ಸಾಹಿತ್ಯ - ಸಾಂಸ್ಕೃತಿಕ ಚಟುವಟಿಕೆಗಳಿಂದ ಉತ್ತಮ ಸಮಾಜ ನಿರ್ಮಾಣ: ಹನುಮಂತಯ್ಯ

KannadaprabhaNewsNetwork |  
Published : Mar 23, 2026, 01:30 AM IST
ಶಿರ್ಷಿಕೆ-22ಕೆ.ಎಂ.ಎಲ್‌.ಆರ್.3-ಮಾಲೂರಿನ ಕಸಾಪ ದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಾವ್ಯ ದಿನಾಚರಣೆ ಹಾಗೂ ಭಾವೈಕ್ಯತಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಮುನಿನಾರಾಯಣಪ್ಪ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ವಿಶ್ವ ಕಾವ್ಯ ಪರಂಪರೆಗೆ ಬೃಹತ್ತಾದ ಇತಿಹಾಸ ಇದೆ. ಪಾಶ್ಚಾತ್ಯ ಬರಹಗಾರರ, ಭಾರತೀಯ ಸಾಹಿತಿಗಳ ಸಾಹಿತ್ಯ ಕೊಡುಗೆ ಅಪಾರವಾದದ್ದು. ಕಾವ್ಯ ವರ್ತಮಾನ ಸನ್ನಿವೇಶಗಳ ಕನ್ನಡಿಯಾಗಿದ್ದು, ಭವಿಷ್ಯದ ಸಾಮಾಜಿಕ ಬದಲಾವಣೆಯ ಸ್ಥಿತಿಯ ರೂಪಕಗಳಾಗಿವೆ .

ಕನ್ನಡ ಪ್ರಭವಾರ್ತೆ, ಮಾಲೂರು

ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಗಳಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಕಸಾಪ ಅಧ್ಯಕ್ಷ ಎಂ.ವಿ.ಹನುಮಂತಯ್ಯ ಹೇಳಿದರು.

ಅವರು ಕಸಾಪ, ಚೈತನ್ಯ ಕಲಾ ನಿಕೇತನ ಹಾಗೂ ಚುಟುಕು ಸಾಹಿತ್ಯ ಪರಿಷತ್‌ ಸಂಯೋಗದಲ್ಲಿ ನಗರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಾವ್ಯ ದಿನಾಚರಣೆ ಹಾಗೂ ಭಾವೈಕ್ಯತಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಓದು ಬರಹದಿಂದ ವಿಮುಖಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಕಾವ್ಯ ಹಾಗೂ ಸಾಹಿತ್ಯ ರಚನೆಯನ್ನು ಪ್ರೇರೇಸುವಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯತ್ತಿರಬೇಕು. ಈ ನಿಟ್ಟಿನಲ್ಲಿ ಚೈತನ್ಯ ಕಲಾನಿಕೇತನ ಸೇರಿದಂತೆ ಮಾಲೂರಿನ ಸಾಹಿತ್ಯ ಸಂಘಗಳು ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸಾಹಿತ್ಯ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕವಿ ಸಿ.ಲಕ್ಷ್ಮಿನಾರಾಯಣ್‌ ಮಾತನಾಡಿ, ವಿಶ್ವ ಕಾವ್ಯ ಪರಂಪರೆಗೆ ಬೃಹತ್ತಾದ ಇತಿಹಾಸ ಇದೆ. ಪಾಶ್ಚಾತ್ಯ ಬರಹಗಾರರ, ಭಾರತೀಯ ಸಾಹಿತಿಗಳ ಸಾಹಿತ್ಯ ಕೊಡುಗೆ ಅಪಾರವಾದದ್ದು. ಕಾವ್ಯ ವರ್ತಮಾನ ಸನ್ನಿವೇಶಗಳ ಕನ್ನಡಿಯಾಗಿದ್ದು, ಭವಿಷ್ಯದ ಸಾಮಾಜಿಕ ಬದಲಾವಣೆಯ ಸ್ಥಿತಿಯ ರೂಪಕಗಳಾಗಿವೆ ಎಂದು ಹೇಳಿದರು.

ಕಸಾಪದ ಮಾಜಿ ಗೌರವ ಕಾರ್ಯದರ್ಶಿ ಎ.ಅಶ್ವಥ ರೆಡ್ಡಿ ಮಾತನಾಡಿದರು. ಚೈತನ್ಯ ಕಲಾನಿಕೇತನ ಸಂಸ್ಥೆ ಅಧ್ಯಕ್ಷ ಜಯಮಂಗಲ ಚಂದ್ರಶೇಖರ್‌ ಪ್ರಸ್ತಾವಿಕ ಮಾತುಗಳನ್ನಾಡಿದರು.

ಇದೇ ಸಂದರ್ಭದಲ್ಲಿ ಬಾಪೂಜಿ ಬಿ.ಎಡ್.ಕಾಲೇಜಿನ ಪ್ರಾಂಶುಪಾಲ ಡಾ.ಮುನಿನಾರಾಯಣಪ್ಪ ಅವರನ್ನು ಸನ್ಮಾನಿಸಲಾಯಿತು. ಭಾವೈಕ್ಯತಾ ಕವಿಗೋಷ್ಠಿಯಲ್ಲಿ ಕವಿಗಳಾದ ಮಾಸ್ತಿ ಕೃಷ್ಣಪ್ಪ, ಡಾ.ನಾ.ಮುನಿರಾಜು, ಮಾ.ಚಿ. ನಾಗರಾಜು, ರೋಣೋರು ವೆಂಕಟೇಶ್‌, ನೋ.ಮು.ಕೃಷ್ಣಪ್ಪ, ದೊಡ್ಡಿ ಪ್ರವೀಣ್‌, ವೀಣಾ, ಪಿ.ಎಂ. ಕೃಷ್ಣಪ್ಪ, ಗುಲ್ಜಾರ್‌ ಇನ್ನಿತರ ಕವಿಗಳು ಭಾಗವಹಿಸಿದ್ದರು.

ಅನಿಕೇತನ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಕೆ.ಮುನಿಕೃಷ್ಣಪ್ಪ, ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾರಿಗಾನಹಳ್ಳಿ ಶ್ರೀನಿವಾಸ್‌, ಗೌರವಾಧ್ಯಕ್ಷ ಬಹುದ್ದೂರ್‌ ಸಾಬ್‌, ನಿವೃತ್ತ ಮುಖ್ಯ ಶಿಕ್ಷಕ ಎಂ.ಪಿ.ರಾಜು, ಗ್ರಂಥಪಾಲಕ ನಾರಾಯಣಪ್ಪ, ಮೈ. ನಾರಾಯಣ ಗೌಡ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಊದಿನಕಡ್ಡಿ ವಾಸನೆಗೆ ಹಣ ಕಳೆದುಕೊಂಡ ಜನ
ಕುಮುದ್ವತಿ ನದಿ ಸೇತುವೆ ತಡೆಗೋಡೆ ಕುಸಿತ