- ವಿಶ್ರಾಂತ ಪರಿಸರ ವಿಜ್ಞಾನಿ ಡಾ.ವಿ. ಜಗನ್ನಾಥ ಅಭಿಮತಕನ್ನಡಪ್ರಭ ವಾರ್ತೆ ಮೈಸೂರು
ಪರಿಸರದ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವಾರು ತರಗತಿಗಳು, ಬೋಧನೆ, ಬೀದಿ ನಾಟಕ, ಜಾಥಾ ಹಮ್ಮಿಕೊಂಡಿದ್ದರೂ ಅಂತಹ ಹೇಳಿಕೊಳ್ಳುವ ಅರಿವು ಜನತೆಯಲ್ಲಿ ಕಂಡು ಬರದಿರುವುದು ಅತ್ಯಂತ ವಿಷಾದದ ಸಂಗತಿ. ಹಲವು ಆವಿಷ್ಕಾರದ ಪರಿಣಾಮದಿಂದಾಗಿ ಭೂಮಿಯ ಉಷ್ಣಾಂಶ ಹೆಚ್ಚಾಗಿ ಮಳೆ ಮಾರುತಗಳು, ವಾಯುವಿನ ಚಲನೆ ಸರಿಯಾದ ಸಮಯಕ್ಕೆ ಆಗದೆ ಮಳೆ ಇಳೆಗೆ ತಲುಪುತಿಲ್ಲ. ನಮ್ಮ ಸುತ್ತಲಿನ ವಾತಾವರಣವನ್ನು ಮಾಲಿನ್ಯದಿಂದ ಸಂರಕ್ಷಿಸಿಕೊಳ್ಳುವ ನಿಟ್ಟಿನಲ್ಲಿಗೊತ್ತಿರುವುದನ್ನು ಮಾಡುವುದೇ ಇಂದಿನ ಪೀಳಿಗೆಯ ಪ್ರಮುಖ ಗುರಿಯಾಗಿದೆ. ಜೀವನದ ಅಗತ್ಯವನ್ನರಿತು ವಸ್ತು ಮತ್ತು ಶಕ್ತಿಯನ್ನು ಮಿತವಾಗಿ ಬಳಕೆ ಮಾಡಿದರೇ ಪರಿಸರ ಸಂರಕ್ಷಿಸಬಹುದು ಎಂದರು.
ಪ್ರಾಂಶುಪಾಲ ಡಾ.ಎಸ್. ಮರೀಗೌಡರು ಅಧ್ಯಕ್ಷತೆ ವಹಿಸಿದ್ದರು. ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್. ಶ್ರೀಹರ್ಷ ಸ್ವಾಗತಿಸಿದರು. ವಿಶೇಷ ಉಪನ್ಯಾಸ ಮಾಲೆಯ ಸಂಚಾಲಕ ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಟಿ. ಸತೀಶ್ ವಂದಿಸಿದರು.ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಇದ್ದರು.