ಭಕ್ತ ಹಿತ ಚಿಂತನಾ ಸಭೆ । ದಾವಣಗೆರೆಯ ಶ್ರೀ ಜಡೆಸಿದ್ದ ಶಿವಯೋಗಿಶ್ವರ ಮಠದ ಶ್ರೀಕನ್ನಡಪ್ರಭ ವಾರ್ತೆ ಕೊಪ್ಪಳ
ದಾವಣಗೆರೆಯ ಶ್ರೀ ಜಡೆಸಿದ್ದ ಶಿವಯೋಗಿಶ್ವರ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.
ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ಭಕ್ತ ಹಿತ ಚಿಂತನಾ ಸಭೆಯಲ್ಲಿ ಉಪದೇಶಾಮೃತ ನೀಡಿದ ಅವರು, ಇಂಥ ಸಭೆಯಲ್ಲಿ ಮಾತನಾಡುವ ಭಾಗ್ಯ ಸಿಕ್ಕಿರುವುದೇ ನಮಗೆ ಪುಣ್ಯ. ನಿಮ್ಮ ಸಹನೆ, ಶಾಂತಿ ನೋಡಿ ಆನಂದವಾಗಿದೆ. ಭಗವಂತ ನೂರು ವರ್ಷ ನಮಗೆ ನೀಡಿದ್ದಾನೆ. ಇದರ ಜೊತೆಗೆ ನೂರೆಂಟು ಸಂಕಟ ನೀಡಿದ್ದಾನೆ. ಯಾರು ಇಲ್ಲಿ ಚಿರಂಜೀವಿಗಳಲ್ಲ. ಹೀಗಾಗಿ ಇರುವುದರೊಳಗಾಗಿ ನಾವು ಸಾರ್ಥಕ ಬದುಕು ಸಾಗಿಸಬೇಕು ಎಂದರು.ಸಾರ್ಥಕ ಜೀವನ ನಡೆಸಿದರೆ ಜೀವನ ಮೋಕ್ಷ ಸಿಗುತ್ತದೆ. ಇಲ್ಲದಿದ್ದರೂ ಉತ್ತಮ ಜನ್ಮ ಸಿಗಬಹುದು. ಸಂಸಾರದ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳಬೇಡಿ. ಅದೇ ಚಿಂತೆಯಲ್ಲಿ ಇದ್ದರೆ ಸುವಿಚಾರ ನಿಮ್ಮಲ್ಲಿ ಬೆಳೆಯುವುದಿಲ್ಲ.
ಸಂಸಾರದಲ್ಲಿಯೇ ಮುಳಿಗಿದರೆ ನೀನು ನಿನ್ನನ್ನು ಅರಿಯಲು ಸಾಧ್ಯವಿಲ್ಲ. ಹಾಂಗಂತ ಅದನ್ನು ತ್ಯಜಿಸಿಬಿಡಬೇಕು ಅಂತಲ್ಲ. ತಲೆಕೆಡಿಸಿಕೊಳ್ಳಬೇಡ. ಯಾರಾದರೂ ಏನಾನು ಅನ್ನುಕೊಳ್ಳಲಿ, ನೀನು ನೀನಾಗಿಯೇ ಇರು.
ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಪದ್ಮಶ್ರೀ ಜಾದವ್ ಪಾಯೆಂಗ್ ಭಾಗವಹಿಸಿದ್ದರು.
ವಿಶೇಷ ಸಾಧಕರಾದ ರಮೇಶ ಬಲ್ಲಿದ, ಮಲ್ಲಪ್ಪ ನಿಂಗಪ್ಪ ಉದ್ದಾರ ಅವರನ್ನು ಸನ್ಮಾನಿಸಲಾಯಿತು.
ಗುಡ್ಡದ ತುಂಬೆಲ್ಲ ಜನಸ್ತೋಮ:
ಮನರಂಜಿಸಿದ ಸಂಗೀತ ಕಾರ್ಯಕ್ರಮ:
ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಪಂಡಿತ್ ಡಾ. ಮೈಸೂರು ಮಂಜುನಾಥ್ ಇವರಿಂದ ವಾಯಲಿನ್, ಮುಂಬೈನ ಪಂಡಿತ್ ರೂಪ ಕುಲಕರ್ಣಿ ಅವರಿಂದ ಬಾನ್ಸೂರಿ, ಧಾರವಾಡದ ಪಂಡಿತ್ ಕೈವಲ್ಯಕುಮಾರ್ ಗುರವ್ ಇವರಿಂದ ಗಾಯನ, ಬೆಂಗಳೂರಿನ ಪಂಡಿತ್ ಗಿರಿಧರ ಉಡುಪ ಇವರಿಂದ ಘಟಂ, ಮುಂಬೈನ ಪಂಡಿತ್ ಮುಕುಂದ ರಾಜ್ದೇವು ಇವರಿಂದ ತಬಲ ಕಾರ್ಯಕ್ರಮ ಜರುಗಿತು. ಮಹನೀಯರ ಸಂಗೀತದಿಂದ ನೆರದಿದ್ದವರು ಅವರ ಸಂಗೀತ ಕಲೆಗೆ ತಲೆದೂಗಿದರು.