ಧಾರವಾಡ: ಇಲ್ಲಿಯ ವಿವೇಕ ಗ್ರಾಮೀಣ ಜೀವನಾಧಾರ ತರಬೇತಿ ಕೇಂದ್ರ ಹಾಗೂ ಶಾರದಾ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಸಂಸ್ಥೆಯ ಮಾಳಮಡ್ಡಿಯ ಕಚೇರಿಯಲ್ಲಿ ಶುಕ್ರವಾರ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ಹಿಂಜರಿಕೆ ಸ್ವಭಾವ ದೂರವಿಡಬೇಕು. ಈ ನಿಟ್ಟಿನಲ್ಲಿ ಮಹಿಳೆಯರ ಆತ್ಮವಿಶ್ವಾಸ ವೃದ್ಧಿಯಾಗಬೇಕು. ಮಹಿಳೆಯರು ಯಾವುದೇ ಒಂದು ಕಾರ್ಯಕ್ಕೆ ಸೀಮಿತವಾಗದೆ, ವಿಶಾಲ ಚಿಂತನೆಯತ್ತ ತೆರೆದುಕೊಳ್ಳಬೇಕು. ಸಾಧನೆಗೆ ವಿವಾಹ ಎಂಬುದು ಅಡ್ಡಿಯಾಗುವುದಿಲ್ಲ, ಸಾಧಿಸುವ ಛಲ ನಮ್ಮಲ್ಲಿರಬೇಕು. ಸಮಸ್ಯೆ ಮೀರಿ ಬದುಕುವ ಸಾಮರ್ಥ್ಯ ಎಲ್ಲರಲ್ಲೂ ಇದೆ. ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಆತ್ಮಸ್ಥೈರ್ಯ ವೃದ್ಧಿಸಿಕೊಂಡು ದಾಪುಗಾಲು ಇರಿಸಬೇಕಾಗಿರುವುದು ಇಂದಿನ ಅನಿವಾರ್ಯತೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಪ್ರಾದೇಶಿಕ ಮುಖ್ಯಸ್ಥ ಜಯಂತ ಕೆ. ಎಸ್. ಮಾತನಾಡಿ, ಬದಲಾದ ಸಂದರ್ಭಕ್ಕೆ ತಕ್ಕಂತೆ ಬದಲಾವಣೆಯೊಂದಿಗೆ ಬದುಕುವುದೂ ಒಂದು ಕೌಶಲ್ಯ. ಕೌಶಲ್ಯಗಳ ಅಳವಡಿಕೆಯಿಂದ ಪ್ರಾವಿಣ್ಯತೆಯು ಒಡಮೂಡುತ್ತದೆ. ಪ್ರಾವಿಣ್ಯತೆಯು ಮಹಿಳೆಯರು ಸ್ವಾವಲಂಬನೆಯ ಬದುಕನ್ನು ಕಟ್ಟಿ ಕೊಡುತ್ತದೆ ಎಂದರು.ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜ್ ನ ನಿವೃತ್ತ ಉಪನ್ಯಾಸಕ ಡಾ.ಗೋಪಾಲಕೃಷ್ಣ ಕಮಲಾಪುರ ಮಾತನಾಡಿದರು. ವಿವೇಕ ಗ್ರಾಮೀಣ ಜೀವನಾಧಾರ ತರಬೇತಿ ಕೇಂದ್ರದ ಸಿಬ್ಬಂದಿ ಇದ್ದರು.