ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪರೋಪಕಾರಂ ಕುಟುಂಬದ ವತಿಯಿಂದ ಭಾನುವಾರ ಇಲ್ಲಿನ ಮಲ್ಲೇಶ್ವರ ನಗರದ ಝೂನ್ಸಿ ರಾಣಿ ಲಕ್ಷ್ಮಿಬಾಯಿ ಪಾರ್ಕ್ನಲ್ಲಿ 775ನೇ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ನೆಟ್ಟ ಗಿಡಗಳ ಆರೈಕೆ ಹಾಗೂ ನೀರುಣಿಸುವಿಕೆ ಸಂದರ್ಭದಲ್ಲಿ ಪರೋಪಕಾರಂ ಕುಟುಂಬದ ಸದಸ್ಯೆ ಅನಿತಾ ಅನಿಲ್ ಹೆಗ್ಗಡೆ ಅವರ ಹುಟ್ಟುಹಬ್ಬದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ನಾವು ನಮ್ಮ ದೇಶದ ಮತ್ತು ಇತರೆ ದೇಶಗಳ ನಾಗರೀಕತೆಗಳ ಇತಿಹಾಸವನ್ನು ನೋಡಿದರೆ, ಕೆಲವು ವ್ಯಕ್ತಿಗಳ ಅಹಂಕಾರದಿಂದಾಗಿ ಯುದ್ದಗಳು ನಡೆದು ಸಾವು, ನೋವು ಸಂಭವಿಸಿವೆ. ಅಲ್ಲದೆ ನಾಗರೀಕತೆ ಮತ್ತು ದೇಶಗಳೇ ನಿರ್ಮೂಲನೆಯಾಗಿವೆ. ನಮ್ಮ ಸಮಾಜದ ಸುತ್ತಮುತ್ತ ಸಹ ಅನೇಕ ಸಮೃದ್ಧ ಕುಟುಂಬಗಳು ಅಹಂಕಾರದಿಂದ ನಾಶವಾಗಿವೆ. ಒಬ್ಬ ವ್ಯಕ್ತಿಯು ಅಹಂಕಾರದ ಲಕ್ಷಣಗಳನ್ನು ಜಯಿಸಲು ಸಾಧ್ಯವಾದರೆ ಸುಂದರ ಕುಟುಂಬ ಮತ್ತು ಸೌಹಾರ್ದಯುತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.ಅನೇಕ ಯುದ್ಧಗಳಿಗೆ ವ್ಯಕ್ತಿಯ ಅಹಂಕಾರ ಮತ್ತು ದುರಹಂಕಾರ ಕಾರಣವಾಗಿದೆ. ದುರ್ಯೋಧನನ ಅಹಂಕಾರದಿಂದಾಗಿ ಇಡೀ ಕೌರವ ಕುಲವೇ ನಾಶವಾಯಿತು. ಅಂತೆಯೇ ಮಹಾಯುದ್ಧಗಳ ಸಮಯದಲ್ಲಿ ಸಾವು ಮತ್ತು ವಿನಾಶವನ್ನು ನಾವು ನೋಡುತ್ತೇವೆ. ಇವು ಕೆಲವೇ ಕೆಲವು ವ್ಯಕ್ತಿಗಳ ಅಹಂಕಾರದ ಫಲಿತಾಂಶಗಳೂ ಆಗಿವೆ ಎಂದು ವಿವರಿಸಿದರು.
ಎನ್.ಎಂ.ಲೀಲಾಬಾಯಿ , ಅನಿತಾ, ಅನಿಲ್ ಹೆಗ್ಗಡೆ, ಎನ್.ಎಂ.ರಾಘವೇಂದ್ರ, ಪ್ರಗತಿಪರ ಕೃಷಿಕ ಓಂ ಪ್ರಕಾಶ್, ಆರ್.ಕಿರಣ್ , ರಾಯಲ್ ಮೆಡಿಕಲ್ಸ್ನ ಲೋಹಿತ್, ಜೋಡಿಯಾಕ್ ಪ್ರಕಾಶ್, ದೀಪಾ ಶ್ರೀಧರ್, ಶೈಲ ರಾಘವೇಂದ್ರ, ಶ್ರೇಯಾ ಹೆಗ್ಗಡೆ, ವೈಷ್ಣವಿ, ವೈಶಾಖ, ಚೆರಿತಾ , ವಿಜಯ ಕಾರ್ತಿಕ್, ಉಜ್ವಲ್ ಹೆಗ್ಗಡೆ, ಶ್ರೀಯಾನ್, ವೇದವ್ಯಾಸ ಮತ್ತಿತರರು ಭಾಗವಹಿಸಿದ್ದರು.