ಕನಕಪುರ: ಆಧುನಿಕ ಹಾಗೂ ತಂತ್ರಜ್ಞಾನ ಯುಗದಲ್ಲಿ ಜನರಿಗೆ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಡಲು ಇಂದಿನ ಬದುಕಿನ ಒತ್ತಡದ ಜೀವನಶೈಲಿ, ಆಹಾರ ಪದ್ಧತಿಗಳೇ ಮುಖ್ಯ ಕಾರಣ ಎಂದು ಡಾ.ಬಸವರಾಜ್ ಹೇಳಿದರು.
ಕನಕಪುರ ನಗರ ಹಾಗು ತಾಲೂಕಿನ ವಿವಿಧ ಭಾಗಗಳಿಂದ ಹೆಚ್ಚು ಸಾರ್ವಜನಿಕರು ಭಾಗಿಯಾಗಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಕಲರ್ ಥೆರಪಿ, ಆಕ್ಯುಪ್ರೆಷರ್, ಸೀಡ್ ಥೆರಪಿ, ಮರ್ಮ ಥೆರಪಿ, ಆರಿಕ್ಯುಲರ್ ಥೆರಪಿ ಸೇರಿದಂತೆ ವಿವಿಧ ಸುಲಭ ಹಾಗೂ ಸರಳವಾಗಿ ಉಚಿತ ಚಿಕಿತ್ಸಾ ವಿಧಾನದಲ್ಲಿ ತಲೆ ನೋವು, ಭುಜದ ನೋವು, ಬೆನ್ನು ನೋವು,ಮಧು ಮೇಹ, ಮೂತ್ರಪಿಂಡದಲ್ಲಿ ಕಲ್ಲು ಸೇರಿದಂತೆ ಹಲವು ಕಾಯಿಲೆಗಳಿಗೆ ನುರಿತ ಕಲರ್ ಥೆರಪಿ ತಜ್ಞರು ನೀಡಿದ ಸಲಹೆ ಸೂಚನೆಗಳ ಮೂಲಕ ಪರಿಹಾರ ಪಡೆದು ಕೊಂಡರು.
ರೋಟರಿ ಅಧ್ಯಕ್ಷ ಕೆ.ಬಿ.ಸಿದ್ಧರಾಜು, ಮಾಜಿ ಅಧ್ಯಕ್ಷ ಭಾನುಪ್ರಕಾಶ್, ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಬಾಲಕೃಷ್ಣ ಆರ್ಯ ಹಾಗೂ ಬೆಂಗಳೂರು, ಮಾಗಡಿ, ಆನೇಕಲ್, ಬಿಡದಿ ಹಿಲೀಂಗ್ ಕೇಂದ್ರದ ಮುಖ್ಯಸ್ಥರು ಹಾಗೂ ಪತಂಜಲಿ ಯೋಗ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಶಿಬಿರದಲ್ಲಿ ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 01:
ಕನಕಪುರ ರೋಟರಿ ಭವನದಲ್ಲಿ ಉಚಿತ ಔಷದ ರಹಿತ ಚಿಕಿತ್ಸಾ ಶಿಬಿರ