ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಸಂಸದ ಸಂಗಣ್ಣ ಕರಡಿ ಬೆಂಬಲಿಗರು ಕಾಂಗ್ರೆಸ್‌ಗೆ

KannadaprabhaNewsNetwork | Published : Apr 4, 2024 1:04 AM

ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಬೇಸರಗೊಂಡಿದ್ದ ಅವರ ಕಟ್ಟಾ ಬೆಂಬಲಿಗರು ಸರದಿಯಲ್ಲಿ ನಿಂತು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಬೇಸರಗೊಂಡಿದ್ದ ಅವರ ಕಟ್ಟಾ ಬೆಂಬಲಿಗರು ಸರದಿಯಲ್ಲಿ ನಿಂತು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.

ನಾನು ಬಿಜೆಪಿಯಲ್ಲಿಯೇ ಇರುತ್ತೇನೆ, ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದು ಕರಡಿ ಹೇಳಿದ ಮೇಲೆಯೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವ ಅವರ ಬೆಂಬಲಿಗರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ.

ನಗರದ ವೈಜನಾಥ ದಿವಟರ ಅವರ ನಿವಾಸದಲ್ಲಿ ನಡೆದ ಕಾಂಗ್ರೆಸ್ ಸೇರ್ಪಡೆ ಸಮಾರಂಭದಲ್ಲಿ ಬರೋಬ್ಬರಿ ನೂರಕ್ಕೂ ಹೆಚ್ಚು ಬಿಜೆಪಿ ಮುಖಂಡರು ಶಾಸಕ ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಸಂಗಣ್ಣರೊಂದಿಗೆ ಸುಮಾರು 15-20 ವರ್ಷಗಳಿಂದ ಜೊತೆಯಲ್ಲಿಯೇ ಇದ್ದ ವೀರಣ್ಣ ಗಾಣಿಗೇರ, ವೈಜನಾಥ ದಿವಟರ ಹಾಗೂ ಅಂದಪ್ಪ ಬೆಣಕಲ್ ಸೇರಿದಂತೆ ಅನೇಕರು ಕಾಂಗ್ರೆಸ್ ಸೇರಿದರು.

ಇನ್ನು ಬರುವವರು ಇದ್ದಾರೆ:ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ, ರಾಜ್ಯ ಸರ್ಕಾರ ಜಾರಿ ಮಾಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಬೆಂಬಲಿಸಿ ಅನೇಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಜುಲ್ಲು ಖಾದ್ರಿ, ಎಸ್.ಬಿ. ನಾಗರಳ್ಳಿ, ಪ್ರಸನ್ ಗಡಾದ, ಕೃಷ್ಣಾರಡ್ಡಿ ಗಲಬಿ ಸೇರಿದಂತೆ ಅನೇಕರು ಇದ್ದರು.

ಹುಲಗಿ ಗ್ರಾಮದಲ್ಲಿ ಕಾಂಗ್ರೆಸ್ ಸೇರ್ಪಡೆ:

ಹುಲಗಿ ಗ್ರಾಮದಲ್ಲಿ ಬಿಜೆಪಿ ತೊರೆದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಭಿವೃದ್ಧಿ ಕಾರ್ಯ ಹಾಗೂ ಕಾಂಗ್ರೆಸ್ ತತ್ವ ಮೆಚ್ಚಿ ಅನೇಕ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು.

ಪ್ರಮುಖರಾದ ಸಿದ್ದಪ್ಪ ಗುಂಗಾಡಿ, ಪಾಲಾಕ್ಷಪ್ಪ ಗುಂಗಾಡಿ, ಮಂಜುನಾಥ ಗಡಗಿ, ಮಂಜುನಾಥ ನಾಯಕ, ಯಮನೂರಪ್ಪ ಕೋಟ್ರಯ್ಯ ಸ್ವಾಮಿ, ಶರಬಯ್ಯ ಸ್ವಾಮಿ, ಮಂಜುನಾಥ ಹಿರೇಮಠ, ಪರಶುರಾಮ ನಾಯಕ, ಅನಿತಾ ಪೂಜಾರ, ಮಂಜುನಾಥ ಮಾಳೆಕೊಪ್ಪ, ಕರಿಯಪ್ಪ ಭೋವಿ, ಶಂಕರಗೌಡ, ಮಾರುತಿ ಶಿವಪುರ ಹಾಗೂ ಒಟ್ಟು 50ಕ್ಕೂ ಹೆಚ್ಚು ಹೆಚ್ಚು ಕಾರ್ಯಕರ್ತರು ಸೇರಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ. ಬಸವರಾಜ ಹಿಟ್ನಾಳ, ಲೋಕಸಭಾ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಎಸ್.ಬಿ. ನಾಗರಳ್ಳಿ, ಪ್ರಸನ್ನ ಗಡದ, ಜನಾರ್ದನ, ಹುಲಗಿ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ ಪಾಷ ಪಲ್ಟನ್, ಬಾಷುಸಾಬ ಖತ್ತಿಬ, ಅಮರೇಶ ಉಪಲಾಪುರ, ಬಾಲಚಂದ್ರನ್ ಕಾಟನ್ ಪಾಷ, ತೋಟಪ್ಪ ಕಾಮನೂರು, ಈರಣ್ಣ ಹುಲಗಿ, ತಾಲೂಕು ಕೆಡಿಪಿ ಸದಸ್ಯ ನಾಗರತ್ನ ಪೂಜಾರ, ಜ್ಯೋತಿ ಗೊಂಡಬಾಳ, ಸುಮಾ ನಾಯಕ, ವಿಜಯಕುಮಾರ ಹುಲಗಿ, ಅಶೋಕ ಈಳಗೇರ, ಶರಣಪ್ಪ ಸಜ್ಜನ, ಶಿವಕುಮಾರ ಪೌಲಿ ಶೆಟ್ರ, ವೈಜುನಾಥ ದಿವಟರ, ಈರಣ್ಣ ಗಾಣಿಗೇರ, ಅಂದಪ್ಪ ಬಣಕಾರ ಇನ್ನೂ ಅನೇಕ ಮುಖಂಡರು ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.