ಕನ್ನಡಪ್ರಭ ವಾರ್ತೆ, ಬಸವಕಲ್ಯಾಣ
ಅವರು ಬಸವ ಧರ್ಮಪೀಠ ಬಸವಕಲ್ಯಾಣದಲ್ಲಿ ಹಮ್ಮಿಕೊಂಡಿರುವ 23ನೇ ಕಲ್ಯಾಣ ಪರ್ವದ 2ನೇ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮ ಎಂದು ಬ್ರಿಟೀಷರ ಕಾಲದಿಂದಲೂ ಅನೇಕ ಸರ್ಕಾರಿ ದಾಖಲೆಗಳಲ್ಲಿ ನಮೂದಿಸಲಾಗಿದೆ. ಸ್ವತಂತ್ರ ಧರ್ಮವನ್ನಾಗಿಸಿ ಪಡೆಯುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ. ಸಮಾಜದ ಜನರು ಜಾಗೃತರಾಗಿ ತೀವ್ರ ಹೋರಾಟವನ್ನು ಮಾಡಬೇಕಾಗಿದೆ ಎಂದರು.
ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ಸ್ವತಂತ್ರ ಧರ್ಮದ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದ ಅವರು ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದು ಬಹಳ ಅವಶ್ಯಕವಾಗಿದೆ ಎಂದು ನುಡಿದರು.ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದು ಬಹಳ ಅವಶ್ಯಕವಾಗಿದೆ. ನಾವು ಅನೇಕ ಬಾರಿ ಈ ಕುರಿತು ಸರ್ಕಾರದ ಗಮನ ಸೆಳೆದಿದ್ದೇವೆ. ಹೀಗಾಗಿ ಈ ಕುರಿತು ಮತ್ತೊಮ್ಮೆ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು ಅದಾಗ್ಯೂ ತಪ್ಪಿದಲ್ಲಿ ಹೋರಾಟ ಮಾಡಲಾಗುವುದು ಎಂದು ಹುಲಸೂರಿನ ಡಾ.ಶಿವಾನಂದ ಸ್ವಾಮೀಜಿಗಳು ಹೇಳಿದರು.
ಡಾ.ಗಂಗಾ ಮಾತಾಜಿ ಸಾನಿಧ್ಯ ವಹಿಸಿದ್ದರು. ಭಾಲ್ಕಿ ಹಿರೇಮಠದ ಗುರು ಬಸವಪಟ್ಟದೇವರು, ಗುರುದ್ವಾರ ಪ್ರಬಂಧಕ ಕಮಿಟಿಯ ವ್ಯವಸ್ಥಾಪಕ ಸರ್ದಾರ್ ದರ್ಬಾರಾ ಸಿಂಗ್, ಶಿವರಾಜ ನರಶೆಟ್ಟಿ, ಕುಶಾಲ ಪಾಟೀಲ್ ಗಾದಗಿ, ಮಡಿವಾಳಪ್ಪ ಮಂಗಲಗಿ, ರವಿ ಕೊಳಕುರ ಹಾಗೂ ರಾಜಶ್ರೀ ಖೂಬಾ ಉಪಸ್ಥಿತರಿದ್ದರು.
ಕನ್ನಡಪ್ರಭ ವಾರ್ತೆ, ಬಸವಕಲ್ಯಾಣ
ಬಸವ ಧರ್ಮ ಪೀಠ ಬಸವಕಲ್ಯಾಣದಲ್ಲಿ ಹಮ್ಮಿಕೊಂಡಿರುವ 23ನೇ ಕಲ್ಯಾಣ ಪರ್ವದ ಮಹಿಳಾ ಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಚಾರ ಸದಾಚಾರಗಳ ಬಗ್ಗೆ ಉತ್ತಮವಾದ ನುಡಿಗಳು ಶರಣರು ನಮಗೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಲಿಂಗ ಭೇದ, ಜಾತಿ ಬೇಧಗಳನ್ನು ಮಾಡಬಾರದು ಎಂದು ಏಕದೇವ ನಿಷ್ಠೆ, ಕಾಯಕ ದಾಸೋಹ ನಿಷ್ಠೆಯನ್ನು ಬಸವಣ್ಣನವರು ಬೋಧಿಸಿದ್ದಾರೆ ಅದರಂತೆ ಇಂದಿನ ಸಮಾಜ ನಡೆಯಬೇಕು ಎಂದರು.ಕಲಬುರಗಿಯ ಹಿರಿಯ ಸಾಹಿತಿ ಮೀನಾಕ್ಷಿ ಬಾಳಿ ಮಾತನಾಡಿ, ಜನರು ಧರ್ಮದ ಕಡೆಗೆ ಬಾರದಿದ್ದಾಗ ಧರ್ಮವನ್ನು ಮನೆ ಮನಗಳ ಬಾಗಿಲಿಗೆ ಕೊಂಡೊಯ್ಯುವ ಕಾರ್ಯ ಕ್ರಮವನ್ನು ಲಿಂ. ಜಗದ್ಗುರು ಮಾತೆ ಮಹಾದೇವಿ ಮತ್ತು ಜಗದ್ಗುರು ಲಿಂಗಾನಂದ ಸ್ವಾಮೀಜಿಯವರು ಮಾಡಿದ್ದಾರೆ ಎಂದು ತಿಳಿಸಿದ ಅವರು, ಬಸವಣ್ಣನವರ ವ್ಯಕ್ತಿತ್ವವನ್ನು ತೋರಿಸಿಕೊಟ್ಟವರು ಲಿಂಗಾನಂದ ಸ್ವಾಮೀಜಿ ಮತ್ತು ಜಗದ್ಗುರು ಮಾತೆ ಮಹಾದೇವಿ ಎಂದರು.
ಡಾ.ಗಂಗಾ ಮಾತಾಜಿ ಸಾನಿಧ್ಯ ವಹಿಸಿದ್ದರು. ಡಾ.ಗಂಗಾಂಬಿಕ ಅಕ್ಕ, ಗೀತಾ ಖಂಡ್ರೆ, ಪ್ರೊ.ವೀಣಾ ಬಿರಾದರ ಹುಬ್ಬಳ್ಳಿ, ಸೋನಾಲ್ ಸಿಂಗ್, ಶಕುಂತಲಾ ಬೆಲ್ದಾಳೆ, ನಿರ್ಮಲಾ ಶಿವಣಕರ, ವಿಜಯಲಕ್ಷ್ಮಿ ಗಡ್ಡೆ, ಡಾ.ಜಯಶ್ರೀ ಬಶೆಟ್ಟಿ, ರಾಜಶ್ರೀ ಖೂಬಾ, ಸುವರ್ಣಾ ಚಿಮಕೋಡೆ ಮತ್ತಿತರರು ಅತಿಥಿಗಳಾಗಿ ಪಾಲ್ಗೊಂಡಿದ್ದರು.