- 896 ಫಲಾನುಭವಿಗಳಿಗೆ ಲಾಟರಿ ಮೂಲಕ ಪಾರದರ್ಶಕ ಆಯ್ಕೆ
- ಶೀಘ್ರದಲ್ಲೇ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ರಿಂದ ಹಕ್ಕುಪತ್ರಸಿ.ಸಿದ್ದರಾಜು, ಮಾದಹಳ್ಳಿ
ಕನ್ನಡಪ್ರಭ ವಾರ್ತೆ ಮಳವಳ್ಳಿಐದು ದಶಕಗಳಿಂದ ನಿವೇಶನಕ್ಕಾಗಿ ಕಾಯುತ್ತಿದ್ದ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನದ ನಂಬರ್ ಹಂಚಿಕೆಯಾಗಿದ್ದು, ಸ್ವಂತ ಮನೆ ಕಟ್ಟುವ ಬಡವರ ಆಸೆ ಚಿಗುರೊಡೆದಿದೆ.
1974ರಲ್ಲಿ ಭೂಸ್ವಾಧೀನ:
ಮೈಸೂರು ರಸ್ತೆಗೆ ಹೊಂದುಕೊಂಡಿರುವ ಜಾಗವನ್ನು ವಾಣಿಜ್ಯ ಉದ್ದೇಶಕ್ಕಾಗಿ ಹರಾಜು ಹಾಕಲು ಪುರಸಭೆ ಪ್ರಕಟಣೆ ಹೊರಡಿಸಿರುವುದನ್ನು ವಿರೋಧಿಸಿ ಬಡವರಿಗೆ ಮಾತ್ರ ನಿವೇಶನ ನೀಡಬೇಕು. ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಬಾರದೆಂದು ಹೈಕೋರ್ಟ್ಗೆ ಮೊರೆ ಹೋಗಿದ್ದರು.
೧೯೯೪ರಲ್ಲಿ ಅಂದಿನ ಪುರಸಭೆ ಅಧ್ಯಕ್ಷರಾಗಿದ್ದ ದೊಡ್ಡಯ್ಯ ಹಾಗೂ ಮುಖ್ಯಾಧಿಕಾರಿ ಚಿಕ್ಕನಂಜಯ್ಯ ಅವರು ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಎರಡು ಮೂರು ದಶಕಗಳ ನಂತರ ಅಂದಿನ ಶಾಸಕರಾಗಿದ್ದ ಪಿ.ಎಂ.ನರೇಂದ್ರಸ್ವಾಮಿ ಅವರು ಎಲ್ಲಾ ನ್ಯಾಯಾಂಗ ಸಮಸ್ಯೆಗಳನ್ನು ಬಗೆಹರಿಸಿ ನಿವೇಶನಗಳನ್ನು ಹಂಚಿಕೆ ಮಾಡುವ ಸಂಬಂಧ ಎಲ್ಲಾ ವಾರ್ಡ್ಗಳಲ್ಲಿಯೂ ಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರು.
ಭೂ-ಮಾಲೀಕರು ಮತ್ತೆ ೨೦೧೭ರಲ್ಲಿ ಹೈಕೋರ್ಟ್ನಲ್ಲಿ ಭೂ-ಸ್ವಾಧೀನ ಪ್ರಕ್ರಿಯೆಗೆ ತಡೆಯಾಜ್ಞೆ ತಂದರು. 2018ರಲ್ಲಿ ರಾಜಕೀಯ ಬದಲಾವಣೆಯಿಂದಾಗಿ ೨೦೨೩ರ ವರವಿಗೂ ಯಾವುದೇ ನಿವೇಶನ ಹಂಚಿಕೆ ಸಂಬಂಧ ಯಾವುದೇ ಪ್ರಕ್ರೀಯೆ ನಡೆಯಲಿಲ್ಲ. ೨೦೨೩ರಲ್ಲಿ ಮೂರನೇ ಭಾರಿಗೆ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಅವರು ನ್ಯಾಯಾಲಯಕ್ಕೆ ಬೇಕಾದ ದಾಖಲಾತಿಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ೧೭ಮಂದಿ ಭೂ ಮಾಲೀಕರಿಗೆ ತಲಾ ೩೦*೪೦ ಅಳತೆಯ ನಿವೇಶನ ನೀಡುವುದರ ಜೊತೆಗೆ ಬಿಪಿಎಲ್ ಕಾರ್ಡ್ ಹೊಂದಿರುವ ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ನ್ಯಾಯಾಲಯವು ಅದೇಶ ಹೊರಡಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಿತು.
೨೦೧೭ರಲ್ಲಿ ಆಯ್ಕೆಯಾಗಿದ್ದ ಫಲಾನುಭವಿಗಳನ್ನು ಪುರಸಭೆಯಿಂದ ಪುನರ್ ಪರಿಶೀಲಿಸಿ ನಿವೇಶನ ಹೊಂದಿರುವವರು ಹಾಗೂ ನಿಧನ ಹೊಂದಿದವರನ್ನು ತೆಗೆದು ಅಂತಿಮವಾಗಿ ೫೧೫ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಉಳಿದಿರುವ ನಿವೇಶನಕ್ಕೆ ಮತ್ತೆ ಅರ್ಜಿ ಆಹ್ವಾನಿಸಲಾಗಿತ್ತು. ಸಲ್ಲಿಕೆಯಾದ ೧೫೦೦ ಅರ್ಜಿಗಳಲ್ಲಿ ೩೮೧ ಮಂದಿಯನ್ನು ಆಯ್ಕೆ ಮಾಡಲಾಯಿತು.
- ಪಿ.ಎಂ ನರೇಂದ್ರಸ್ವಾಮಿ ಕೃಷಿ ಸಚಿವರುಕಳೆದ ನಾಲ್ಕು ದಶಕಗಳಿಂದ ತಲೆದೋರಿದ್ದ ನ್ಯಾಯಾಲಯದ ಸಮಸ್ಯೆಗಳನ್ನು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಬಗೆಹರಿಸಿ ನಿವೇಶಕ ಹಂಚಿಕೆ ಮಾಡುತ್ತಿದ್ದಾರೆ. ನಿವೇಶನ ಪಡೆದ ಫಲಾನುಭವಿಗಳು ೨ ವರ್ಷದೊಳಗೆ ಮನೆ ಕಟ್ಟಿಕೊಳ್ಳಬೇಕು. ಸುಮಾರು ೨೦ ವರ್ಷ ಬೇರೆಯವರಿಗೆ ಮಾರುವಂತಿಲ್ಲ. ಸರ್ಕಾರದ ಆದೇಶವನ್ನು ದಿಕ್ಕರಿಸಿದರೇ ನಿವೇಶನವನ್ನು ವಾಪಸ್ ಪಡೆಯಲಾಗುತ್ತದೆ.
- ಡಾ. ಕುಮಾರ, ಜಿಲ್ಲಾಧಿಕಾರಿ, ಮಂಡ್ಯ