ಕನ್ನಡಪ್ರಭ ವಾರ್ತೆ ಯಳಂದೂರು
ಜಿಲ್ಲೆಯಲ್ಲೇ ಪ್ರಥಮವಾಗಿ ಇವರು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಅಭಿವೃದ್ಧಿಪಡಿಸಿರುವ ತಳಿಯ ಬೆಳೆಗಳನ್ನು ಬೆಳೆದು ಪ್ರಥಮ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 2016ರಿಂದಲೂ ಈ ತಳಿಯನ್ನು ಇವರು ಬೆಳೆಯುತ್ತಿದ್ದಾರೆ. ಆರಕ ಎಬಿಸಿಡಿ ತಳಿಯ ಟೊಮೆಟೊ, ಆರಕ ಪ್ರಜ್ವಲ್, ಆರಕ ನಿರಂತರ ತಳಿಯ ಸುಗಂಧರಾಜ ಹೂವಿನ ವ್ಯವಸಾಯ ಮಾಡುತ್ತಿದ್ದಾರೆ.
ಸಾವಯವ ಗೊಬ್ಬರವೇ ಜೀವಾಳ:ಮಹದೇವಸ್ವಾಮಿ ಒಟ್ಟು ತಮ್ಮ 10 ಎಕರೆ ಕೃಷಿ ಜಮೀನಿನಲ್ಲಿ 4.5 ಎಕರೆ ಜಮೀನಿನಲ್ಲಿ ಐಐಎಚ್ಆರ್ ಸಂಸ್ಥೆಯವರು ನೀಡಿದ್ದ ಸುಗಂಧರಾಜ ಹೂವು ಹಾಗೂ ಟೊಮೆಟೊ ಬೀಜಗಳನ್ನು ಬಳಸಿ ಉತ್ತಮ ಬೆಳೆಯನ್ನು ಬೆಳೆದಿದ್ದಾರೆ. ಆದರೆ ಇದಕ್ಕೆ ಇದುವರೆವಿಗೂ ರಾಸಾಯನಿಕ ಗೊಬ್ಬರವನ್ನು ಬಳಸಿಲ್ಲ. ಇದಕ್ಕೆ ಸಾವಯವ ಗೊಬ್ಬರವನ್ನೇ ಹಾಕಿ ಬೆಳೆದಿದ್ದಾರೆ. ಇವರು ಬೆಳೆಯುವ ಹೂವು ತರಕಾರಿಗೆ ತುಂಬಾ ಬೇಡಿಕೆ ಇದೆ. ಇವರು ತಮ್ಮ ಬೆಳೆಗಳಿಗೆ ಎರೆಹುಳು ಗೊಬ್ಬರ, ಪಂಚಗವ್ಯ, ಜೀವಾಮೃತವನ್ನು ಬಳಸಿಕೊಳ್ಳುತ್ತಾರೆ. ಇದನ್ನು ನಿಗದಿತ ಸಮಯಕ್ಕೆ ಗಿಡಕ್ಕೆ ನೀಡಿ ಗಿಡದ ಪೋಷಕಾಂಶಗಳನ್ನು ಕಾಯ್ದಿರಿಸಿದರೆ ಉತ್ತಮ ಇಳುವರಿ ಬರುತ್ತದೆ ಎಂಬುದು ಇವರ ಅನುಭವದ ನುಡಿ. ಇದರೊಂದಿಗೆ ಅಡಕೆ, ತೆಂಗು, ಕಬ್ಬು, ಅರಿಶಿನ ಸೇರಿದಂತೆ ಮಿಶ್ರ ಬೇಸಾಯ ಪದ್ಧತಿಯನ್ನು ಬಳಸಿಕೊಂಡು ವ್ಯವಸಾಯ ಮಾಡಿ ಲಾಭಗಳಿಸುತ್ತಿದ್ದಾರೆ.
ವಿಜ್ಞಾನಿಗಳಾದ ಡಾ. ಸುಮಂಗಲಾ, ಡಾ.ಉಷಾ ಭಾರತಿ, ಡಾ.ಸೆಂಥಿಲ್ಕುಮಾರ್, ಡಾ.ವಿ.ಶಂಕರ್ ಕರುಣಾ ಟ್ರಸ್ಟ್ನ ಕಾರ್ಯದರ್ಶಿ ವೆಂಕಟನಾರಾಯಣ, ಕಾರ್ಯಕ್ರಮದ ಸಂಯೋಜಕ ಪುಟ್ಟರಂಗೇಗೌಡ, ಅನೇಕರು ಇದ್ದರು.