಧಿ ಹೊಂದುವ ಬದಲು ದುಷ್ಟಶಕ್ತಿಗಳಿಂದ ಜರ್ಜರಿತನಾಗಿ, ರಾಕ್ಷಸನಾಗುತ್ತಿದ್ದಾನೆ. ಇದು ಸರಿಯಾದ ಬೆಳವಣಿಗೆಯಲ್ಲ. ಮಾನವ ದಾನವನಾಗುವ ಬದಲು ಮಹಾದೇವನಾಗಬೇಕು, ಮಾನವನನ್ನು ಮಹಾದೇವನಾಗಿ ಪರಿವರ್ತಿಸುವ ಶಕ್ತಿಯು ಬಸವಣ್ಣನವರ ಸಂದೇಶಗಳಲ್ಲಿವೆ. ಅವರ ತತ್ವಗಳು ನಮಗೆ ಸದಾ ಪ್ರೇರಣಾದಾಯಕವಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಮಾತನಾಡಿ, ಬಸವಣ್ಣನವರ ಹಾಗೆಯೇ ಧರ್ಮ ಭೋಧನೆಯನ್ನು ಅತ್ಯಂತ ಸರಳವಾಗಿ ಅರ್ಥವಾಗುವ ಹಾಗೇ ಯಾರೂ ಮಾಡಲಿಲ್ಲ. ಅವರ ಆಚಾರ-ವಿಚಾರಗಳು ಕೇವಲ ಜಯಂತಿಗೆ ಮಾತ್ರ ಸೀಮಿತವಾಗಿರಬಾರದು. ಇಂದು ಪ್ರತಿಯೊಬ್ಬರೂ ಧರ್ಮ, ಜಾತಿ ಮತ್ತು ಭಕ್ತಿಯನ್ನು ತೋರಿಕೆಗೆ ಮಾತ್ರ ಮಾಡುತ್ತಿದ್ದೆವೆ. ಬಸವಣ್ಣನವರು ಕಾಯಕಕ್ಕೆ ಮೊದಲ ಆದ್ಯತೆ ನೀಡಿ, ಕಾಯಕ ಮಾಡು ಬಂದ ಫಲವನ್ನು ಬಡವರಲ್ಲಿ ಶೋಷಿತರಲ್ಲಿ ಹಂಚಿಕೊಂಡು ಬದುಕು ಎಂಬ ಮಾದರಿ ಶ್ರೇಷ್ಠ ಮಾರ್ಗವನ್ನು ತೋರಿದರು ಎಂದರು.
ಭವ್ಯ ಮೆರವಣಿಗೆ:
ಬಸವ ಪಥ ಬಿಡುಗಡೆ:
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಲಿಂಗಾಯತ ಪ್ರಮುಖರಾದ ರವಿ ತೋರಣಗಟ್ಟಿ, ಶಿವು ದೇಸಾಯಸ್ವಾಮಿ, ಬಸವರಾಜ್ ಬೆಂಡಿಗೇರಿಮಠ, ಶಿವು ಶೆಟ್ಟರ್, ಲಿಂಗರಾಜ್ ಹಿರೇಮಠ, ಬಸವರಾಜ್ ಗಾಣಿಗೇರ್ ಹಾಗೂ ಇತರರು ಇದ್ದರು. ರಮೇಶ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.