ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ಸಂಘದಿಂದ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಬಿ.ಎಚ್.ಮಂಗೇಗೌಡ ಶಿಕ್ಷಣ, ನಂಜಮ್ಮ ಸಮಾಜ ಸೇವಾ, ಮೋಟೇಗೌಡ ಕೃಷಿ, ಕೆ.ಟಿ.ಶ್ರೀಕಂಠೇಗೌಡ ಶಿಕ್ಷಕ ಪ್ರಶಸ್ತಿ ಹಾಗೂ ಕೆ.ಎಲ್.ಅರುಣ್ ಸ್ಮರಣಾರ್ಥ ವಿದ್ಯಾರ್ಥಿ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾವಂತರೇ ಇಂದು ವೃದ್ಧಾಪ್ಯದಲ್ಲಿರುವ ತಂದೆ-ತಾಯಿಯನ್ನು ಅನಾಥಾಶ್ರಮಗಳಿಗೆ ಸೇರಿಸುತ್ತಿದ್ದಾರೆ. ಅವರು ಒಂಟಿಯಾಗಿ ಜೀವನ ನಡೆಸುವಂತಹ ಪರಿಸ್ಥಿತಿ ತಂದೊಡ್ಡುತ್ತಿದ್ದಾರೆ. ಅವರನ್ನು ಆರೈಕೆ ಮಾಡುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಇದು ಒಳ್ಳೆಯ ಸಂಸ್ಕಾರವಲ್ಲ. ತಂದೆ-ತಾಯಿಯ ಕಣ್ಣಲ್ಲಿ ನೀರು ತರಿಸುವ ಮಕ್ಕಳು ಬದುಕಿದ್ದೂ ಸತ್ತಂತೆಯೇ ಎಂದು ಅಭಿಪ್ರಾಯಪಟ್ಟರು.ತಂದೆ-ತಾಯಿಯ ಸೇವೆ ಮಾಡದೆ, ಗುರು-ಹಿರಿಯರನ್ನು ಗೌರವದಿಂದ ಕಾಣದವರು ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ಬೆಲೆ ಇರುವುದಿಲ್ಲ. ಅವರ ಬದುಕು ವ್ಯರ್ಥ. ಹಾಗಾಗಿ ಹಿರಿಯರನ್ನು ಗೌರವಿಸುವ ಮನೋಭಾವವನ್ನು ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಬೆಳೆಸಬೇಕು. ಒಳ್ಳೆಯ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದರು.
ನಾನು ನನ್ನ ತಾಯಿಯನ್ನು ಬಹು ಬೇಗನೆ ಕಳೆದುಕೊಳ್ಳಬೇಕಾಯಿತು. ಆ ವೇಳೆ ನನ್ನ ಚಿಕ್ಕಮ್ಮ ನಮ್ಮನ್ನು ಸಾಕಿ ಬೆಳೆಸಿದ್ದರು. ಅವರ ಸೇವೆ ಮಾಡಿದ್ದು ನನಗೆ ಸಮಾಧಾನ ತಂದಿದೆ. ಎಲ್ಲರೂ ಹಿರಿಯರ ಸೇವೆ ಮಾಡಬೇಕು. ಅವರು ಇನ್ನಷ್ಟು ದಿನ ಬದುಕುವಂತಹ ವಾತಾವರಣ ನಿರ್ಮಿಸಿಕೊಡಬೇಕು. ಇದರಿಂದ ಮನೆಯೂ ಆನಂದದಿಂದ ತುಂಬಿರುತ್ತದೆ ಎಂದು ಉದಾಹರಣೆ ಸಮೇತ ವಿವರಿಸಿದರು.
ಮದ್ದೂರಿನ ಎಂ.ಎಚ್. ಚನ್ನೇಗೌಡ ಶಿಕ್ಷಣ ಸಂಸ್ಥೆಗೆ ಶಿಕ್ಷಣ ಪ್ರಶಸ್ತಿ, ಕೆ.ರಾಜಶೇಖರಯ್ಯ ಅವರಿಗೆ ನಂಜಮ್ಮ ಸೇವಾ ಪ್ರಶಸ್ತಿ, ಎನ್.ಎಂ. ಶಿವಪ್ರಕಾಶ್ ಅವರಿಗೆ ಶಿಕ್ಷಕ ಪ್ರಶಸ್ತಿ, ಬಿಳಿಗೌಡ ಅವರಿಗೆ ಮೋಟೇಗೌಡ ಕೃಷಿ ಪ್ರಶಸ್ತಿ, ಕೊಪ್ಪ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್.ಬಿಂದುಶ್ರೀ ಹಾಗೂ ಎಚ್.ಎಲ್. ಪಲ್ಲವಿ, ಸಿ. ಹಂಸವೇಣಿ, ಸಿ.ಜೆ. ಚೈತ್ರ ಅವರಿಗೆ ಕೆ.ಎಲ್. ಅರುಣ್ ಸ್ಮರಣಾರ್ಥ ವಿದ್ಯಾರ್ಥಿ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.