ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ನೀರು ಹರಿಸದೆ ಸುಗ್ರೀವಾಜ್ಞೆ ಜಾರಿಗೊಳಿಸಿದ ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನಿಜವಾದ ರೈತ- ಜನಪರ ನಾಯಕ. ಕಾವೇರಿ ನೀರು ಹರಿಸುವ ನಿರ್ಧಾರವನ್ನು ವಿರೋಧಿಸಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಂಬರೀಶ್ ರೈತಪರ ಬದ್ಧತೆಯಿದ್ದ ನಾಯಕ. ಅಂತಹದೊಂದು ಶಕ್ತಿಯನ್ನು ಸಂಸದರು ಪ್ರದರ್ಶಿಸುತ್ತಿಲ್ಲ. ಈಗಿರುವ ಸಂಸದರು ಸೋಗಲಾಡಿಗಳು, ನರಸತ್ತವರು. ಅವರಿಗೆ ಶಕ್ತಿ ಇಲ್ಲ. ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬನ್ನಿ. ಕಾವೇರಿಗೆ ಅನ್ಯಾಯವಾಗಿದ್ದರೂ ಬಾಯಿ ಮುಚ್ಚಿಕೊಂಡಿರುವ ಮಂತ್ರಿಗಳಿಗೆ, ಸಂಸದರಿಗೆ ತಾಕತ್ತು, ಧಮ್ಮು ಇಲ್ಲ ಎಂದು ಖಾರವಾಗಿ ಹೇಳಿದರು.
ಮೇಕೆದಾಟು ಅಣೆಕಟ್ಟು, ಮಹದಾಯಿ ನೀರು ಹಂಚಿಕೆ, ಕಳಸಾ-ಬಂಡೂರಿ, ಕಾವೇರಿ ವಿಷಯವಾಗಿ ಕಳೆದ ೩೦-೪೦ ವರ್ಷಗಳಿಂದ ಕೇಂದ್ರ ಸರ್ಕಾರ ನಿರಂತರವಾಗಿ ಕರ್ನಾಟಕವನ್ನು ಕಡೆಗಣಿಸಿಕೊಂಡೇ ಬಂದಿದೆ. ಭಾರತದ ಭೂಪಟದಲ್ಲಿ ಕರ್ನಾಟಕ ಇಲ್ಲವೇ. ರಾಜ್ಯಕ್ಕೆ ಯಾಕೆ ಈ ಅನ್ಯಾಯ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.ಕಾವೇರಿ ನೀರು ನಿರ್ವಹಣಾ ಸಮಿತಿ, ನೀರು ನಿರ್ವಹಣಾ ಪ್ರಾಧಿಕಾರಗಳು ತಮಿಳುನಾಡಿನ ಪರವಾಗಿಯೇ ವಕಾಲತ್ತು ವಹಿಸುತ್ತಿವೆ. ಕರ್ನಾಟಕದ ನೀರಿನ ಪರಿಸ್ಥಿತಿ ಗೊತ್ತಿಲ್ಲದಿದ್ದರೆ ತಜ್ಞರ ತಂಡವನ್ನು ಕಳುಹಿಸಿ ಜಲಾಶಯಗಳಲ್ಲಿನ ನೀರಿನ ಸಂಗ್ರಹದ ಬಗ್ಗೆ ಪರಾಮರ್ಶೆ ನಡೆಸಲಿ. ಅದನ್ನು ಬಿಟ್ಟು ಏಕಾಏಕಿ ೧೦ ಟಿಎಂಸಿ, ೧೬ ಟಿಎಂಸಿ ನೀರು ಹರಿಸುವಂತೆ ಆದೇಶಿಸುವುದಕ್ಕೆ ಕರ್ನಾಟಕದ ರೈತರನ್ನು ಗುಲಾಮರೆಂದುಕೊಂಡಿದ್ದೀರಾ. ಇಲ್ಲಿನ ರೈತರಿಗೂ ಬದುಕಿದೆ ಎನ್ನುವುದನ್ನು ಮರೆತು ಆದೇಶ ಮಾಡುವುದು ಅಮಾನವೀಯ ಎಂದು ಕಿಡಿಕಾರಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಎಚ್.ಶಿವರಾಮೇಗೌಡ ಮಾತನಾಡಿ, ನಾವು ಒಕ್ಕೂಟದ ವ್ಯವಸ್ಥೆಯಲ್ಲಿ ಇದ್ದೇವೋ, ಇಲ್ಲವೋ ಎಂಬ ಬಗ್ಗೆ ಅನುಮಾನ ಮೂಡುತ್ತಿದೆ. ನಮ್ಮ ಹೊಟ್ಟೆಗೆ ಹಿಟ್ಟಿಲ್ಲ, ಬೇರೆಯವರ ಜುಟ್ಟಿಗೆ ಮಲ್ಲಿಗೆ ಹೂ ಮುಡಿಸುವಂತಾಗಿದೆ. ರಾಜ್ಯಸರ್ಕಾರ ಕೆರೆ- ಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡಲಿ. ಸಂಸದರು ಲೋಕಸಭೆಯಲ್ಲಿ ದನಿ ಎತ್ತಬೇಕು. ಜನರ ಪರವಾಗಿ ನಿಲ್ಲಬೇಕು. ನಮಗಾಗಿರುವ ಅನ್ಯಾಯದ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸುವಂತೆ ಆಗ್ರಹಿಸಿದರು.