ಮಡಿಕೇರಿ ಇನ್ನರ್‌ವೀಲ್‌ ಸುವರ್ಣ ಮಹೋತ್ಸವ ಆಚರಣೆ ಇಂದು

KannadaprabhaNewsNetwork |  
Published : Nov 10, 2025, 02:00 AM IST
ಲತಾ ಚಂಗಪ್ಪ ಮಾತನಾಡಿದರು.  | Kannada Prabha

ಸಾರಾಂಶ

ಸೋಮವಾರ ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಸುವರ್ಣ ಮಹೋತ್ಸವ ಆಯೋಜಿಸಲಾಗಿದೆ. ಈ ಸಂದರ್ಭ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ಇನ್ನರ್ ವೀಲ್ ಜಿಲ್ಲೆ 318 ನ ಮಡಿಕೇರಿ ಘಟಕ ಇದೀಗ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಸೋಮವಾರ ನಗರದ ಕೊಡವ ಸಮಾಜ ಸಭಾಂಗಣದಲ್ಲಿ ಸುವರ್ಣ ಮಹೋತ್ಸವ ಸಮಾರಂಭ ಆಯೋಜಿತವಾಗಿದೆ ಎಂದು ಸುವರ್ಣ ಸಮಾರಂಭ ಸಮಿತಿ ಅಧ್ಯಕ್ಷೆ ಲತಾ ಚಂಗಪ್ಪ ತಿಳಿಸಿದ್ದಾರೆ.ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಲತಾ ಚಂಗಪ್ಪ, ಸೋಮವಾರ ಸಂಜೆ 6 ಗಂಟೆಗೆ ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ಇನ್ನರ್ ವೀಲ್ ಜಿಲ್ಲೆಯ ಅಧ್ಯಕ್ಷೆ ಶಬರಿ ಕಡಿದಾಳ್ ಅಧ್ಯಕ್ಷತೆ ವಹಿಸಲಿದ್ದು, ಅಂದು ವಿವಿಧ ಕಾರ್ಯಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಲಲಿತಾ ರಾಘವನ್, ಕಾರ್ಯದರ್ಶಿ ನಮಿತಾ ರೈ, ಸುವಣ೯ ಮಹೋತ್ಸವ ಸಮಿತಿಯ ಅಧ್ಯಕ್ಷೆ ಲತಾ ಚಂಗಪ್ಪ, ಕಾರ್ಯದರ್ಶಿ ಶಫಾಲಿ ರೈ ಪಾಲ್ಗೊಳ್ಳಲಿದ್ದಾರೆ ಎಂದು ಲತಾಚಂಗಪ್ಪ ತಿಳಿಸಿದರು.

ಇನ್ನರ್ ವೀಲ್ ಸಂಸ್ಥೆಯು ಮಡಿಕೇರಿಯಲ್ಲಿ 1975 ನೇ ಜೂನ್ 27 ರಂದು ಉದ್ಘಾಟನೆಯಾಗಿತ್ತು. ಉಮಾಉಲ್ಲಾಳ್, ಡಾ. ಜಯಲಕ್ಷ್ಮಿ ಪಾಟ್ಕರ್ ಸ್ಥಾಪಕಾಧ್ಯಕ್ಷರಾಗಿ, ಅಲಮೇಲು ಗಿರಿ ಪ್ರಧಾನ ಕಾರ್ಯದಶಿ೯ಯಾಗಿದ್ದ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯನ್ನು ಕಮಲ ಪದ್ಮನಾಭನ್ ಉದ್ಘಾಟಿಸಿದ್ದರು. 12 ಸದಸ್ಯರಿಂದ ಆರಂಭವಾಗಿದ್ದ ಮಡಿಕೇರಿ ಇನ್ನರ್ ವೀಲ್ ಇದೀಗ 46 ಸದಸ್ಯರನ್ನು ಹೊಂದಿದೆ. ಇನ್ನರ್ ವೀಲ್ ಜಿಲ್ಲೆ 318 ಗೆ ಈವರೆಗೆ ಮಡಿಕೇರಿ ಇನ್ನರ್ ವೀಲ್ ನಿಂದ ಮಿನ್ನಿ ಬೋಪಯ್ಯ, ಪ್ರೇಮಾಕಾಳಪ್ಪ, ಪೂಣಿ೯ಮಾ ರವಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿ ಸಮರ್ಥ ಕಾರ್ಯನಿರ್ವಹಣೆಗೆ ಖ್ಯಾತರಾಗಿದ್ದರು.ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಬೆಳ್ಳಿ ಹಬ್ಬದ ವರ್ಷದಲ್ಲಿ ಬೇಲಾ ಪೊನ್ನಪ್ಪ ಅಧ್ಯಕ್ಷರಾಗಿದ್ದರೆ, 50 ವರ್ಷಾಚರಣೆ ಸಂದರ್ಭ ಲಲಿತಾ ರಾಘವನ್ ಅಧ್ಯಕ್ಷರಾಗಿದ್ದಾರೆ ಎಂದೂ ಅವರು ತಿಳಿಸಿದರು.ಮೆಡಿಕಲ್ ಇಕ್ಯುಪ್ ಮೆಂಟ್ ಬ್ಯಾಂಕ್:ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿಂದ ಸುವಣ೯ ಮಹೋತ್ಸವ ಸಂದರ್ಭ ಅನೇಕ ಜನಪರ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ.

ಸುವರ್ಣ ಸಂಭ್ರಮದ ಹಿನ್ನಲೆಯಲ್ಲಿ ಇನ್ನರ್ ವೀಲ್ ಸಂಸ್ಥೆಯು ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಮೆಘಾ ಯೋಜನೆಯಾಗಿ ಮೆಡಿಕಲ್ ಇಕ್ಯುಪ್ ಮೆಂಟ್ ಬ್ಯಾಂಕ್ ಪ್ರಾರಂಭಿಸಲಿದೆ. ಅಶ್ವಿನಿ ಆಸ್ಪತ್ರೆಗೆ ಇನ್ನರ್ ವೀಲ್ ಸಂಸ್ಥೆಯಿಂದ 4 ವೀ್ಲ್ ಚೇರ್, 4ಕ್ರಚಸ್, 3 ವಾಕರ್ , 2, ವಾಟರ್ ಬೆಡ್, ಸುಸಜ್ಜಿತ ಬೆಡ್ ಸೇರಿದಂತೆ ಅಂದಾಜು 1.20 ಲಕ್ಷ ರು. ಮೌಲ್ಯದ ಆರೋಗ್ಯ ಉಪಕರಣಗಳನ್ನು ಇನ್ನರ್ ವೀಲ್ ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್ ನವಂಬರ್ 10 ರಂದು ಸಂಜೆ 4 ಗಂಟೆಗೆ ನೀಡಲಿದ್ದಾರೆ. ಈ ಉಪಕರಣಗಳನ್ನು ಖರೀದಿಸಲು ಆಥಿ೯ಕವಾಗಿ ಸಬಲರಲ್ಲದ ಆದರೆ ಉಪಕರಣಗಳು ಅತ್ಯಗತ್ಯವಾಗಿರುವ ರೋಗಿಗಳಿಗೆ ಮನೆಗಳಲ್ಲಿ ಬಳಸಲು ಸಾಧ್ಯವಾಗುವಂತೆ ಅವರ ಉಪಯೋಗಕ್ಕಾಗಿ ಆಸ್ಪತ್ರೆಯಿಂದ ನಿಗದಿತ ಬಾಡಿಗೆ ದರದ ಆಧಾರದಲ್ಲಿ ನೀಡಲಾಗುತ್ತದೆ. ಬಳಕೆಯಾದ ನಂತರ ರೋಗಿಗಳು ಆ ಉಪಕರಣವನ್ನು ಮರಳಿ ಅಶ್ವಿನಿ ಆಸ್ಪತ್ರೆಗೆ ಹಿಂದಿರಿಗಿಸಬೇಕಾಗಿದೆ ಎಂದೂ ಸುದ್ದಿಗೋಷ್ಟಿಯಲ್ಲಿ ಲತಾಚಂಗಪ್ಪ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಇನ್ನರ್ ವೀಲ್ ಅಧ್ಯಕ್ಷೆ ಲಲಿತಾ ರಾಘವನ್, ಕಾರ್ಯದರ್ಶಿ ನಮಿತಾ ರೈ, ಸುವರ್ಣ ಮಹೋತ್ಸವ ಆಚರಣಾ ಸಮಿತಿ ಕಾರ್ಯದರ್ಶಿ ಶಫಾಲಿ ರೈ, ನಿರ್ದೇಶಕಿ ಉಮಾಗೌರಿ ಶಿವಪ್ರಸಾದ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ