ಕನ್ನಡಪ್ರಭ ವಾರ್ತೆ ಚಿಕ್ಕೋಡಿಸಂವಿಧಾನಾತ್ಮಕ, ಸ್ವಾಭಿಮಾನದ ನಮ್ಮ ಮತದಾನದ ಹಕ್ಕನ್ನು ಸುಭದ್ರ ಸರ್ಕಾರ ನಿರ್ಮಿಸಲು ಪ್ರತಿಯೊಬ್ಬರು ತಮ್ಮ ಮತವನ್ನು ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ಚಲಾಯಿಸಿ ಪ್ರತಿಶತ 100 ರಷ್ಟು ಮತದಾನ ಎಲ್ಲ ಮತ ಕೇಂದ್ರಗಳಲ್ಲಿ ಕಡ್ಡಾಯ ಮತದಾನ ಮಾಡಬೇಕೆಂದು ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಹೇಳಿದರು.
ಡಾ. ಕೃಷ್ಣರಾಜ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತಿ ಬೆಳಗಾವಿ ಲೆಕ್ಕಧಿಕಾರಿಗಳಾದ ಗಂಗಾ ಹೀರೆಮಠ ಐಯುಸಿ ಸಂಜೋಜಕರಾದ ಪ್ರಮೋದ ಗೊಡೇಕರ ಉಪಸ್ಥಿತರಿದ್ದರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಭರತ ಕಲಾಚಂದ್ರ, ರಾಮಚಂದ್ರ ಕಾಂಬಳೆ ಉಪಸ್ಥಿತರಿದ್ದರು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ ಮತದಾನ ಪ್ರತಿಜ್ಞಾನ ವಿಧಿ ಬೋಧಿಸಿದರು. ರಂಗದರ್ಶನ ಕಲಾತಂಡ ಧುಳಗನವಾಡಿ, ಡಾ.ಅಂಬೇಡ್ಕರ್ ಕಲಾತಂಡ ಚಿಂಚಲಿ ತಂಡದವರು ನಮ್ಮ ಮತ ಮಾರಾಟಕ್ಕಿಲ್ಲ ಬೀದಿನಾಟಕ ಜಾಗೃತಿ ಹಾಡುಗಳ ಮೂಲಕ ಸಾರ್ವಜನಿಕರಿಗೆ ಮನ ಮುಟ್ಟುವಂತೆ ಕಲಾಪ್ರದರ್ಶನ ನೀಡಿ ಸಮುದಾಯಕ್ಕೆ ಅರಿವು ಮೂಡಿಸಿದರು. ಚಿಕ್ಕೋಡಿ ಪಟ್ಟಣದ ಬಸ್ ನಿಲ್ದಾಣ, ಅಂಬೇಡ್ಕರ್ ನಗರ ಬಸವ ಸರ್ಕಲ್ನಲ್ಲಿ ಬೀದಿನಾಟಕ ಮೂಲಕ ಪ್ರದರ್ಶನ ನೀಡಿದರು.