ಕೊಪ್ಪಳ:
ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಹಿಂಗಾರು ಹಂಗಾಮಿನ ಪೂರ್ವಸಿದ್ಧತೆ ದ್ವೈಮಾಸಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮುಂಗಾರು ಹಂಗಾಮು ಪೂರ್ಣಗೊಂಡಿದ್ದು, ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಹೀಗಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಿಕೊಂಡು ಸಕಾಲಕ್ಕೆ ರೈತರಿಗೆ ಪೂರೈಸಬೇಕು. ಬಿತ್ತನೆ ಬಳಿಕ ಬೇಕಾಗುವ ಯೂರಿಯಾ, ಕೀಟನಾಶಕವನ್ನು ಬೇಡಿಕೆಗೆ ತಕ್ಕಂತೆ ವಿತರಿಸಬೇಕೆಂದು ಸೂಚಿಸಿದರು.ಆಂದೋಲನ ನಡೆಸಿ:
ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮಾತನಾಡಿ, ಹಿಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 1,80,725 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು ಬಿತ್ತನೆ ಬೀಜದ ಬೇಡಿಕೆ 93,602.63 ಕ್ವಿಂಟಲ್ ಇದೆ. ಈಗಾಗಲೇ 37,764 ಕ್ವಿಂಟಲ್ ಇದ್ದು, ಕಳೆದ ವರ್ಷ 28 ಸಾವಿರ ಕ್ವಿಂಟಲ್ ವಿತರಿಸಲಾಗಿತ್ತು. ಈ ವರ್ಷ ಕಡಲೆ (18,325 ಕ್ವಿಂಟಲ್), ಜೋಳ (208 ಕ್ವಿಂಟಲ್), ಮೆಕ್ಕೆಜೋಳ (68 ಕ್ವಿಂಟಲ್), ಶೇಂಗಾ (8616 ಕ್ವಿಂಟಲ್), ಸೂರ್ಯಕಾಂತಿ (4 ಕ್ವಿಂಟಲ್), ಕುಸುಬೆ (6 ಕ್ವಿಂಟಲ್) ಹಾಗೂ ಗೋದಿ (13.78 ಕ್ವಿಂಲ್), ವಿತರಿಸುವ ಗುರಿ ನಿಗದಿಪಡಿಸಲಾಗಿದೆ ಎಂದರು.
ಬಿಳಿ ಜೋಳ 3 ಕೆಜಿ ಬೀಜಕ್ಕೆ ₹ 180 ದರವಿದ್ದು ಸಾಮಾನ್ಯ ವರ್ಗದ ರೈತರಿಗೆ ₹ 60 ಮತ್ತು ಎಸ್ಸಿ-ಎಸ್ಟಿ ರೈತರಿಗೆ ₹ 90 ಹಾಗೂ 50 ಕೆಜಿ ಶೇಂಗಾ ಬೀಜಕ್ಕೆ ₹ 6750 ಇದ್ದು ಸಾಮಾನ್ಯ ವರ್ಗದ ರೈತರಿಗೆ ₹ 700 ಮತ್ತು ಎಸ್ಸಿ-ಎಸ್ಟಿ ರೈತರಿಗೆ ₹ 1050 ಸಹಾಯಧನವಿದೆ. ಬಿತ್ತನೆಗೆ ಅಗತ್ಯವಿರುವ 4492 ಟನ್ ಡಿಎಪಿ ಹಾಗೂ 15,183 ಟನ್ ಕಾಂಪ್ಲೆಕ್ಸ್ ಗೊಬ್ಬರ ದಾಸ್ತಾನಿದ್ದು ಯೂರಿಯಾವನ್ನು ರೈತರ ಬೇಡಿಕೆಗೆ ತಕ್ಕಂತೆ ಪೂರೈಸಲಾಗುವುದು ಎಂದು ತಿಳಿಸಿದರು.