ಕನ್ನಡಪ್ರಭ ವಾರ್ತೆ ಹಾಸನ
ಟಿಪ್ಪು ನಗರದ ಅಖಿಲ್ ಪಾಷ(25) ಆತ್ಮಹತ್ಯೆ ಮಾಡಿಕೊಂಡಾತ. ಈತ ಮೂರು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ. ಆತನ ತಂದೆ ಸೈಯ್ಯದ್ ಪಾಷ ವಿನಾಕಾರಣ ಮಗ ಸೊಸೆಗೆ ಕಿರುಕುಳ ನೀಡುತ್ತಿದ್ದರೆಂದು ಆರೋಪ ಮಾಡಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಅಖಿಲ್ ಪಾಷ ತನ್ನ ಡ್ರೈವಿಂಗ್ ಲೈಸನ್ಸ್, ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಹಾಸನದ ಪೆನ್ಷನ್ ಮೊಹಲ್ಲಾದಲ್ಲಿರುವ ತನ್ನ ತಂದೆ ಮನೆಯಲ್ಲೇ ಬಿಟ್ಟಿದ್ದ. ಅವುಗಳನ್ನು ವಾಪಸ್ ಕೊಡುವಂತೆ ಕೇಳಿದಾಗಲೂ ತಂದೆ ಅವುಗಳನ್ನು ಕೊಡದಿದ್ದಾಗ ಜಗಳವಾಗಿತ್ತು. ಈ ಸಂಬಂಧ ಅಖಿಲ್ ಪಾಷ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಕುರಿತಾಗಿ ಸಮಾಜದ ಮುಖಂಡರು ಕೂಡ ಹಲವು ಬಾರಿ ರಾಜಿ ಸಂಧಾನ ಮಾಡಿದ್ದರು. ದೂರಿನ ಅನ್ವಯ ಸೈಯ್ಯದ್ ಪಾಷನನ್ನು ಪೊಲೀಸರು ಠಾಣೆಗೆ ಕರೆದು ವಿಚಾರಿಸಿದಾಗ ಯಾವ ದಾಖಲೆಗಳು ನನ್ನ ಬಳಿ ಇಲ್ಲ ಎಂದು ಹೇಳಿದ್ದಾರೆ. ಇದರಿಂದ ಮನನೊಂದ ಅಖಿಲ್ ಪಾಷ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈ ಬಗ್ಗೆ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.