ಬಾಟಂ.. ನಗರಕ್ಕೆಹಳಕಟ್ಟೆ ಅವರಿಂದಾಗಿ ವಿಶ್ವ ಮಾನ್ಯ ವಚನ ಉಳಿದಿದೆ

KannadaprabhaNewsNetwork |  
Published : Jul 14, 2024, 01:31 AM IST
36 | Kannada Prabha

ಸಾರಾಂಶ

ವಿಶ್ವ ಸಾಹಿತ್ಯ ಮತ್ತು ಧರ್ಮದಲ್ಲಿ ಕಾಣದ ವೈಜ್ಞಾನಿಕ ಹಾಗೂ ಧಾರ್ಮಿಕ ಸಾಮಾಜಿಕ ಮೌಲ್ಯಗಳು ವಚನ ಸಾಹಿತ್ಯದಲ್ಲಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಹಳಕಟ್ಟೆಯವರು ಅಂದು ತಮ್ಮ ಸಂಪೂರ್ಣ ಜೀವನಾವಧಿಯನ್ನು ವಚನಗಳನ್ನು ಉಳಿಸುವುದರಲ್ಲಿ ತೊಡಗಿಕೊಳ್ಳದಿದ್ದರೆ ನಮಗೆ ವಿಶ್ವ ಮಾನ್ಯತೆ ಪಡೆದ ವಚನಗಳು ದೊರೆಯುತ್ತಿರಲಿಲ್ಲ ನೆಹರು ಯುವ ಕೇಂದ್ರದ ಉಪ ನಿರ್ದೇಶಕ ಎಂ. ಸಿದ್ದರಾಮಯ್ಯ ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ವೇದಿಕೆಯು ಜೆ.ಪಿ. ನಗರದ ಜೆಎಸ್ಎಸ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವ ಸಾಹಿತ್ಯ ಮತ್ತು ಧರ್ಮದಲ್ಲಿ ಕಾಣದ ವೈಜ್ಞಾನಿಕ ಹಾಗೂ ಧಾರ್ಮಿಕ ಸಾಮಾಜಿಕ ಮೌಲ್ಯಗಳು ವಚನ ಸಾಹಿತ್ಯದಲ್ಲಿವೆ. ನಾವು ಅವುಗಳನ್ನು ಮುಂದಿನ ಪೀಳಿಗೆ ಉಳಿಸಬೇಕು. ಇಲ್ಲದೇ ಹೋದರೆ ಸಮಾಜ ಅಂತ್ಯದ ಸ್ಥಿತಿಗೆ ಹೋಗಬಲ್ಲದು. ಇಂದಿನ ಯುವ ಪೀಳಿಗೆಯು ವಚನವನ್ನು ಅಧ್ಯಯನ ಮಾಡುವುದು ಆಚರಣೆಗೆ ತರುವುದು ಅಗತ್ಯ ಎಂದು ಅವರು ಹೇಳಿದರು.

ಹಳಕಟ್ಟಿ ಅವರು ಬಹುಮುಖ ಪ್ರತಿಭೆ ಉಳ್ಳವರು. ಮಹಾಸಾಧಕರು. ತಮ್ಮ ಸಂಪೂರ್ಣ ಆಸ್ತಿಯನ್ನು ತೊರೆದು ವಚನ ಸಾಹಿತ್ಯ ಮುದ್ರಿಸಿಕೊಟ್ಟರು. ಶಿಕ್ಷಣ ಸಂಸ್ಥೆ, ಸಹಕಾರ ಸಂಘಗಳನ್ನು ಕಟ್ಟಿದರು. ಮುದ್ರಣ ಆರಂಭಿಸಿದರು. ಆಗಲೂ ವಚನಗಳನ್ನು ಒಪ್ಪದಿದ್ದಾಗ ತಮ್ಮ ಆಸ್ತಿಯನ್ನು ಮಾರಿ ಮುದ್ರಣ ಪ್ರಾರಂಭಿಸಿದರು. ಇಂತಹ ಸಾತ್ವಿಕ, ದಾರ್ಶನಿಕ, ವಚನ ಪಿತಾಮಹ ಎನಿಸಿಕೊಂಡಿರುವ ಹಳಕಟ್ಟಿ ಅವರನ್ನು ನೆನೆಯುವುದು ನಮ್ಮ ಬದುಕಿಗೆ ಒಂದು ಬೆಳಕು ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ.ಗು. ಸದಾನಂದಯ್ಯ ಅವರು ಈ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳೂ ವಚನಗಳನ್ನು ಓದಿ ಬರೆದು ಬಹುಮಾನ ಪಡೆದಿರುವುದು ವಚನಗಳ ಸಂರಕ್ಷಣೆಯ ಮತ್ತೊಂದು ಭಾಗ ಎಂದರು.

ದತ್ತಿ ದಾಸೋಹಿಗಳಾದ ಮಂಗಳಾ ಮುದ್ದುಮಾದಪ್ಪ ಮತ್ತು ಡಾ. ನಿರ್ಮಲಾ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕದಳಿ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ಇದ್ದರು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಸಂಸ್ಥೆ ಪ್ರಾಂಶುಪಾಲ ನಿರಂಜನ್ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿದರು. ರಾಜರಾಜೇಶ್ವರಿ ಜೆಪಿ ನಗರ ಅಕ್ಕನ ಬಳಗದವರು ವಚನ ಹಾಡಿದರು. ಮಮತಾ ಅವರು ನಿರೂಪಿಸಿದರು.

ಡಾ.ಎಚ್. ಮುದ್ದು ಮಲ್ಲೇಶ್ ಹಾಗೂ ಮಂಜುಳಾ ದತ್ತಿ ದಾನಿಗಳನ್ನು ಪರಿಚಯಿಸಿದರು. ಲತಾ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಸದಾಶಿವ, ಲೋಕೇಶಪ್ಪ, ನಂದೀಶ್, ಚಿನ್ನಸ್ವಾಮಿ, ಮೀನಾ, ವಿಜಯಾ, ಮಲ್ಲಿಕಾ, ಲಲಿತಾ ಪಾಟೀಲ್, ಚನ್ನಬಸಪ್ಪ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇಲ್ಸೇತುವೆಗಳ ಕೆಳಭಾಗದ ಸ್ಥಳಗಳ ಸುಂದರೀಕರಣಕ್ಕೆ ಯೋಜನೆ
ಕ್ಯಾಬಿನೆಟ್‌ ಸಬ್‌ ಕಮಿಟಿ ವರದಿ ಬಳಿಕ ನೈಸ್‌ ಕಂಪನಿ ವಿರುದ್ಧ ಕ್ರಮ: ಸತೀಶ್‌