ವಿದ್ಯಾ ಶಕ್ತಿ ಕಾರ್ಯಕ್ರಮ ಯಶಸ್ವಿಗೊಳಿಸಿ

KannadaprabhaNewsNetwork |  
Published : Jul 07, 2025, 12:17 AM IST
6ಡಿಡಬ್ಲೂಡಿ5ನೌಕರರ ಭವನದಲ್ಲಿ ನಡೆದ ಸಂಘದ ಜಿಲ್ಲಾ ಮಟ್ಟದ ಕಾರ್ಯಕಾರಣಿ ಸಭೆಯಲ್ಲಿ ನಾರಾಯಣ ಭಜಂತ್ರಿ ಮಾತನಾಡಿದರು.  | Kannada Prabha

ಸಾರಾಂಶ

ತುಂಬ ಮುತುವರ್ಜಿ ವಹಿಸಿ ವಿದ್ಯಾಕಾಶಿಯ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಈ ಪ್ರಯತ್ನ ನಡೆಯುತ್ತಿದೆ. ಶಿಕ್ಷಕರೆಲ್ಲರೂ ಕೈ ಜೋಡಿಸಿ, ಕಂಕಣ ಕಟ್ಟಿ ಕೆಲಸ ಮಾಡೋಣ

ಧಾರವಾಡ: ಜಿಲ್ಲಾಡಳಿತವು ಧಾರವಾಡ ಐಐಐಟಿ ಜೊತೆಗೂಡಿ ಹಮ್ಮಿಕೊಂಡಿರುವ ವಿದ್ಯಾಶಕ್ತಿ ಕಾರ್ಯಕ್ರಮ ಯಶಸ್ವಿಗೊಳಿಸಿ, ಧಾರವಾಡದ ಹೆಸರು ಉಳಿಸಲು ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಭಜಂತ್ರಿ ಹೇಳಿದರು.

ನೌಕರರ ಭವನದಲ್ಲಿ ನಡೆದ ಸಂಘದ ಜಿಲ್ಲಾಮಟ್ಟದ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿ, ತುಂಬ ಮುತುವರ್ಜಿ ವಹಿಸಿ ವಿದ್ಯಾಕಾಶಿಯ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಈ ಪ್ರಯತ್ನ ನಡೆಯುತ್ತಿದೆ. ಶಿಕ್ಷಕರೆಲ್ಲರೂ ಕೈ ಜೋಡಿಸಿ, ಕಂಕಣ ಕಟ್ಟಿ ಕೆಲಸ ಮಾಡೋಣ ಎಂದರು.

ಕಾರ್ಯದರ್ಶಿ ಭೀಮರಾವ್‌ ಬಶೆಟ್ಟಿ ಹಿಂದಿನ ಸಭೆಯ ನಡಾವಳಿ ಓದಿದರು. ಉಪಾಧ್ಯಕ್ಷ ಪ್ರಮೋದ ವಾದಿರಾಜ 2024-25 ನೇ ಸಾಲಿನ ಖರ್ಚು ವೆಚ್ಚಗಳ ಮಂಡಿಸಿದರು. ಪ್ರೌಢಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರಾಗಿ/ ಕಾಲೇಜು ಉಪನ್ಯಾಸಕರಾಗಿ ಬಡ್ತಿ ನೀಡವುದು ಸರ್ಕಾರದಿಂದ ವಿಳಂಬವಾಗುತ್ತಿದ್ದು, ಶೀಘ್ರದಲ್ಲಿ ನೀಡುವಂತೆ ಒತ್ತಾಯಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು.

ಪದಾಧಿಕಾರಿಗಳಾದ ಶ್ರೀಧರ ಗಸ್ತಿ, ರಮೇಶ ತಳವಾರ, ವಿ.ಜಿ. ಗಲಬಿ, ಮಂಜುನಾಥ ಕುರಕುರಿ, ಆರ್‌.ಎಸ್‌.ಗೂಳೇರ, ತಿಪ್ಪೆಸ್ವಾಮಿ ಡಿ, ಬಸವರಾಜ ವಾಸನದ, ಶಿವಾನಂದ ಕವಟಕೊಪ್ಪ, ಪ್ರಕಾಶ ಬೂತಲ, ಎ.ಕೆ. ಮುಜಾವರ, ಎಸ್‌.ಕೆ. ಕಮ್ಮಾರ, ಹೇಮಲತಾ ಉಪನಾಳ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!