ಲೋಕಪಾಲ ಸದಸ್ಯರಾಗಿ ನ್ಯಾ. ನಾರಾಯಣಸ್ವಾಮಿ ನೇಮಕ

KannadaprabhaNewsNetwork |  
Published : Feb 29, 2024, 02:08 AM IST
ಡಿ28-ಬಿಡಿವಿಟಿ2ನ್ಯಾ.ನಾರಾಯಣ ಸ್ವಾಮಿ | Kannada Prabha

ಸಾರಾಂಶ

ಭದ್ರಾವತಿ ನಗರದ ನಿವಾಸಿ, ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯ ನಿವೃತ್ತ ಮುಖ್ಯ ನ್ಯಾಯಾಧೀಶ ಎಲ್. ನಾರಾಯಣ ಸ್ವಾಮಿ ಅವರನ್ನು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ನ್ಯಾಯಾಂಗ ಸದಸ್ಯರಾಗಿ ಲೋಕಪಾಲಕ್ಕೆ ನೇಮಕಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಭದ್ರಾವತಿ

ನಗರದ ನಿವಾಸಿ, ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯ ನಿವೃತ್ತ ಮುಖ್ಯ ನ್ಯಾಯಾಧೀಶ ಎಲ್. ನಾರಾಯಣ ಸ್ವಾಮಿ ಅವರನ್ನು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ನ್ಯಾಯಾಂಗ ಸದಸ್ಯರಾಗಿ ಲೋಕಪಾಲಕ್ಕೆ ನೇಮಕಗೊಳಿಸಿದ್ದಾರೆ.

ನಾರಾಯಣ ಸ್ವಾಮಿ ಭದ್ರಾವತಿ ನಗರದಲ್ಲಿಯೇ ಹುಟ್ಟಿ ಬೆಳೆದವರು. ಅವರ ತಂದೆ ಲಿಂಗಪ್ಪ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಹಾಗೂ ಸಹೋದರ ನಿರಂಜನ ಮೂರ್ತಿ ಮೈಸೂರು ಕಾಗದ ಕಾರ್ಖಾನೆಯಲ್ಲಿ ಉದ್ಯೋಗದಲ್ಲಿ ಇದ್ದರು. ಈ ಹಿನ್ನೆಲೆ ನಾರಾಯಣಸ್ವಾಮಿ ಅವರು ತಮ್ಮ ಬಾಲ್ಯದ ಶಿಕ್ಷಣ ಭದ್ರಾವತಿಯಲ್ಲಿಯೇ ಪೂರೈಸಿದ್ದರು.

ಇದೀಗ ನಾರಾಯಣಸ್ವಾಮಿ ಅವರನ್ನು ನ್ಯಾಯಾಂಗ ಸದಸ್ಯರಾಗಿ ಲೋಕಪಾಲಕ್ಕೆ ನೇಮಕಗೊಳಿಸಲಾಗಿದೆ.

ವಿಶೇಷವೆಂದರೆ, ಅವರ ತಮ್ಮ ಶ್ರೀನಿವಾಸ ಬಾಬು ಸಹ ನ್ಯಾಯವಾದಿಯಾಗಿದ್ದು, ರಾಜ್ಯ ವಕೀಲರ ಸಂಘ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1987ರಲ್ಲಿ ನ್ಯಾಯವಾದಿ ವೃತ್ತಿ ಆರಂಭಿಸಿದ ನಾರಾಯಣಸ್ವಾಮಿ ಸಿವಿಲ್ ವ್ಯಾಜ್ಯ, ಸೇವಾ ವಿಷಯ, ಭೂ ಸುಧಾರಣೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿ ಅಪಾರವಾದ ಕಾನೂನು ಜ್ಞಾನ, ಅನುಭವ ಹೊಂದಿದ್ದಾರೆ.

2007ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕೊಂಡಿದ್ದು, 2009ರಲ್ಲಿ ಕಾಯಂ ಆಗಿದ್ದಾರೆ. 2019ರಲ್ಲಿ ಸುಮಾರು 5 ತಿಂಗಳು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದರು. ಅನಂತರ ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯ ಮುಖ್ಯ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿ, 2021ರಲ್ಲಿ ನಿವೃತ್ತಿ ಹೊಂದಿದ್ದಾರೆ.

- - -

-ಡಿ28-ಬಿಡಿವಿಟಿ2:

ನ್ಯಾ. ನಾರಾಯಣ ಸ್ವಾಮಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ