ಕನಕದಾಸರ ಮಾರ್ಗದಲ್ಲಿ ನಡೆಯೋಣ

KannadaprabhaNewsNetwork |  
Published : Nov 09, 2025, 03:00 AM IST
ಗದಗ ಬಿಪಿಪಿ ಜಿಲ್ಲಾ ಕಾರ್ಯಾಲಯದಲ್ಲಿ ಭಕ್ತ ಶ್ರೇಷ್ಠ ಶ್ರೀಕನಕದಾಸರ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಗದಗ ನಗರದ ಬಿಜೆಪಿ ಜಿಲ್ಲಾ ಕಾರ್ಯಲಯದಲ್ಲಿ ಶನಿವಾರ ನಡೆದ ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮಾತನಾಡಿದರು.

ಗದಗ: ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ದಾರ್ಶನಿಕರು ಸಮಸ್ತ ಭಾರತದ ಜನತೆಗೆ ಕಾಲ, ಕಾಲಕ್ಕೆ ಧರ್ಮದ ಹಾದಿಯಲ್ಲಿ ನಡೆಯಲು ಮಾರ್ಗದರ್ಶನ ನೀಡಿದ್ದು, ಅದರಲ್ಲಿ ಕನಕದಾಸರು ದಾಸರ ಪದಗಳಿಂದ ಜನಸಾಮಾನ್ಯರಿಗೆ ಮನ ಮುಟ್ಟುವ ಹಾಗೆ ಧರ್ಮದ ಕುರಿತು ಮಾರ್ಗದರ್ಶನ ನೀಡಿದ್ದಾರೆ. ಇಂದಿನ ನಮ್ಮ ಪೀಳಿಗೆಗೆ ಇದು ಸಹಾಯಕವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಲಯದಲ್ಲಿ ಶನಿವಾರ ನಡೆದ ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ತಮ್ಮ ಕಠೋರ ತಪಸ್ಸಿನಿಂದ ಶ್ರೀಕೃಷ್ಣ ಪರಮಾತ್ಮನನ್ನು ಒಲಸಿಕೊಂಡ ಶ್ರೇಷ್ಠ ಭಕ್ತ. ಇಂದಿನ ನಮ್ಮ ಜನಾಂಗ ಕನಕದಾಸರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಜೀವನ ಶಾಂತಿ, ನೆಮ್ಮದಿಯಿಂದ ನಡೆಸಲು ಸಾಧ್ಯ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪುರ ಹಾಗೂ ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ಮಾತನಾಡಿದರು.

ರಾಘವೇಂದ್ರ ಯಳವತ್ತಿ, ಸುರೇಶ ಮರಳಪ್ಪನವರ, ಶ್ರೀಪತಿ ಉಡುಪಿ, ರಮೇಶ ಸಜ್ಜಗಾರ, ಮಂಜುನಾಥ ಶಾಂತಗೇರಿ, ಅಶೋಕ ಕರೂರ, ಚನ್ನಮ್ಮ ಹುಳಕಣ್ಣವರ, ಕಮಲಾಕ್ಷೀ ಗೊಂದಿ, ಕುಮಾರ ಮಾರನಬಸರಿ, ರವಿ ವಗ್ಗನವರ, ಸುರೇಶ ಚಿತ್ತರಗಿ, ಶಂಕರ ಕಾಕಿ, ಅಪ್ಪಣ್ಣ ಟೆಂಗಿನಕಾಯಿ, ಸುಭಾಸ ಸುಂಕದ, ಮೋಹನ ಕೋರಿ, ಮೋಹನ ಮದ್ದಿನ, ರಾಜು ಕುಲಕರ್ಣಿ, ರವಿ ಮಾನ್ವಿ, ಗೋಪಾಲ ನಾಯಕ, ರೇಣುಕಾರಾಜ ಗುಡಸಲಮನಿ, ದೇವರಪ್ಪ ಪೂಜಾರ ಹಾಗೂ ಪ್ರಮುಖರು ಇದ್ದರು.

ಬಿಜೆಪಿ ರೋಣ ಮಂಡಲದಿಂದ ಕನಕದಾಸರ ಜಯಂತಿ ಆಚರಣೆ: ಗಜೇಂದ್ರಗಡ ಪಟ್ಟಣದ ಬಿಜೆಪಿ ರೋಣ ಮಂಡಲದ ವತಿಯಿಂದ ಮಾಜಿ ಸಚಿವ ಕಳಕಪ್ಪ ಬಂಡಿ ಗೃಹ ಕಚೇರಿಯಲ್ಲಿ ಭಕ್ತಶ್ರೇಷ್ಠ ಕನಕದಾಸರ ಜಯಂತಿ ಆಚರಿಸಲಾಯಿತು.

ಮಾಜಿ ಸಚಿವ ಕಳಕಪ್ಪ ಬಂಡಿ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಕನಕದಾಸರು ಸಾಹಿತ್ಯ ವಿವಿಧ ಪ್ರಕಾರಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಅಲ್ಲದೆ ಸಂಗೀತ ಕ್ಷೇತ್ರಕ್ಕೆ ಮಂಡಿಗೆಗಳ ರೂಪದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕೀರ್ತನೆಗಳು ಸಮಾಜವನ್ನು ಪ್ರೇರೇಪಿಸುವ ಜತೆಗೆ ಉನ್ನತಿಗೊಳಿಸುತ್ತವೆ. ಸಂತ ಹಾಗೂ ತತ್ವಜ್ಞಾನಿಯಾದ ಕನಕದಾಸರ ಜೀವನ ಬೋಧನೆಗಳು ಲಕ್ಷಾಂತರ ಜನರಿಗೆ ಮಾರ್ಗದರ್ಶನದ ಜತೆಗೆ ಸ್ಫೂರ್ತಿಯಾಗಿವೆ. ಹೀಗಾಗಿ ಕನಕದಾಸರ ಆದರ್ಶಗಳನ್ನು ಯುವ ಸಮೂಹ ಪಾಲಿಸಬೇಕು ಎಂದರು.ಈ ವೇಳೆ ಉಮೇಶ ಮಲ್ಲಾಪುರ, ಭಾಸ್ಕರ ರಾಯಬಾಗಿ, ಶಿವಾನಂದ ಮಠದ, ರಾಜೇಂದ್ರ ಘೋರ್ಪಡೆ, ಬಾಳಾಜಿರಾವ ಭೋಸಲೆ, ಅಂದಪ್ಪ ಅಂಗಡಿ, ರಂಗನಾಥ ಮೇಟಿ, ಸಂಜೀವಪ್ಪ ಲೆಕ್ಕಿಹಾಳ, ಯಮನಪ್ಪ ತಿರಕೋಜಿ, ಸುಗೂರೇಶ ಕಾಜಗಾರ, ಬಾಳು ಗೌಡರ, ಸುಭಾಸ ಹಡಪದ, ದೇವರಾಜ ವರಗರ, ಮಲ್ಲು ಕುರಿ, ಕಳಕೇಶ ರಾಠೋಡ, ರಾಜೇಖಾನ್ ಮುನ್ನಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ