ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಗೆಜ್ಜಲಗೆರೆ ಗ್ರಾಮದ ಗ್ರಾಪಂ ಆವರಣದಲ್ಲಿ ಗೆಜ್ಜಲಗೆರೆ ಗ್ರಾಪಂ ಅನ್ನು ಮದ್ದೂರು ನಗರಸಭೆಯಿಂದ ಕೈ ಬಿಡುವಂತೆ ಒತ್ತಾಯಿಸಿ 195 ದಿನಗಳಿಂದ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪ್ರತಿಭಟನಾ ನಿರತ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದರು.
ಈ ಹಿಂದೆ ಪಟ್ಟಣವಾಗಿದ್ದ ಮದ್ದೂರನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದಾಗಿ ನಗರಸಭೆಯನ್ನಾಗಿ ಮೇಲ್ದರ್ಜೇಗೇರಿಸುವ ಸಂಬಂಧ ಸರ್ಕಾರದ ಮಾನದಂಡದ ಅನುಗುಣವಾಗಿ ಜನಸಂಖ್ಯೆ ಆಧಾರದ ಮೇಲೆ ಮದ್ದೂರು ಸಮೀಪದ ಗೆಜ್ಜಲಗೆರೆ, ಸೋಮನಹಳ್ಳಿ, ಗೊರವನಹಳ್ಳಿ ಹಾಗೂ ಚಾಮನಹಳ್ಳಿ 4 ಗಾಪಂಗಳನ್ನು ಸೇರ್ಪಡೆಗೊಳಿಸಲಾಗಿತ್ತು. ನಂತರ ದಿನಗಳಲ್ಲಿ ಆಡಳಿತಾತ್ಮಕ ಪ್ರಕ್ರಿಯೆಗಳೆಲ್ಲ ಮುಗಿದು ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿತ್ತು ಎಂದರು.ಆದರೆ, ಗೆಜ್ಜಲಗೆರೆ ಗ್ರಾಪಂಯನ್ನು ನಗರಸಭಾ ವ್ಯಾಪ್ತಿಯಿದ ಕೈ ಬಿಡಲು ಒತ್ತಾಯಿಸಿ ಗ್ರಾಮಸ್ಥರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದು, ವಿಪಕ್ಷದ ಹಲವು ನಾಯಕರು ಪ್ರತಿಭಟನೆಗೆ ಬೆಂಬಲ ನೀಡಿ ಭಾಗವಹಿಸಿ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಮುಂದಾಗಿದ್ದರು. ಅಷ್ಟೆ ಅಲ್ಲದೇ, ನನ್ನನ್ನು ದರೋಡೆಕೋರನಂತೆ ಬಿಂಬಿಸಿ ಮಾತನಾಡುತ್ತಿರುವುದರಿಂದ ನನಗೆ ತುಂಬಾ ಬೇಸರ ತಂದಿತ್ತು ಎಂದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪ್ರತಿಭಟನಾ ಸ್ಥಳಕೆ ಬಂದಿದ್ದ ವಿಪಕ್ಷದ ನಾಯಕರೆಲ್ಲ ನನ್ನ ಹತ್ತಿರ ಸಹಾಯ ತೆಗೆದುಕೊಂಡಿವವರೇ. ಇದನ್ನು ನಾನು ಎಲ್ಲಿ ಬೇಕಾದರು ಹೇಳುತ್ತೇನೆ. ಅವರೆಲ್ಲ ಬಂದು ನನ್ನ ವಿರುದ್ಧ ಮಾತನಾಡಿದ್ದು ನನಗೆ ತುಂಬಾ ನೋವು ತಂದಿತ್ತು. ಆದ್ದರಿಂದ ಪ್ರತಿಭಟನೆ ಸ್ಥಳಕ್ಕೆ ಬಂದಿರಲಿಲ್ಲ ಎಂದರು.
ಚರ್ಚೆ ವೇಳೆ ಗ್ರಾಮದ ಐದಾರು ಮಂದಿ ಪ್ರಮುಖರು ನನ್ನ ಜತೆ ಬನ್ನಿ, ನಿಮ್ಮ ಬೇಡಿಕೆ ಪರ ನ್ಯಾಯಕೊಡಿಸುವ ಪ್ರಯತ್ನವನ್ನು ಮಾಡುವ ಭರವಸೆಯನ್ನು ನೂರಕ್ಕೆ ಸಾವಿರ ಪಟ್ಟು ಈ ಮೂಲಕ ನೀಡುತ್ತಿದ್ದೇನೆ. ಹೀಗಾಗಿ ಧರಣಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು.
ಗೆಜ್ಜಲಗೆರೆ ಗ್ರಾಮವನ್ನು ನಗರಸಭೆಯಿಂದ ಕೈ ಬಿಡುವಂತೆ ಒತ್ತಾಯಿಸಲಾದ ಮನವಿ ಪತ್ರವನ್ನು ಶಾಸಕರಿಗೆ ಗ್ರಾಮದ ಮುಖಂಡರು ಗ್ರಾಮಸ್ಥರ ಪರವಾಗಿ ನೀಡಿದರು.