ಕನ್ನಡಪ್ರಭ ವಾರ್ತೆ ಮಧುಗಿರಿ
ಏಪ್ರಿಲ್ 1, ರಂದು ನಡೆದ ಪೂರ್ವಭಾವಿ ಸಭೆಯಲ್ಲಿಯೂ ತಹಸೀಲ್ದಾರ್ ಶ್ರೀನಿವಾಸ್ ಹಾಜರಾಗಿರಲಿಲ್ಲ. ಇದಲ್ಲದೆ, ಏಪ್ರಿಲ್ 5ರಂದು ನಡೆದ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮಕ್ಕೂ ಗೈರುಹಾಜರಾಗಿರುವುದನ್ನು ಖಂಡಿಸಿ, ಅವರನ್ನು ಅಮಾನತು ಮಾಡುವಂತೆ ಎಲ್ಲಾ ದಲಿತಪರ ಸಂಘಟನೆಗಳ ಮುಖಂಡರು ಒಟ್ಟಾಗಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಅವರಿಗೆ ಮನವಿ ಸಲ್ಲಿಸಿದರು.
ನಂತರ ದಲಿತಪರ ಸಂಘಟನೆಗಳ ಸದಸ್ಯರು ಮಧುಗಿರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೇರಿ ಬಾಬು ಜಗಜೀವನ್ ರಾಮ್ ಜಯಂತಿಯನ್ನು ಆಚರಿಸಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಾದ ನರಸಿಂಹಮೂರ್ತಿ, ಐ ಡಿ ಹಳ್ಳಿ ದೊಡ್ಡೇರಿ ಕಣಿಮಯ್ಯ, ತೊಂಡೋಟಿ ರಾಮಾಂಜಿನಪ್ಪ ದಲಿತ ಮುಖಂಡರಾದ , ಶಿವಕುಮಾರ್ ಎಂ ವೈ, ಬಾಣದ ರಂಗಯ್ಯ, ನರಸಿಯಪ್ಪ ,ಕರ್ನಾಟಕ ದಲಿತ ಸರ್ವೋದಯ ಸಮಿತಿ ತಾಲೂಕು ಅಧ್ಯಕ್ಷ ಡಿ.ಎ,ಚ್.ನರಸಿಂಹಮೂರ್ತಿ, ದೊಡ್ಡ ಹೊಸಳ್ಳಿ ರಾಮಣ್ಣ , ಕಲಾವಿದ ಸಿದ್ದಾಪುರ ಸಂಜೀವಯ್ಯ , ಜೀವಿಕ ಮಂಜುನಾಥ್, ಗರಣಿ ಶ್ರೀನಿವಾಸ್, ಎಸ್.ಕೆ. ರಂಗನಾಥ್, ಹನುಮಂತರಾಯಪ್ಪ , ಮರಿಯಪ್ಪ, ದೊಡ್ಡೇರಿ ರಮೇಶ್, ದಾಸಪ್ಪ, ಚಿಕ್ಕಮ್ಮ ,ರಾಜು ಕೊಡ್ಲಾಪುರ, ಹರಿ ಗಣೇಶ್, ಗರಣಿ ರಂಗರಾಜು, ರಂಗನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.