ಗಜೇಂದ್ರಗಡ: ಕಲ್ಪನೆಗೆ ನಿಲುಕದ ರಾಮಾಯಣ ಕೃತಿ ರಚಿಸಿದ ಮಹರ್ಷಿ ವಾಲ್ಮೀಕಿ ಮನುಕುಲದ ದಾರ್ಶನಿಕರಾಗಿದ್ದು, ಅವರ ಆದರ್ಶ ಯುವ ಸಮೂಹ ಅಳವಡಿಸಿಕೊಳ್ಳಬೇಕು ಎಂದು ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಹೇಳಿದರು.
ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಗುರುವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ಸರ್ಕಾರಗಳು ಆಚರಣೆಗೆ ತಂದಿರುವ ಜಯಂತಿಗಳು ಕೇವಲ ಆಚರಣೆಗೆ ಸಿಮಿತವಾಗಬಾರದು. ಜಯಂತಿ ಆಚರಣೆ ಹಿಂದಿರುವ ಮಹತ್ವ ತಿಳಿದು ಜಯಂತಿ ಆಚರಣೆಗೆ ನಾವೆಲ್ಲರೂ ಮುಂದಾಗಬೇಕಿದೆ. ಅದರಲ್ಲೂ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಕಾವ್ಯವು ಕಲ್ಪನೆಗೂ ನಿಲಕದ್ದು, ದೇಶಕ್ಕಲ್ಲದೆ ವಿಶ್ವಕ್ಕೆ ಮಾದರಿಯಾಗುವಂತಹ ಕಾವ್ಯವಾಗಿದೆ. ವಾಲ್ಮೀಕಿ ವಿಚಾರಧಾರೆಗಳು ಇಂದಿನ ಯುವ ಪಿಳೀಗಿಗೆ ಆದರ್ಶವಾಗಬೇಕು ಎಂದರು.
ಪುರಸಭೆ ಸ್ಥಾಯಿ ಸಮಿತಿ ಚೇರಮನ್ ಮುದಿಯಪ್ಪ ಮುಧೋಳ ಹಾಗೂ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಕಾವ್ಯ ಸರ್ವಶ್ರೇಷ್ಠವಾದದ್ದು. ಪೋಷಕರು ಮಕ್ಕಳಿಗೆ ಇತಿಹಾಸ ಹಾಗೂ ಪರಂಪರೆ ತಿಳಿಸುವುದರ ಜತೆಗೆ ಮಾನವಕುಲದ ಒಳಿತಿಗಾಗಿ ನೀಡಿದ ವಿಚಾರ ಅಳವಡಿಸಿಕೊಳ್ಳಲು ನೀತಿಪಾಠದ ಅವಶ್ಯಕತೆಯಿದೆ. ಹೀಗಾಗಿ ಪಾಲಕರು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಉತ್ತಮ ವ್ಯಕ್ತಿಗಳನ್ನಾಗಿ ನಿರ್ಮಿಸಿ ದೇಶಕ್ಕೆ ಕೊಡುಗೆ ನೀಡಬೇಕಿದೆ ಎಂದರು.ಪುರಸಭೆ ಸದಸ್ಯ ಶರಣಪ್ಪ ಉಪ್ಪಿನಬೆಟಗೇರಿ ಹಾಗೂ ಉಪನ್ಯಾಸಕ ಪ್ರಕಾಶ ತಳವಾರ ಮಾತನಾಡಿದರು.
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಗಜೇಂದ್ರಗಡ ಮಹರ್ಷೀ ವಾಲ್ಮೀಕಿ ಸಮಾಜದ ಅಧ್ಯಕ್ಷ ಯಮನೂರಪ್ಪ ತಳವಾರ, ಪುರಸಭೆ ಸದಸ್ಯ ಮೂಕಪ್ಪ ನಿಡಗುಂದಿ, ಮುಖಂಡರಾದ ಹುಚ್ಚಪ್ಪ ತಳವಾರ, ದುರಗಪ್ಪ ಮುಧೋಳ, ಭೀಮಣ್ಣ ತಳವಾರ, ಸಿದ್ದಪ್ಪ ಚೋಳಿನ, ಶ್ರೀಕಾಂತ ಹರಪನಹಳ್ಳಿ, ಲಕ್ಷ್ಮಣ ತಳವಾರ, ಫಕೀರಪ್ಪ ತಳವಾರ, ಎಂ.ಎಚ್. ರಂಗಣ್ಣವರ ಹಾಗೂ ಮಲ್ಲಿಕಾರ್ಜುನಗೌಡ ಬಿ, ರಾಘವೇಂದ್ರ ಮಂತಾ, ರಿಯಾಜ ಒಂಟಿ ಸೇರಿ ಇತರರು ಇದ್ದರು.