ಶರಣರ ಚಿಂತನೆಗಳನ್ನು ಬಿತ್ತಿ ಬೆಳೆಯೋಣ: ನೀಲಮ್ಮ ಉದಾಸಿ

KannadaprabhaNewsNetwork |  
Published : Jan 08, 2026, 02:45 AM IST
ಹಾನಗಲ್ಲಿನಲ್ಲಿ ನಡೆದ ಶರಣ ಸಂಗಮ ಹಾಗೂ ಸಮ್ಮೇಳನದ ಅಭಿನಂದನಾ ಕಾರ್ಯಕ್ರಮದಲ್ಲಿ ನೀಲಮ್ಮ ಉದಾಸಿ ಮಾತನಾಡಿದರು. | Kannada Prabha

ಸಾರಾಂಶ

ಹಾನಗಲ್ಲ ಪಟ್ಟಣದ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಶರಣ ಸಂಗಮ ಹಾಗೂ ಎರಡನೇ ಶರಣ ಸಾಹಿತ್ಯ ಸಮ್ಮೇಳನದ ಅಭಿನಂದನಾ ಸಮಾರಂಭ ನಡೆಯಿತು.

ಹಾನಗಲ್ಲ: ಅರ್ಥಪೂರ್ಣ ಸಮ್ಮೇಳನಕ್ಕೆ ಸಾಕ್ಷಿಯಾದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾನಗಲ್ಲ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಶರಣ ಬಂಧುಗಳ ಶ್ರಮ ಸಾರ್ಥಕವಾಗಿದೆ ಎಂದು ಎರಡನೇ ತಾಲೂಕು ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ನೀಲಮ್ಮ ಉದಾಸಿ ಹೇಳಿದರು.

ಪಟ್ಟಣದ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಹಾಗೂ ಕದಳಿ ಮಹಿಳಾ ವೇದಿಕೆ ಆಯೋಜಿಸಿದ ಶರಣ ಸಂಗಮ ಹಾಗೂ ಎರಡನೇ ಶರಣ ಸಾಹಿತ್ಯ ಸಮ್ಮೇಳನದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶರಣರ ಚಿಂತನೆಗಳನ್ನು ಬಿತ್ತಿ ಬೆಳೆಯುವಲ್ಲಿ ನಾವೆಲ್ಲ ಒಟ್ಟಾಗಿ ಸೇವೆ ಸಲ್ಲಿಸೋಣ ಎಂದರು.

ಜಿಲ್ಲಾಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಒಟ್ಟಾಗಿ ಕೆಲಸ ಮಾಡಿದರೆ ಎಲ್ಲದರಲ್ಲೂ ಯಶಸ್ಸು ಕಾಣಲು ಸಾಧ್ಯ. ಶರಣರ ಜೀವನದ ಪ್ರತಿಪಾದನೆಗೆ ಶರಣ ಸಾಹಿತ್ಯ ಪರಿಷತ್ತು ವಿಶೇಷವಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಸಮ್ಮೇಳನಗಳು ಕೂಡ ವಚನಗಳ ಪ್ರಚಾರಕ್ಕೆ ಒಳ್ಳೆಯ ವೇದಿಕೆಗಳು. ಸದಾ ವಚನ ಚಿಂತನೆ ಮಾಡುತ್ತ, ಸಮಾಜದಲ್ಲಿ ವಚನಗಳ ಸಾರವನ್ನು ಹಂಚಿದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಸ್ವಾಗತ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಕುಟುಂಬಗಳು ಸೋಲುತ್ತಿವೆ. ಶರಣರ ಚಿಂತನೆಗಳು ಸುಲಭವಾಗಿ ಮಕ್ಕಳನ್ನು ಮುಟ್ಟಬಲ್ಲದು ಎಂದರು.

ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ ಮಾತನಾಡಿ, ಸೌಹಾರ್ದಯುತ ಸಹಕಾರದಿಂದಾಗಿ ಸಮ್ಮೇಳನ ಯಶಸ್ವಿಯಾಗಿದೆ ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಸಿ. ಕಲ್ಲನಗೌಡರ, ನಗರ ಘಟಕದ ಅಧ್ಯಕ್ಷ ಸಿ. ಮಂಜುನಾಥ, ಕದಳಿ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಜಿಲ್ಲಾ ಕಾರ್ಯದರ್ಶಿ ನಿರಂಜನ ಗುಡಿ, ಪದಾಧಿಕಾರಿಗಳಾದ ಎಸ್.ವಿ. ಹೊಸಮನಿ, ಅಶೋಕ ದಾಸರ, ಎಂ. ಪ್ರಸನ್ನಕುಮಾರ, ರೇಖಾ ಶೆಟ್ಟರ, ರತ್ನಾ ಬಳ್ಳಾರಿ, ವೀಣಾ ಗುಡಿ, ನಾಗರತ್ನಾ ಶೇಟ್‌ ಮಾತನಾಡಿದರು.

ಶೋಭಾ ಪಾಟೀಲ, ಸೌಭಾಗ್ಯ ಉದಾಸಿ, ರೂಪಾ ಗೌಳಿ, ಸುವರ್ಣಾ ಹಿರೇಗೌಡರ, ಕಲಮಲಾಕ್ಷಿ ಕೊಂಡೋಜಿ, ಶೀಲಾ ಗಾಣಿಗೇರ, ವಿಜಯಲಕ್ಷ್ಮೀ ಹಳ್ಳಿಕೇರಿ, ಸವಿತಾ ಉದಾಸಿ, ದಾಕ್ಷಾಯಿಣಿ ಯರಗಟ್ಟಿ, ಲಕ್ಷ್ಮೀ ಸಿಂಧೂರ, ಸುಮಂಗಲಾ ಕಟ್ಟೀಮಠ, ಎಚ್. ಸುಧಾ, ಸುನೀತಾ ಉಪ್ಪಿನ, ಸಂತೋಷ ದೊಡ್ಡಮನಿ, ಶಂಭಣ್ಣ ಇಂಗಳಕಿ, ಪ್ರಭು ಹೂಗಾರ, ಶ್ರೀಕಾಂತ ಹಿರೇಮಠ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ