ಧಾರವಾಡ:
ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನವು ವೈ.ಬಿ. ಅಣ್ಣಿಗೇರಿ ಕಾಲೇಜಿನಲ್ಲಿ ಯುವ ಚಿಂತನಾ ಸಮಾವೇಶದ ಅಂಗವಾಗಿ ಧಾರವಾಡ, ಹಾವೇರಿ ಜಿಲ್ಲೆಯ ವಿವಿಧ 17 ಕಾಲೇಜುಗಳಲ್ಲಿ ಮತ್ತು 8 ಸಂಘ-ಸಂಸ್ಥೆಗಳಲ್ಲಿ ನಡೆಯುವ ಸಾಂಸ್ಕೃತಿಕ, ಜಾಗೃತ ಕಾರ್ಯಕ್ರಮ ಉದ್ಘಾಟಿಸಿ ಎಐ ತಂತ್ರಜ್ಞಾನ ಕುರಿತು ಅವರು ಮಾತನಾಡಿದರು.
ಕ್ರಿಯಾತ್ಮಕ ಯೋಜನೆಯಲ್ಲಿ ಎಐ ಬಳಕೆಯಿಂದ ಹೆಚ್ಚಿನ ದಕ್ಷತೆ, ನಿಖರತೆ, ಭಾಷಾ ಶುದ್ಧತೆ, ವಿಚಾರಗಳ ಉತ್ಕೃಷ್ಟತೆ, ಕೃತಿಚೌರ್ಯ ನಿವಾರಣೆಯಂತಹ ಹಲವಾರು ಪ್ರಯೋಜನಗಳು ಲಭಿಸುತ್ತವೆ. ಆದರೆ, ಇದರಿಂದಾಗಿ ಕ್ರಿಯಾಶೀಲತೆಯ ಕೊರತೆ, ನೈತಿಕ ಸವಾಲುಗಳು, ತಂತ್ರಜ್ಞಾನದ ಮೇಲೆ ಅಪಾರ ಅವಲಂಬನೆ ಮತ್ತು ಸಂದರ್ಭವನ್ನು ಅರ್ಥೈಸಿಕೊಳ್ಳಲು ವಿಫಲತೆಯಂತಹ ಸಾಕಷ್ಟು ಸಮಸ್ಯೆಗಳೂ ಇವೆ ಎಂದರು.ಎಐ ತಂತ್ರಜ್ಞಾನ ಶಿಕ್ಷಣ, ಆರೋಗ್ಯ, ಪರಿಸರ, ಬಾಹ್ಯಾಕಾಶ ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ಧನಾತ್ಮಕವಾಗಿ ಬಳಕೆ ಮಾಡುತ್ತಾ ಅಭಿವೃದ್ಧಿ ಹೊಂದಬಹುದು. ಯುವ ಸಮುದಾಯ ಋಣಾತ್ಮಕ ಚಿಂತನೆಗಳನ್ನು ದೂರ ಮಾಡಿಕೊಂಡು ಬಳಕೆ ಮಾಡುವುದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯೋದ್ಯಮಿ ವಿಜಯಕುಮಾರ ದೇವರಮನಿ ಮಾತನಾಡಿದರು. ಉಪನ್ಯಾಸಕ ಬಸವರಾಜ ಉಡಕೇರಿ, ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಫರಾಸ್, ಸಿದ್ದು ಕಲ್ಯಾಣಶೆಟ್ಟಿ, ಅರುಣಕುಮಾರ ಶೀಲವಂತ, ಪ್ರಾಚಾರ್ಯ ನಿತ್ಯಾನಂದ ಕಾಟಗಾರ ಮಾತನಾಡಿದರು. ಸಂಘಟಕ ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿದರು. ಸಹನಾ ಪಾಟೀಲ ನಿರೂಪಿಸಿದರು. ಭೂಮಿಕಾ ವಂದಿಸಿದರು.