ಧಾರವಾಡ: ಸಾಮಾನ್ಯವಾಗಿ ಹೊಸ ಸಿನಿಮಾಗಳ ವಿಶೇಷ (ಪ್ರಿಮಿಯರ್) ಪ್ರದರ್ಶನಗಳನ್ನು ಬೆಂಗಳೂರು ಹಾಗೂ ಮೈಸೂರು ನಗರದಲ್ಲಿ ಏರ್ಪಡಿಸುವುದು ವಾಡಿಕೆ. ಆದರೆ, ಡಿ ಕ್ರಿಯೇಶನ್ಸ್ ವತಿಯಿಂದ ನಿರ್ಮಾಣವಾಗಿರುವ ''''ದೂರ ತೀರ ಯಾನ'''' ಹೊಸ ಕನ್ನಡ ಸಿನಿಮಾದ ಪ್ರಿಮಿಯರ್ ಶೋ ಅನ್ನು ಜುಲೈ 9ರಂದು ಇಲ್ಲಿನ ಪದ್ಮಾ ಚಿತ್ರಮಂದಿರದಲ್ಲಿ ಆಯೋಜಿಸಲಾಗಿದೆ.
ಪ್ರೀತಿ ಎಂದರೆ ಬರೀ ಆಕರ್ಷಣೆ, ಮದುವೆ ಅಲ್ಲ. ಪ್ರೀತಿಗೆ ಬೇರೆ ಬೇರೆ ಅರ್ಥಗಳಿದ್ದು ಅಂತಹ ಪ್ರೀತಿ ಹುಡುಕುವ ಕಥೆ ಇದಾಗಿದೆ. ಪ್ರವಾಸ ಮಾಡುತ್ತಲೇ ಪ್ರೀತಿ ಹಾಗೂ ತಮಗಿರುವ ಜವಾಬ್ದಾರಿಗಳನ್ನು ಹೇಗೆ ನಿಬಾಯಿಸುತ್ತಾರೆ ಎಂಬುದು ಚಿತ್ರಕಥೆ. ಪ್ರಸ್ತುತ ಪ್ರೀತಿ ಹೆಸರಿನಲ್ಲಿ ನಡೆಯುತ್ತಿರುವ ಕೊಲೆ- ದೌರ್ಜನ್ಯ, ದುಃಖದ ಬದಲು ಪ್ರೀತಿಯು ಖುಷಿ ಕೊಡುವಂತೆ ಇರಬೇಕು ಎಂಬುದು ನಮ್ಮ ಆಶಯ. ಬೆಂಗಳೂರು, ಉಡುಪಿ, ಗೋಕರ್ಣ ಸೇರಿದಂತೆ ರಾಜ್ಯ ವಿವಿಧೆಡೆ ಚಿತ್ರೀಕರಣವಾಗಿದ್ದು, ಆರು ಹಾಡುಗಳಿವೆ. ವಿಜಯಕೃಷ್ಣ ಚಿತ್ರದ ನಾಯಕ ನಟನಾಗಿದ್ದು, ಪ್ರಿಯಾಂಕ ಕುಮಾರ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಶೃತಿ ಹರಿಹರನ್ ಸೇರಿದಂತೆ ಇತರೆ ಕಲಾವಿದರು ಇದ್ದಾರೆ ಎಂದರು.
ಈಗಾಗಲೇ ಡಿ, ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆಯೊಂದಿಗೆ ಆಕ್ಟ್ 1978 ಹಾಗೂ 19-20-21 ಚಿತ್ರ ನಿರ್ಮಿಸಿದ್ದು ದೂರ ತೀರ ಯಾನ ಮೂರನೇ ಸಿನೆಮಾ. ಇಲ್ಲಿಯ ವರೆಗೂ ಮಾಡಿರುವ ಸಿನೆಮಾಗಳಿಗಿಂತ ವಿಭಿನ್ನವಾದ ಸವಾಲಿನ, ಹೊಸ ತಲೆಮಾರಿನ ಪ್ರೇಮ ಕಥೆಯ ಸಿನೆಮಾ ಇದು ಎಂದು ನಿರ್ದೇಶಕ ಮಂಸೋರೆ ಹೇಳಿದರು.