ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಅಕ್ಷರಾಭ್ಯಾಸ ಪರಂಪರೆ ಭಾರತೀಯ ಗುರುಕುಲ ಪರಂಪರೆಯಲ್ಲಿ ಒಂದು ಭಾಗವಾಗಿದೆ ಎಂದು ಶಿಕ್ಷಣ ಸಂಯೋಜಕ ನವೀನ್ಕುಮಾರ್ ಹೇಳಿದರು.ಹೋಬಳಿಯ ಮಾದಾಪುರ ಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರ್ಸರಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಖಾಸಗಿ ಶಾಲೆ ವ್ಯಾಮೋಹ ತೊರೆದು ಗುಣಾತ್ಮಾಕ ಶಿಕ್ಷಣ ನೀಡುವ ಸರ್ಕಾರಿ ಶಾಲೆ ಕಡೆ ಪೋಷಕರು ಮನಸ್ಸು ಬದಲಾಯಿಸಬೇಕು. ನಿಮ್ಮೂರ ನಿಮ್ಮ ಶಾಲೆ ಉಳಿಸುವುದು ನಿಮ್ಮೆಲ್ಲರ ಕರ್ತವ್ಯ ಎಂದರು.
ಗುರುಕುಲ ಪರಂಪರೆಯಲ್ಲಿ ಅಕ್ಷರಾಭ್ಯಾಸ ನಡೆಯುತ್ತ ಬಂದಿದೆ. ಮಕ್ಕಳಲ್ಲಿ ಆಧ್ಯಾತ್ಮ ಒಲವಿನ ಜತೆ ಸಂಸ್ಕಾರ ಶಿಕ್ಷಣ ಸಿಗಲಿದೆ. ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ಬಿಸಿಯೂಟ, ಪಠ್ಯಪರಿಕರ ಎಲ್ಲವನ್ನು ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಆಯ್ಕೆಯಾದ ಶಿಕ್ಷಕರು ಇರುವುದನ್ನು ಮರೆಯಬಾರದು ಎಂದರು.ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಎಲ್.ಎಸ್.ಧರ್ಮಪ್ಪ ಮಾತನಾಡಿದರು. ತಂದೆ ತಾಯಿಗಳು ಮಕ್ಕಳೊಂದಿಗೆ ಅಕ್ಷರಾಭ್ಯಾಸದಲ್ಲಿ ಸಂಭ್ರಮದಿಂದ ಭಾಗವಹಿಸಿ ತಮ್ಮೂರ ಶಾಲೆ ಮಕ್ಕಳ ಕಲರವ ತಿಳಿದು ಖುಷಿಪಟ್ಟರು.
ಈ ವೇಳೆ ಎಸ್ಡಿಎಂಸಿ ಅಧ್ಯಕ್ಷ ಪ್ರದೀಪ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಸಿಆರ್ಪಿ ಆಶಾರಾಣಿ, ಮುಖ್ಯಶಿಕ್ಷಕ ದೇವರಾಜೇಗೌಡ, ಶಿಕ್ಷಕಿ ಮಂಗಳಾ, ದಿಲೀಪ್ಕುಮಾರ್, ಪಲ್ಲವಿ, ಎಂ.ಕೆ.ರವಿ, ಬಾಬು, ಸುನಿಲ್ ಪ್ರಶಾಂತ್, ಮಧುಚಂದ್ರ, ರಾಜೇಶ್, ಅಭಿ, ಸಣ್ಣಸ್ವಾಮಿ, ರಾಜೇಗೌಡ ಇದ್ದರು.ಪೊಲೀಸರು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ
ಶ್ರೀರಂಗಪಟ್ಟಣ:ಅಂತಾರಾಷ್ಟ್ರೀಯ ಮಾದಕ ವಸ್ತು ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಪೊಲೀಸರು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಯಿತು.
ಜಾಥಾ ನೇತೃತ್ವ ವಹಿಸಿದ್ದ ಸಿಪಿಐ ಬಿ.ಜಿ. ಕುಮಾರ್ ಮಾತನಾಡಿ, ಇಂದಿನ ಯುವ ಜನಾಂಗ ತಂಬಾಕು, ಮದ್ಯದಂತಹ ಮಾದಕ ಉತ್ಪನ್ನಗಳ ದುಶ್ಚಟಗಳಿಗೆ ಬಲಿಯಾಗಿ ಭವಿಷ್ಯ ಹಾಳು ಮಾಡಿಕೊಳ್ಳುವ ಜೊತೆಗೆ ಕುಟುಂಬಗಳನ್ನು ಬೀದಿ ಪಾಲಾಗುವಂತೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಿರಿ ಸಾರ್ವಜನಿಕರಿಗೂ ಅಲ್ಲಲ್ಲಿ ಜಾಗೃತಿ ಮೂಡಿಸಿ ಎಂದರು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಜಾಥಾದಲ್ಲಿ ಭಾಗವಹಿಸಿ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಿದರು.