ಯುವಪೀಳಿಗೆ ಪರಿಶ್ರಮದಿಂದ ಸಾಧನೆ ತೋರಲಿ: ವಚನಾನಂದ ಶ್ರೀ

KannadaprabhaNewsNetwork |  
Published : Jun 01, 2025, 11:54 PM IST
ಹೊನ್ನಾಳಿ ಫೋಟೋ 1ಎಚ್.ಎಲ್.ಐ3.ಅವರು ಭಾನುವಾರ ಹಿರೇಕಲ್ಮಠದ ಸಮುದಾಯ ಭವನದಲ್ಲಿ ತಾಲೂಕು ವೀರಶೈನ ಲಿಂಗಾಯಿತ ಪಂಚಮಸಾಲಿ ಸಮಾಜ ತಾಲೂಕು ಘಟಕದವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಉದ್ಘಾಟಿಸಿದರು, ಪರಿಹರ ಪೀಠದ ಜಗದ್ಗುರು ನಚನಾನಂದ ಮಹಾಸ್ವಾಮಿಜಿ ದಿವ್ಯ ಸಾನ್ನಿಧ್ಯವಹಿಸಿದ್ದರು. | Kannada Prabha

ಸಾರಾಂಶ

ಪ್ರತಿಭೆ ಇತ್ತು ಎಂದಾದರೆ ಇದಕ್ಕೆ ಸೂಕ್ತ ಪ್ರೋತ್ಸಾಹ, ಸಿಕ್ಕರೆ ಯಾವುದೇ ಮೀಸಲಾತಿ ಸಹಾಯವಿಲ್ಲದೇ ಸಾಧನೆ ಮಾಡಬಹುದಾಗಿದೆ. ಸತತ ಪ್ರಯತ್ನ, ಕಠಿಣ ಪರಿಶ್ರಮಗಳ ಮೂಲಕ ಯುವಪೀಳಿಗೆ ಸಾಧನೆಗಳನ್ನು ಮಾಡಬೇಕು ಎಂದು ಹರಿಹರ ಪೀಠದ ವೀರಶೈವ ಲಿಂಗಾಯಿತ ಪಂಚಮಸಾಲಿ ಜಗದ್ಗುರು ವಚನಾನಂದ ಮಹಾಸ್ವಾಮೀಜಿ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪ್ರತಿಭೆ ಇತ್ತು ಎಂದಾದರೆ ಇದಕ್ಕೆ ಸೂಕ್ತ ಪ್ರೋತ್ಸಾಹ, ಸಿಕ್ಕರೆ ಯಾವುದೇ ಮೀಸಲಾತಿ ಸಹಾಯವಿಲ್ಲದೇ ಸಾಧನೆ ಮಾಡಬಹುದಾಗಿದೆ. ಸತತ ಪ್ರಯತ್ನ, ಕಠಿಣ ಪರಿಶ್ರಮಗಳ ಮೂಲಕ ಯುವಪೀಳಿಗೆ ಸಾಧನೆಗಳನ್ನು ಮಾಡಬೇಕು ಎಂದು ಹರಿಹರ ಪೀಠದ ವೀರಶೈವ ಲಿಂಗಾಯಿತ ಪಂಚಮಸಾಲಿ ಜಗದ್ಗುರು ವಚನಾನಂದ ಮಹಾಸ್ವಾಮೀಜಿ ನುಡಿದರು.

ಪಟ್ಟಣದಲ್ಲಿ ಭಾನುವಾರ ಹಿರೇಕಲ್ಮಠದ ಸಮುದಾಯ ಭಾವನದಲ್ಲಿ ತಾಲೂಕು ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜ ತಾಲೂಕು ಘಟಕ ಆಯೋಜಿಸಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬಲ್ಬನ್ನು ಕಂಡುಹಿಡಿದು ಜಗತ್ತಿಗೆ ಬೆಳಕನ್ನು ಕೊಟ್ಟ ವಿಜ್ಞಾನಿ ಸರ್ ಐಸ್ಯಾಕ್ ನ್ಯೂಟನ್ ಬಾಲ್ಯದಲ್ಲಿ ಶಾಲೆಯಲ್ಲಿ ದಡ್ಡ ವಿದ್ಯಾರ್ಥಿ ಎಂದು ತಿರಸ್ಕತಗೊಂಡು ಮನೆಯಲ್ಲಿಯೇ ತಾಯಿ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದಿದ್ದರು. ಅನಂತರ ತನ್ನ ಸಂಶೋಧನೆಯಲ್ಲಿ ನೂರಾರು ಬಾರಿ ಸೋಲನ್ನು ಕಂಡರೂ ಛಲಬಿಡದೇ ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದ ಬಲ್ಬನ್ನು ಆವಿಷ್ಕರಿಸಿದರು. ಹಾಗೆಯೇ ಯುವಕರು ಸೋಲಿಗೆ ಅಂಜದೇ ನಿರಂತರ ಪ್ರಯತ್ನ ಮಾಡಬೇಕು. ಆಗ ತಮ್ಮ ಕೆಲಸದಲ್ಲಿ ಖಂಡಿತಾ ಗೆಲುವು ಕಾಣುತ್ತಾರೆ. ಇದಕ್ಕೆ ಈ ಬಾರಿ ಐಎಎಸ್‌ನಲ್ಲಿ 41ನೇ ರ್ಯಾಂಕ್ ಪಡೆದಿರುವ ಈ ಹರಿಹರದ ಡಾ.ಸಚಿನ್ ಬಸವರಾಜ್ ಗುತ್ತೂರು ಅವರೇ ಸಾಕ್ಷಿ ಎಂದರು.

ಐಎಎಸ್‌ 41ನೇ ರ್ಯಾಂಕ್ ವಿಜೇತ ಡಾ.ಸಚಿನ್ ಬಸವರಾಜ ಗುತ್ತೂರು ಸನ್ಮಾನ ಸ್ವೀಕರಿಸಿ, ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಮತ್ತು ಸ್ಪಷ್ಟವಾದ ಗುರಿ ಇರಬೇಕು. ನಂತರ ಪೋಷಕರ ಪ್ರೋತ್ಸಾಹ ಹಾಗೂ ನಿರಂತರ ಪ್ರಯತ್ನ ಇದ್ದರೆ, ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ತಿಳಿಸಿದರು.

ಸಮಾಜದ ನೌಕರರ ಸಂಘದ ಅಧ್ಯಕ್ಷ ಎಚ್.ಬಿ.ಅಶೋಕ್ ‍ಪ್ರಾಸ್ತಾವಿವಾಗಿ ಮಾತನಾಡಿ, ಕಾರ್ಯಕ್ರಮದಲ್ಲಿ 19 ಜನ ಎಸ್ಸೆಸ್ಸೆಲ್ಸಿ ಮತ್ತು 19 ಜನ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದೆ. ಹೊನ್ನಾಳಿಯಿಂದಲೇ ಪ್ರಥಮ ಬಾರಿಗೆ ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ನೀಡುವ ಪರಿಪಾಠ ಆರಂಭವಾಗಿದೆ ಎಂದು ತಿಳಿಸಿದರು.

ರಾಜ್ಯ ದಾಸೋಹ ಕಮಿಟಿ ಅಧ್ಯಕ್ಷ ಪ್ರಕಾಶ್ ಪಾಟೀಲ್ ಅವರು ಸಮಾಜದ ಅಭಿವೃದ್ಧಿ ಕುರಿತು ಮಾತನಾಡಿದರು. ಅಧ್ಯಕ್ಷತೆ ತಾಲೂಕು ಅಧ್ಯಕ್ಷ ಬೆನಕನಹಳ್ಳಿ ಪಿ.ವೀರಣ್ಣ ಪಟ್ಟಣಶೆಟ್ಟಿ ವಹಿಸಿದ್ದರು.

ಹರಿಹರದ ಹರ ಪೀಠದ ಆಡಳಿತಾಧಿಕಾರಿ, ತಾಲೂಕು ಘಟಕ ಗೌರವಾಧ್ಯಕ್ಷ ಎಚ್.ಪಿ. ರಾಜ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ್ ಪಟ್ಟಣಶೆಟ್ಟಿ, ರಾಜ್ಯ ಮಹಿಳಾಧ್ಯಕ್ಷೆ ವಸಂತಹುಲ್ಲತ್ತಿ, ತಾಲೂಕು ಅಧ್ಯಕ್ಷೆ ಶಿಲ್ಪರಾಜುಗೌಡ್ರು, ತಾಲೂಕು ಯುವವೇದಿಕೆಯ ಹಾಲೇಸ್ ಕೆ.ಎನ್. ನಗರ ಘಟಕದ ಅಧ್ಯಕ್ಷ ಎಚ್.ಬಿ.ಗಿರೀಶ್, ಜಿಲ್ಲಾ ಗೌರವಾಧ್ಯಕ್ಷ ನ್ಯಾಮತಿ ಎನ್.ಡಿ.ಪಂಚಾಕ್ಷರಪ್ಪ, ನುಜ್ಜಿನ ವಾಗೀಶ್, ಅನೇಕ ಗಣ್ಯರು ಇದ್ದರು.

ಹಾಲೇಶ್ ಕುಂಕೂವ ಸ್ವಾಗತಿಸಿದರು. ಪ್ರಸನ್ನ ಸಾಧಕರ ಪರಿಚಯ ಮಾಡಿಸಿದರು. ಗಿರೀಶ್ ನಾಡಿಗ್ ನಿರೂಪಿಸಿದರು.

- - -

(ಬಾಕ್ಸ್‌) * ಅಕ್ಟೋಬರಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಆಯೋಜನೆಗೆ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ವೀರಶೈವ ಲಿಂಗಾಯಿತ ಪಂಚಮಸಾಲಿ ಸಂಘ ಅಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, 31 ವರ್ಷಗಳಿಂದಲೂ ನಿರಂತರ ಸಮಾಜದ ಸಂಘಟನೆ ಸೇವೆ ನಡೆಯುತ್ತಿದೆ. ಕಳೆದ ಕೆಲವಾರು ವರ್ಷಗಳಿಂದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಗಳು ನಡೆದಿಲ್ಲ. ಈ ವರ್ಷ ಅತಿ ಹೆಚ್ಚು ಅಂಕ ಪಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ತಮ್ಮ ಹೆಸರು, ಅಂಕಪಟ್ಟಿ ಪ್ರತಿ, ಪೋಟೋಗಳನ್ನು ರಾಜ್ಯ ಸಮಿತಿ ಘಟಕಕ್ಕೆ ಕಳುಹಿಸಬೇಕು. ಇದನ್ನು ಪುಸ್ತಕದ ರೂಪದಲ್ಲಿ ಹೊರತರಲಾಗುತ್ತದೆ. ಬಹುಪಾಲು ಅಕ್ಟೋಬರ್ ತಿಂಗಳಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ನಡೆಸುವ ಉದ್ದೇಶ ಹೊಂದಲಾಗಿದೆ. ಜೂನ್ 7ರಂದು ಈ ಕುರಿತು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

- - -

-1ಎಚ್.ಎಲ್.ಐ3:

ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭವನ್ನು ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಉದ್ಘಾಟಿಸಿದರು. ವಚನಾನಂದ ಮಹಾಸ್ವಾಮಿಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ