ಮಕರ ಸಂಕ್ರಾಂತಿ ಸಾಮರಸ್ಯ ಬೆರೆಸುವ ಹಬ್ಬ: ಗಾಯಕಿ ಸಂವೇದಿತಾ

KannadaprabhaNewsNetwork |  
Published : Jan 16, 2025, 12:47 AM IST
ಕ್ಯಾಪ್ಷನ14ಕೆಡಿವಿಜಿ34 ದಾವಣಗೆರೆಯ ಆದರ್ಶ ಯೋಗ ಪ್ರತಿಷ್ಠಾನದ ವಿಶ್ವಯೋಗ ಮಂದಿರದಲ್ಲಿ ಸಂಕ್ರಾಂತಿ ಸುಗ್ಗಿಯ ಹಾಡುಗಳು  ಜಾನಪದ ಸಂಗೀತ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಸಂಕ್ರಾಂತಿ ಹಬ್ಬವು ಸಮಾಜ ಮತ್ತು ಕುಟುಂಬಗಳ ಶಾಂತಿ ಮತ್ತು ಸಾಮರಸ್ಯ ಬೆರೆಸುವ ಹಬ್ಬವಾಗಿದೆ ಎಂದು ಕುಶಾಲ ನಗರದ ಹಿನ್ನೆಲೆ ಗಾಯಕಿ ಸಂವೇದಿತಾ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ ಸಂಕ್ರಾಂತಿ ಹಬ್ಬವು ಸಮಾಜ ಮತ್ತು ಕುಟುಂಬಗಳ ಶಾಂತಿ ಮತ್ತು ಸಾಮರಸ್ಯ ಬೆರೆಸುವ ಹಬ್ಬವಾಗಿದೆ ಎಂದು ಕುಶಾಲ ನಗರದ ಹಿನ್ನೆಲೆ ಗಾಯಕಿ ಸಂವೇದಿತಾ ಹೇಳಿದರು.

ನಗರದ ದೇವರಾಜ ಅರಸು ಬಡಾವಣೆಯ ಆದರ್ಶ ಯೋಗ ಪ್ರತಿಷ್ಠಾನ ವಿಶ್ವಯೋಗ ಮಂದಿರದಲ್ಲಿ ಮಂಗಳವಾರ ಬೆಳಗ್ಗೆ ಆಯೋಜಿಸಲಾಗಿದ್ದ ಸಂಕ್ರಾಂತಿ ಸುಗ್ಗಿಯ ಹಾಡುಗಳು ಜಾನಪದ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿ ಅವರು ಮಾತನಾಡಿದರು.

ನಮ್ಮ ನಾಡು, ನುಡಿ, ಸಂಸ್ಕೃತಿ, ಸಂಸ್ಕಾರಗಳಿಂದ ಕೂಡಿದೆ. ಸಾಂಸ್ಕೃತಿಕವಾಗಿ ಶ್ರೀಮಂತ ದೇಶ ನಮ್ಮದು. ನಮ್ಮ ಪಾರಂಪರಿಕ ಹಬ್ಬಗಳು ಶ್ರೀಮಂತವಾಗಿದ್ದು, ಆಚರಿಸಲು ಅತ್ಯಂತ ಸಂತೋಷನ್ನುಂಟು ಮಾಡುತ್ತವೆ. ಸುಗ್ಗಿ ಸಂಭ್ರಮದ ಸಂಕ್ರಾಂತಿ ಹಬ್ಬವು ಕೇವಲ ಮನೆಯಲ್ಲಷ್ಟೇ ಮಾಡುವ ಹಬ್ಬವಲ್ಲ. ಇದು ಸಮಾಜದ ನಡುವೆ ಪ್ರೀತಿ, ವಿಶ್ವಾಸ ಬೆರೆಸುವ ಹಬ್ಬವಾಗಿದೆ. ಏಕತೆ, ಸಾಮರಸ್ಯ, ಆಧ್ಯಾತ್ಮಿಕ, ಭಾವಧಾರೆ, ಹಲವು ಸಂಪ್ರದಾಯಗಳ ಆಚರಣೆ ಈ ಹಬ್ಬದ ವಿಶೇಷಗಳು ಎಂದು ಹೇಳಿದರು.

ಅನಂತರ ಸಂವೇದಿತಾ ಅವರು ಗ್ರಾಮೀಣ ಸೊಗಡನ್ನು ಬಿಂಬಿಸುವ ಜಾನಪದ ಹಾಡುಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಯೋಗತಜ್ಞ ಡಾ.ರಾಘವೇಂದ್ರ ಗುರೂಜಿ, ಯೋಗ ಅಧ್ಯಯನ ವಿಭಾಗದ ವಿ.ಕೆ.ರಾಹುಲ್, ಕಾವ್ಯ, ಚೇತನ್, ಜ್ಯೋತಿಲಕ್ಷ್ಮೀ ವಾಸುದೇವ, ಸಂಧ್ಯಾ, ಬೇಬಿ ಗುರುಪ್ರಿಯ, ಡಾ.ರವಿಕುಮಾರ, ವೀಣಾ, ಎಚ್.ಸಂತೋಷ್, ಪತ್ರಕರ್ತ ಎಚ್.ಎನ್. ಪ್ರಕಾಶ್, ನಿತಿನ್, ರಾಘವೇಂದ್ರ ಇತರರು ಇದ್ದರು.

- - - -14ಕೆಡಿವಿಜಿ34.ಜೆಪಿಜಿ:

ದಾವಣಗೆರೆಯ ಆದರ್ಶ ಯೋಗ ಪ್ರತಿಷ್ಠಾನ ವಿಶ್ವಯೋಗ ಮಂದಿರದಲ್ಲಿ ಸಂಕ್ರಾಂತಿ ಸುಗ್ಗಿಯ ಹಾಡುಗಳು ಜಾನಪದ ಸಂಗೀತ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ