ಕಟೀಲು ಮೇಳ ಸಾಮಾಜಿಕ ಜಾಲತಾಣ ಪ್ರತಿನಿಧಿಗಳ ಸಮಾವೇಶ
ಇವತ್ತಿನ ಕಾಲದಲ್ಲಿ ಯಕ್ಷಗಾನ ಕಲೆಯ ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳ ಕೊಡುಗೆ ಬಹುಮುಖ್ಯವಾಗಿದ್ದು ಕೆಟ್ಟ ಸಂಗತಿಗಳು ಬಹುಬೇಗ ಪ್ರಚಾರಕ್ಕೆ ಬರುತ್ತವೆ. ಒಳ್ಳೆಯ ವಿಚಾರಗಳು ಪ್ರಚಾರಕ್ಕೆ ಬರುವುದಿಲ್ಲ. ಈ ಬಗ್ಗೆ ನಮ್ಮಲ್ಲಿ ಎಚ್ಚರ ಬೇಕೆಂದು ಹೇಳಿದರು.
ದಿನಂಪ್ರತಿ ಕಟೀಲು ಮೇಳಗಳ ಬಯಲಾಟಗಳ ಪ್ರಸಂಗಗಳ ವಿವರ ನೀಡುವ ನಾಗೇಶ್ ಆಚಾರ್ಯ, ಹರಿಪ್ರಸಾದ್ ಶೆಟ್ಟಿ, ಸಿತ್ಲ ರಂಗನಾಥ ರಾವ್, ಯಕ್ಷಮಾಧವ, ಉದಯ ಕಂಬಾರು, ಸತೀಶ್ ಮಂಜೇಶ್ವರ, ಆತ್ಮರಂಜನ್ ಶೆಟ್ಟಿ ಮುಂತಾದವರು ತಮ್ಮ ಅನುಭವಗಳನ್ನು ಹೇಳಿದರು. ಕಟೀಲು ಮೇಳಗಳ ಪ್ರದರ್ಶನಗಳು ಸುಧಾರಣೆಗಳು ಸಾಮಾಜಿಕ ತಾಣಗಳ ಜವಾಬ್ದಾರಿಗಳು ಛಾಯಾಗ್ರಹಣ ವಿಡಿಯೋ ಸಂದರ್ಭ ಇರಬೇಕಾದ ಎಚ್ಚರ ಯಕ್ಷಗಾನದ ಕುರಿತಾಗಿ ಜಾಲತಾಣಗಳಲ್ಲಿ ನಡೆಯುವ ಸಂಗತಿಗಳು ಹೀಗೆ ಕಟೀಲು ಮೇಳಗಳ ಕುರಿತಾಗಿ ಚರ್ಚಿತವಾದ ವಿಚಾರಗಳಿಗೆ ಸ್ಪಂದಿಸಿದ ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮೇಳಗಳಲ್ಲಿ ಆಗಿರುವ ಆಗಬೇಕಾಗಿರುವ ಸುಧಾರಣೆ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿದರು.ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಶ್ರೀನಿವಾಸ ಆಸ್ರಣ್ಣ, ಖ್ಯಾತ ಛಾಯಾಗ್ರಾಹಕ ಮನೋಹರ ಕುಂದರ್, ಆರ್.ಕೆ. ಭಟ್ ಕೊಂಗೋಟ್, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಮತ್ತಿತರರಿದ್ದರು. ಯೂಟ್ಯೂಬರ್ ದುರ್ಗಾಪ್ರಸಾದ ದಿವಾಣ ಸ್ವಾಗತಿಸಿ, ನಿರ್ವಹಿಸಿದರು.