ಯುವ ಸಮೂಹ ಕಬಡ್ಡಿ ಆಸಕ್ತಿ ಬೆಳೆಸಿಕೊಳ್ಳಲಿ: ಸುಭಾಷಗೌಡ್ ಪಾಟೀಲ

KannadaprabhaNewsNetwork |  
Published : Oct 28, 2024, 01:23 AM IST
27ಕೆಎಲ್‌ಜಿ1 ಮುಕ್ಕಲ ಗ್ರಾಮದ ಅಂಬೇಡ್ಕರ್ ಪ್ರೌಢಶಾಲಾ ಮೈದಾನದಲ್ಲಿ ಯುವಕರ ಕಬಡ್ಡಿ ಪಂದ್ಯಾವಳಿ ನಡೆಯಿತು. | Kannada Prabha

ಸಾರಾಂಶ

ದೇಶಿ ಕ್ರೀಡೆ ಕಬಡ್ಡಿ ಎಲ್ಲರ ಮನಗೆದ್ದಿದೆ. ಜೊತೆಗೆ ಭಾರತದ ಹೆಮ್ಮೆಯ ಕ್ರೀಡೆಯೂ ಆಗಿದೆ. ಯುವ ಸಮೂಹ ಕಬಡ್ಡಿ ಆಡುವ ಹಾಗೂ ಕಲಿಯುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸುಭಾಷಗೌಡ್ ಪಾಟೀಲ ಹೇಳಿದರು.

ಕಲಘಟಗಿ: ಕಬಡ್ಡಿ ಗ್ರಾಮೀಣ ಕ್ರೀಡೆ ಆಗಿದ್ದು, ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಮನೋಭಾವ ಯುವಕರಲ್ಲಿ ಹೆಚ್ಚಬೇಕು ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಗ್ರಾಪಂ ಮಾಜಿ ಸದಸ್ಯ ಸುಭಾಷಗೌಡ್ ಪಾಟೀಲ ಹೇಳಿದರು.ತಾಲೂಕಿನ ಮುಕ್ಕಲ ಗ್ರಾಮದ ಶ್ರೀ ಅಂಬೇಡ್ಕರ್ ಪ್ರೌಢಶಾಲಾ ಆವರಣದಲ್ಲಿ ಶ್ರೀ ಗೋಣಿಬಸವೇಶ್ವರ ಯುವಕ ಮಂಡಳ ವತಿಯಿಂದ 45 ಕೆಜಿ ತೂಕದ ಯುವಕರ ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ದೇಶಿ ಕ್ರೀಡೆ ಕಬಡ್ಡಿ ಎಲ್ಲರ ಮನಗೆದ್ದಿದೆ. ಜೊತೆಗೆ ಭಾರತದ ಹೆಮ್ಮೆಯ ಕ್ರೀಡೆಯೂ ಆಗಿದೆ. ಯುವ ಸಮೂಹ ಕಬಡ್ಡಿ ಆಡುವ ಹಾಗೂ ಕಲಿಯುವ ಆಸಕ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸುವುದು ಉತ್ತಮ ಬೆಳವಣಿಗೆ ಆಗಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಓದಿಗಷ್ಟೇ ಸೀಮಿತಗೊಳಿಸುತ್ತಿದ್ದಾರೆ. ಮಕ್ಕಳು ಹೆಚ್ಚು ಅಂಕ ಗಳಿಸಿದರೆ ಸಾಕು ಎಂಬ ಮನೋಭಾವದಿಂದ ವಿವಿಧ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಪೋಷಕರು ಪ್ರೋತ್ಸಾಹಿಸಬೇಕು. ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಸೋತವರು ಹತಾಶರಾಗದೆ ಪ್ರಯತ್ನ ಮುಂದುವರಿಸಿದರೆ ಭವಿಷ್ಯದಲ್ಲಿ ಗೆಲುವು ಸಾಧಿಸುವುದು ಖಚಿತ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಮೇಶ್ ಸೋಲಾರಗೋಪ್ಪ ಮಾತನಾಡಿದರು.

ಎಸ್‌ಡಿಎಂಸಿ ಸದಸ್ಯ ಶಿವಲಿಂಗ ಜಾಯನಗೌಡ್ರ ಮಾತನಾಡಿ, ಕ್ರೀಡಾಕೂಟಗಳಲ್ಲಿ ಸೋಲು-ಗೆಲವು ಸಾಮಾನ್ಯ. ಅವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಕ್ರೀಡಾಪಟುವಿನಲ್ಲಿ ಬೆಳೆಯಬೇಕು. ಅಂದಾಗ ಮಾತ್ರ ಆ ಕ್ರೀಡಾಪಟು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಯುವ ಜನತೆ ಕ್ರೀಡೆಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ದೇವರಕೊಂಡದ ಶ್ರೀ ಬಾಲಯೋಗಿ ಮಾಣಿಕ್ಯ ಚನ್ನವೃಷಭೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಗ್ರಾಮದ ಮುಖಂಡರಾದ ನಾಗಪ್ಪ ಕನಕಪ್ಪನವರ, ಮಂಜು ಪಾಟೀಲ, ಸ್ವರೂಪ ಗೌಡ ಪಾಟೀಲ್, ತಿಪ್ಪನಗೌಡ ಕಗ್ಗಲಗೌಡ್ರ, ಮಹದೇವ ಹೊರಕೇರಿ, ವಿಠಲ್ ಡುಂಡಿ, ಯಲ್ಲಪ್ಪ ಸಿದ್ದಪ್ಪನವರ, ಗದಗಯ್ಯ ನೀರಲಗಿ, ರಾಜು ಗಂಜಿ, ಸುನಿಲ್ ಜಯನಗೌಡ್ರ ಬಸವರಾಜ ಬಿಸನಹಳ್ಳಿ, ಪ್ರಕಾಶ್ ಕುಂಬಾರ ಬಸವರಾಜ ಕನಕಪ್ಪನವರ ಪ್ರವೀಣ್ ದುಂಡಿ ಹನಮಂತ ಹಸರಂಬಿ ಬಸವರಾಜ ಕಮಡೊಳ್ಳಿ ಸೇರಿದಂತೆ ಮುಕ್ಕಲ ಗ್ರಾಮದ ಯುವಕ ಮಂಡಳ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು