ಧಾರ್ಮಿಕ ನಂಬಿಕೆಯಲ್ಲಿ ಅಡಗಿದೆ ಬದುಕಿನ ಶ್ರೇಷ್ಠತೆ

KannadaprabhaNewsNetwork |  
Published : Feb 28, 2025, 12:47 AM IST
40 | Kannada Prabha

ಸಾರಾಂಶ

ಮನುಷ್ಯನಲ್ಲಿಯ ಅಂಧಕಾರ, ಅಹಂಕಾರ ಮತ್ತು ವಿಕಾರಾದಿಗಳನ್ನು ದೂರ ಮಾಡುವ ಮೂಲಕ ಶಿವರಾತ್ರಿಯ ಧ್ಯಾನವು ಶಾಂತಿ, ನೆಮ್ಮದಿಯನ್ನು ಪ್ರಾಪ್ತಿಗೊಳಿಸುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರುಪ್ರತಿ ಜೀವಿಯಲ್ಲಿಯೂ ದೇವರಿದ್ದಾನೆ, ಧಾರ್ಮಿಕ ನಂಬಿಕೆಯಲ್ಲಿ ಬದುಕಿನ ಶ್ರೇಷ್ಠತೆ ಅಡಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಅಶೋಕ ರಸ್ತೆಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಹಳೆ ಸಂತೆಪೇಟೆಯ ಪ್ರಸನ್ನ ನಂಜುಂಡೇಶ್ವರ ದೇವಸ್ಥಾನ, ದೇವರಾಜ ಮೊಹಲ್ಲಾ ದಿವಾನ್ಸ್ ರಸ್ತೆಯ ಶ್ರೀ ಅಮೃತೇಶ್ವರ ದೇವಸ್ಥಾನ ಹಾಗೂ ಮೇಟಗಳ್ಳಿಯ ಶ್ರೀ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡಿದ್ದರು.ನಂತರ ಮಾತನಾಡಿದ ಅವರು, ಮನುಷ್ಯನಲ್ಲಿಯ ಅಂಧಕಾರ, ಅಹಂಕಾರ ಮತ್ತು ವಿಕಾರಾದಿಗಳನ್ನು ದೂರ ಮಾಡುವ ಮೂಲಕ ಶಿವರಾತ್ರಿಯ ಧ್ಯಾನವು ಶಾಂತಿ, ನೆಮ್ಮದಿಯನ್ನು ಪ್ರಾಪ್ತಿಗೊಳಿಸುತ್ತದೆ ಎಂದು ಹೇಳಿದರು.ಬಿಜೆಪಿ ಮುಖಂಡರಾದ ಎಸ್.ಕೆ. ದಿನೇಶ್, ರಾ. ಪರಮೇಶ್ ಗೌಡ, ಸಂದೇಶ್, ಸತೀಶ್, ಬ್ರಹ್ಮಚಾರ್, ವಿ.ಎಸ್. ಕಿರಣ್, ರಾಮು, ಅರುಣ್, ವಿನೋದ್ ಅರಸ್, ಪ್ರಮೋದ್ ಗೌಡ, ಮಲ್ಲಿಕ್, ಕಾಂತ , ದೇವರಾಜ್, ಸಂಜೀವಿನಿ ಕುಮಾರ್, ದಿವಾಕರ್, ಗೋಪಿ, ರವಿಕುಮಾರ್, ಚಿಕ್ಕರಾಮಣ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ