ಕನ್ನಡಪ್ರಭ ವಾರ್ತೆ ಹೊನ್ನಾಳಿ
ಅರಣ್ಯ ಇಲಾಖೆ ವತಿಯಿಂದ ಶುಕ್ರವಾರ ಮಾದನಬಾವಿ ಸಮೀಪದ ಟ್ರೀ ಪಾರ್ಕ್ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು
ಪ್ರಸ್ತುತ ದಿನಗಳಲ್ಲಿ ಶರವೇಗದಲ್ಲಿ ಬೇಳೆಯುತ್ತಿರುರ ನಗರಗಳು, ರಸ್ತೆ ಇತರೆ ಅಭಿವೃದ್ದಿ ಕಾರಣಗಳಿಂದಾಗಿ ಕಾಡು ನಾಶವಾಗುತ್ತಿದೆ ಇನ್ನೊಂದೆಡೆ ಸಾಕಷ್ಟು ರೀತಿಯಲ್ಲಿ ರಾಸಾಯನಿಕ ವಸ್ತುಗಳು, ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರದ ಮೇಲೆ ನಿರಂತರ ದುಷ್ಪರಿಣಾಮ ಬೀರುತ್ತಿರುವ ಕಾರಣ ಜಾಗತೀಕ ತಾಪಮಾನ ಏರಿಕೆ,ಪರಿಸರ ಮಾಲಿನ್ಯದಿಂದ ಮನುಕುಲ ತೊಂದರೆ ಅನುಭವಿಸುವಂತಾಗಿದ್ದು, ಇನ್ನು ಮುಂದಾದರೂ ಮನುಷ್ಯ ಎಚ್ಚೇತ್ತುಕೊಂಡು ಪರಿಸರ ಕಾಳಜಿ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ತಾಲೂಕಿನ ಮಾದನಬಾವಿ ಸಮೀಪ ಆರಣ್ಯ ಇಲಾಖೆಯವರು ಟ್ರೀ ಪಾರ್ಕ ಮಾಡಿ ಇಲ್ಲಿ ಅನೇಕ ವಿವಿಧ ಮರಗಿಡಗಳನ್ನು ಬೆಳೆಸಿದ್ದು, ಪಾರ್ಕ್ ವ್ಯವಸ್ಥೆ ಮಾಡಿ ಇಲ್ಲಿ ಮಕ್ಕಳು ಆಟವಾಡಲು ಅನೇಕ ರೀತಿಯ ವ್ಯವಸ್ಥೆ ಮಾಡಿದ್ದಾರೆ. ಆದರೆ ಇದು ಇನ್ನೂ ಕೂಡ ಅಧಿಕೃತವಾಗಿ ಉದ್ಘಾಟನೆಯಾಗದಿರುವುದರಿಂದ ಸಾರ್ವಜನಿಕರಿಗೆ ಪ್ರವೇಶ ನೀಡುವಲ್ಲಿ ಅಧಿಕಾರಿಗಳು ಹಿಂದೇಟು ಹಾಕಿದ್ದು ,ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಶಾಲಾ ಮಕ್ಕಳು,ಪ್ರಯಾಣಿಕರು, ಸಾರ್ವ ಜನಿಕರು ಈ ಮಾರ್ಗವಾಗಿ ಹೋಗುವಾಗ. ಈ ಟ್ರಿ ಪಾರ್ಕ ಒಳಗಡೆಗೆ ಬಂದು ಊಟ ಉಪಚಾರ,ವಿಶ್ರಾಂತಿ, ಅಥವಾ ವಾಯು ವಿಹಾರಕ್ಕೆ ಅನುಮಾಡಿಕೊಡುವ ಬಗ್ಗೆ ವ್ಯವಸ್ಥೆ ಕಲ್ಪಿಸಲಾಗುವುದು, ಒಟ್ಟಾರೆಯಾಗಿ ಈ ಟ್ರೀ ಪಾರ್ಕ್ 15 ಹೆಕ್ಟೇರ್ ಪ್ರದೇಶದಲ್ಲಿದ್ದು, ಉತ್ತಮ ಪರಿಸರವನ್ನು ಹೊಂದಿದೆ ಇದರ ಸದುಪಯೋಗ ಪಡೆಯೋಣ ಎಂದು ಹೇಳಿದರು.
ಹೊನ್ನಾಳಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕಿಶೋರ್, ಸಾಮಾಜಿಕ ಅರಣ್ಯಾಧಿಕಾರಿ ಹನುಮಂತ ನಾಯ್ಕ, ಹರೀಶ್, ನಾಯ್ಕ, ಸಿಬ್ಬಂದಿಗಳಾ ಅಂಜಲಿ, ಆಶಾ, ನಾಗಲಿಂಗಪ್ಪ, ಸಂತೋಷ್, ತಾಲೂಕು ಪಂಚಾಯಿತಿ ತಾಂತ್ರಿಕ ಸಂಯೋಜಕ ಚನ್ನಪ್ಪ,ಉಪನ್ಯಾಸಕ ಕರಿಬಸಪ್ಪ,ಮುರಾರ್ಜಿ ವಸತಿ ಶಾಲೆಯ ಶಿಕ್ಷಕರು,ವಿದ್ಯಾರ್ಥಿಗಳು ಇದ್ದರು.