ಕನ್ನಡಪ್ರಭ ವಾರ್ತೆ ಸೊರಬ
ಪಟ್ಟಣದ ರಂಗಮಂದಿರದಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಸಮಿತಿ ಮತ್ತು ತಾಲೂಕು ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ 18ನೇಯ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.
ಜಗತ್ತಿನ ಯಾವುದೇ ಭಾಷೆ ಮನುಷ್ಯನ ಬದುಕನ್ನು ರೂಪಿಸಬೇಕು. ಜೀವನಕ್ಕೊಂದು ಆಧಾರವಲ್ಲದ ಸಾಹಿತ್ಯ, ಭಾಷೆ ಅಳಿವಿನ ಅಂಚಿಗೆ ಸರಿಯುತ್ತದೆ. ಅಂತರ ರಾಷ್ಟ್ರೀಯ ಕಂಪನಿ, ರಾಷ್ಟ್ರೀಕೃತ ಬ್ಯಾಂಕ್, ಕಂಪನಿಗಳಲ್ಲಿ ಕನ್ನಡಿಗರಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗದಂತಾಗಿದೆ. ಕನ್ನಡ ಭಾಷೆಗೆ ಬಂದಿರುವ ಸ್ಥಿತಿಯನ್ನು ಅರಿಯಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಆದ್ದರಿಂದ ಕನ್ನಡ ಉಳಿಸುವುದಾದರೆ ಮೊದಲು ಉದ್ಯೋಗದಲ್ಲಿ ಅವಕಾಶ ಸಿಗಬೇಕು. ಇದಕ್ಕಾಗಿ ಹೋರಾಟಕ್ಕೆ ಸಜ್ಜುಗೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದರು.ಜಿಲ್ಲೆಯ ಬಹಳಷ್ಟು ಹಳ್ಳಿಗಳಲ್ಲಿ ಶಿಕ್ಷಕರ ಕೊರತೆ ಎದುರಿಸುವಂತಾಗಿದೆ. ಇದರ ಜೊತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ, ವಿವಿಧ ಇಲಾಖೆಗಳಲ್ಲಿ ನೌಕರರಿಲ್ಲ. ನೇಮಕಾತಿಗಳು ನಿರಂತರವಾಗಿ ಸಾಗುತ್ತಲೇ ಇವೆ. ಆದರೆ ನಗರದ ಮೇಲಿನ ವ್ಯಾಮೋಹದಿಂದ ಹಳ್ಳಿಗಳು ಬಲಿಪಶುಗಳಾಗಿವೆ. ಸರ್ಕಾರ ನೇಮಕಾತಿಯ ವಿಚಾರದಲ್ಲಿ ನೌಕರರಿಗೆ ತೋರಿಸುವ ಸ್ಥಳಗಳ ಆಯ್ಕೆ ತಕ್ಷಣವೇ ನಿಲ್ಲಿಸಬೇಕು. ಮೊದಲು ಗ್ರಾಮೀಣ ಪ್ರದೇಶಗಳಿಗೆ ಹುದ್ಧೆಗಳನ್ನು ತುಂಬಬೇಕು. ಇಲ್ಲವಾದಲ್ಲಿ ರಾಜ್ಯದ ಬಹುತೇಕ ಕನ್ನಡ ಶಾಲೆಗಳು ಮುಚ್ಚಿಹೋಗುವ ಪರಿಸ್ಥಿತಿ ನಿರ್ಮಾಣವಾಗುವ ದುರಂತತೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮ್ಮೇಳನ ಉದ್ಘಾಟಿಸಿದ ಸೊರಬ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ವಿದ್ಯಾರ್ಥಿನಿ ಆರ್.ವೈಷ್ಣವಿ ಮಾತನಾಡಿ, ಮಕ್ಕಳಲ್ಲಿ ಸೃಜನಶೀಲತೆ ಬೆಳೆಯಬೇಕಾದರೆ ಸಾಹಿತಿಗಳ ಮತ್ತು ಕವಿಗಳ, ವೈಚಾರಿಕ ಪುಸ್ತಕಗಳನ್ನು ಓದುವ ರೂಢಿ ಬೆಳೆಸಿಕೊಳ್ಳಬೇಕು. ಇದರಿಂದ ಸಾಹಿತ್ಯಾಭಿರುಚಿ ಹೆಚ್ಚುವುದರ ಜೊತೆಗೆ ಜ್ಞಾನ ಸಂಪತ್ತು ಗಳಿಸಬಹುದು. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಪ್ರೇರಣೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸೊರಬ ನವಚೇತನ ಬುದ್ಧಿಮಾಂದ್ಯ ಶಾಲಾ ಮಕ್ಕಳು ಮತ್ತು ಆನವಟ್ಟಿ ಬಾಲಾಜಿ ನೃತ್ಯ ಶಾಲಾ ಮಕ್ಕಳಿಂದ ನೃತ್ಯ ವೈಭವ ನೆರವೇರಿತು.
- - -
ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರ ಪ್ರಾರಂಭಿಸಲು ಉದ್ದೇಶಿಸಿರುವ ಪಬ್ಲಿಕ್ ಶಾಲೆಯನ್ನು ಸಾಗರ ತಾಲೂಕಿನ ಅಣೆಕಟ್ಟು ಹಿನ್ನೀರಿನಿಂದ ಮತ್ತು ಮಳೆಗಾಲದಲ್ಲಿ ಸೊರಬ ತಾಲೂಕಿನ ದಂಡಾವತಿ, ವರದಾ ನದಿ ಪ್ರವಾಹದಿಂದ ನದಿ ದಾಟಿ ನಗರ ಮತ್ತು ಹೋಬಳಿ ಪ್ರದೇಶಗಳಿಗೆ ತೆರಳಲು ಸಾಧ್ಯವಿಲ್ಲದೇ, ದ್ವೀಪವಾಗುವ ಗ್ರಾಮಗಳಿಂದ ಆರಂಭಿಸುವುದರಿಂದ ಅಲ್ಲಿನ ಮಕ್ಕಳಿಗೆ ಅನುಕೂಲವಾಗುತ್ತದೆ. ಹಳ್ಳಿಗಳಿಂದ ಯೋಜನೆಗಳು ಪ್ರಾರಂಭವಾಗುವುದರಿಂದ ಗಾಂಧೀಜಿ ಕಂಡ ಕನಸ್ಸು ನನಸಾಗುತ್ತದೆ
- - - -05ಕೆಪಿಸೊರಬ01: ಸೊರಬ ಪಟ್ಟಣದಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಜಿಲ್ಲಾ 18ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿದ್ಯಾರ್ಥಿನಿ ಆರ್. ವೈಷ್ಣವಿ ಉದ್ಘಾಟಿಸಿದರು.