ಮದ್ದೂರು:
ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಶಿವಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ವಕೀಲರು, ಸಮಿತಿ ಮತ್ತು ಪ್ರಾಧಿಕಾರ ಕಾವೇರಿಕೊಳ್ಳದ ವಸ್ತು ಸ್ಥಿತಿ ಅವಲೋಕನ ಮಾಡದೆ ತಮಿಳುನಾಡಿಗೆ ನೀರು ಬಿಡಬೇಕು ಎಂದು ನೀಡಿರುವ ಆದೇಶ ವೈಜ್ಞಾನಿಕವಾಗಿದೆ ಎಂದು ಆರೋಪಿಸಿ ನ್ಯಾಯಾಲಯದ ಕಲಾಪದಿಂದ ಹೊರ ಗುಳಿಯಲು ತೀರ್ಮಾನ ಕೈಗೊಂಡರು. ವಕೀಲರ ಸಂಘದ ಆವರಣದಲ್ಲಿ ಕೆಲಕಾಲ ವಕೀಲರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ತಮಿಳುನಾಡು ಮುಖ್ಯಮಂತ್ರಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ವಸ್ತು ಸ್ಥಿತಿ ಮನವರಿಕೆ ಮಾಡಬೇಕು ಎಂದು ಅಧ್ಯಕ್ಷ ಶಿವಣ್ಣ ಸಲಹೆ ನೀಡಿದರು.
ಕಾವೇರಿ ನದಿ ನೀರಿನ ಚಳವಳಿಯಲ್ಲಿ ಭಾಗವಹಿಸುವ ರೈತರು ಹಾಗೂ ಕನ್ನಡ ಪರ ಸಂಘಟನೆಗಳ ಕರ್ತರ ಮೇಲೆ ಪೊಲೀಸರು ಯಾವುದೇ ರೀತಿಯ ಮೊಕದ್ದಮೆ ದಾಖಲು ಮಾಡಿದರೆ ಮದ್ದೂರು ವಕೀಲರಸಂಘ ವಕಾಲತ್ತು ವಹಿಸಿ ಉಚಿತವಾಗಿ ಕೇಸ್ ಗಳನ್ನು ನಡೆಸಿಕೊಡುತ್ತದೆ ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಪುಟ್ಟರಾಜು, ಕಾರ್ಯದರ್ಶಿ ಸುಮಂತ್, ಖಜಾಂಚಿ ಪ್ರಸನ್ನ, ಸಂಘದ ಸದಸ್ಯರಾದ ಎಂ.ಎನ್.ಚಂದ್ರಶೇಖರ್, ಎಂ.ಎಂ.ಪ್ರಶಾಂತ್, ಎಸ್.ಉಮೇಶ್, ಚೆಲುವರಾಜು, ಕೆ.ಸ್ವಾಮಿ, ಮಹೇಶ್, ದಯಾನಂದ, ಶಿವಲಿಂಗಯ್ಯ, ಕೆ.ಯೋಗಾನಂದ, ಕೆ.ಶಿವಣ್ಣ, ಎಂ.ಶಿವಣ್ಣ, ವಿ.ಟಿ.ರವಿಕುಮಾರ್, ಪೂರ್ಣಿಮಾ, ಬೇಬಿ, ವಿಲಾಸಿನಿ ಮತ್ತಿತರರು ಇದ್ದರು.