- ಐದು ಕಡೆ ಎಸ್ಪಿ ಕೌಲಾಪುರೆ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ
- - -- ಮನೆ, ನಿವೇಶನ, ಜಮೀನು, ಒಡವೆ, ವಾಹನಗಳು, ಆಸ್ತಿ ದಾಖಲೆಗಳು ಪತ್ತೆ
- ಆಹಾರ ಸುರಕ್ಷಾ ಕಚೇರಿ ರೆಫ್ರಿಜರೇಟರಿನಲ್ಲಿ ಕೊಳೆತು ನಾರುತ್ತಿದ್ದ ಸ್ಯಾಂಪಲ್ಗಳು- - - ಕನ್ನಡಪ್ರಭ ವಾರ್ತೆ ದಾವಣಗೆರೆಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಜಿಲ್ಲಾ ಆಹಾರ ಸುರಕ್ಷಾ ಶಾಖೆ ಜಿಲ್ಲಾ ಅಧಿಕಾರಿ ಮನೆ, ಕಚೇರಿ ಸೇರಿದಂತೆ 5 ಕಡೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಕೋಟ್ಯಂತರ ರು. ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಿದ್ದಾರೆ.
ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ವಾಸಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿ ಡಾ.ನಾಗರಾಜ ಮನೆ, ಕಚೇರಿ ಇತರೆ ಮೂರು ಕಡೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕಲಾವತಿ, ಇನ್ಸ್ಪೆಕ್ಟರ್ಗಳಾದ ಪಿ.ವಿ. ಪ್ರಭು, ಸರಳಾ ನಾಗರಾಜ ಇತರೆ ಅಧಿಕಾರಿಗಳ ನೇತೃತ್ವದಲ್ಲಿ ಲೋಕಾಯುಕ್ತ ತಂಡ ದಾಳಿ ನಡೆಸಿದವು.ದಾಳಿ ವೇಳೆ ಆಹಾರ ಸುರಕ್ಷತಾ ಅಧಿಕಾರಿ ಡಾ.ನಾಗರಾಜ ಮನೆಯಲ್ಲಿ 1 ನಿವೇಶನ, 4 ಮನೆಗಳು, 38 ಎಕರೆ ಜಮೀನು, 1 ಕೆಜಿ 597 ಗ್ರಾಂ ಚಿನ್ನಾಭರಣ, 5 ಕೆ,ಜಿ, 249 ಗ್ರಾಂ ಬೆಳ್ಳಿಯ ವಸ್ತುಗಳು, ₹38 ಲಕ್ಷ ಮೌಲ್ಯದ ಕಾರು, ದ್ವಿಚಕ್ರ ವಾಹನಗಳು, ₹32 ಲಕ್ಷ ಮೌಲ್ಯದ ಇತರೆ ಸ್ವತ್ತುಗಳು ಸದ್ಯ ಪತ್ತೆ ಮಾಡಲಾಗಿದೆ. ಬ್ಯಾಂಕ್ ಲಾಕರ್ ಇತರೆ ಕಡೆ ಪರಿಶೀಲನೆ ಕಾರ್ಯವನ್ನು ಗುರುವಾರ ರಾತ್ರಿಯೂ ಲೋಕಾಯುಕ್ತ ತಂಡಗಳು ಮುಂದುವರಿಸಿದ್ದವು.
ಇಲ್ಲಿನ ಜಿಲ್ಲಾಸ್ಪತ್ರೆ ಆವರಣದ ಸರ್ವೇಕ್ಷಣಾ ವಿಭಾಗದ ಕಟ್ಟಡದಲ್ಲಿ ಆಹಾರ ಸುರಕ್ಷಾ ಶಾಖೆ ಇದ್ದು, ಅಲ್ಲಿ ಡಾ.ನಾಗರಾಜ ಕಾರ್ಯನಿರ್ವಹಿಸುತ್ತಿದ್ದಾರೆ. ದಾಳಿಯಲ್ಲಿ ಡಾ.ನಾಗರಾಜ ಮನೆಯಲ್ಲಿ ಚಿನ್ನ, ಬೆಳ್ಳಿ ಆಭರಣ, ವಸ್ತುಗಳು, ಆಸ್ತಿ ಪತ್ರಗಳು, ವಾಹನಗಳು ಪತ್ತೆಯಾದರೆ, ಮತ್ತೊಂದು ತಂಡವು ಜಿಲ್ಲಾಸ್ಪತ್ರೆ ಆವರಣದ ಆಹಾರ ಸುರಕ್ಷಾ ಶಾಖೆ ಕಚೇರಿಯ ರೆಫ್ರಿಜಿರೇಟರ್ನಲ್ಲಿ ಸಂಗ್ರಹಿಸಿದ ಮಾದರಿಗಳು ಕೊಳೆಯುತ್ತಿದ್ದುದು ಪತ್ತೆಯಾಗಿವೆ.ಉಪ್ಪಿಟ್ಟು, ದೋಸೆ, ಪೂರಿ, ಪಲಾವ್ ಸೇರಿದಂತೆ ಹತ್ತಾರು ಆಹಾರ ಪದಾರ್ಥಗಳು ಸ್ಯಾಂಪಲ್ಗೆಂದು ತಂದಿದ್ದು, ಅದಕ್ಕೆ ಯಾವುದೇ ದಾಖಲೆಯನ್ನೂ ನಿರ್ವಹಣೆ ಮಾಡಿರಲಿಲ್ಲ. ಕಸದ ಬುಟ್ಟಿಯಲ್ಲಿ ತುಂಬಿದಂತೆ ಆಹಾರದ ಮಾದರಿಗಳನ್ನು ತುಂಬಿಟ್ಟಿರುವುದು, ಹತ್ತಾರು ಕಲಬೆರಕೆ ಪ್ರಕರಣಗಳಿದ್ದರೂ ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಆಹಾರ ಸುರಕ್ಷಾ ಅಧಿಕಾರಿ ಡಾ.ನಾಗರಾಜ ಮೌನಕ್ಕೆ ಶರಣಾಗಿದ್ದರು ಎನ್ನಲಾಗಿದೆ.
ಆಹಾರ ಸುರಕ್ಷತಾ ಅಧಿಕಾರಿ ಡಾ.ನಾಗರಾಜ ನಿವಾಸ, ಕಚೇರಿ, ಫಾರಂ ಹೌಸ್ ಸೇರಿದಂತೆ ಐದು ಕಡೆ ಗುರುವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿ, ಸಿಬ್ಬಂದಿ ತಂಡಗಳು ದಾಳಿ ಮಾಡಿವೆ. ಅಪಾರ ಚಿನ್ನ-ಬೆಳ್ಳಿ, ನಗದು, ಸ್ವತ್ತು, ವಾಹನ, ನಿವೇಶನ, ಮನೆ, ಜಮೀನು ಕಾಗದ ಪತ್ರಗಳನ್ನು ಪತ್ತೆ ಮಾಡಲಾಗಿದೆ. ಗುರುವಾರ ರಾತ್ರಿಯೂ ಪರಿಶೀಲನಾ ಕಾರ್ಯವನ್ನು ಲೋಕಾಯುಕ್ತ ಅಧಿಕಾರಿ, ಸಿಬ್ಬಂದಿ ಮುಂದುವರಿಸಿದ್ದರು.- - - -6ಕೆಡಿವಿಜಿ2: ದಾವಣಗೆರೆ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಆಹಾರ ಸುರಕ್ಷತಾ ಅಧಿಕಾರಿ ಡಾ.ನಾಗರಾಜ ನಿವಾಸ, ವಾಹನ.
-6ಕೆಡಿವಿಜಿ3: ಡಾ.ನಾಗರಾಜ, ಆಹಾರ ಸುರಕ್ಷತಾ ಅಧಿಕಾರಿ, ದಾವಣಗೆರೆ.-6ಕೆಡಿವಿಜಿ4: ದಾವಣಗೆರೆ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಡಾ.ನಾಗರಾಜ ನಿವಾಸದಲ್ಲಿ ಪತ್ತೆಯಾದ ಚಿನ್ನಾಭರಣಗಳು, ಬೆಳ್ಳಿ ಆಭರಣ, ವಸ್ತುಗಳು.