)
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಈ ಮೊದಲು ಸೆ.1 ರಿಂದ 7ರವರೆಗೆ ನಿಗದಿಯಾಗಿದ್ದ ಈ ಶಿಬಿರವನ್ನು, ಸಾರ್ವಜನಿಕರ ಬೇಡಿಕೆ ಮತ್ತು ವಿನಂತಿ ಪುರಸ್ಕರಿಸಿ ಮತ್ತೆ ಸೆ.15 ರಿಂದ ಪುನಾರಂಭಿಸಿ 19 ರವರೆಗೆ ವಿಸ್ತರಿಸಲಾಗಿದ್ದು, ಪ್ರತಿದಿನ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಈ ಶಿಬಿರ ನಡೆಯಲಿದೆ.
ಶಿವಮೊಗ್ಗ ಹಾಗೂ ಸುತ್ತಮುತ್ತ ಜಿಲ್ಲೆ ಮಾತ್ರವಲ್ಲದೆ ಬೆಂಗಳೂರು, ಮೈಸೂರು, ಕೊಡಗು ಹಾಗೂ ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಪ್ರತಿದಿನ ಹಲವಾರು ಸಾರ್ವಜನಿಕರು ಈ ಉಚಿತ ಶಿಬಿರದ ಸೌಲಭ್ಯ ಪಡೆಯಲು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ದೂರದ ಊರುಗಳಿಂದ ಬರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಲ್ಲಿ ಆಸ್ಪತ್ರೆ ಆಡಳಿತ ಮಂಡಳಿಯು ಶಿಬಿರದ ಅವಧಿಯನ್ನು ವಿಸ್ತರಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.ಬಿದ್ದು ಗಾಯಗೊಂಡು, ಸರಿಯಾದ ವೈದ್ಯಕೀಯ ಚಿಕಿತ್ಸೆ ಪಡೆಯದೆ ನಾಟಿ ಕಟ್ಟು (ಸಂಪ್ರದಾಯಿಕ ಕಟ್ಟು) ಮಾಡಿಸಿಕೊಂಡು ಕಾಲು ಡೊಂಕಾಗಿಸಿಕೊಂಡಿರುವವರು, ಸುದೀರ್ಘ ಅವಧಿಯಿಂದ ಹಳೆ ಮಂಡಿನೋವಿನಿಂದ ಬಳಲುತ್ತಿರುವವರು ಹಾಗೂ ಎಲ್ಲೂ ಸೂಕ್ತ ಪರಿಹಾರ ಸಿಗದೆ ಕಂಗಾಲಾದವರು. ಎರಡು ಮಂಡಿಗಳು ಸಂಪೂರ್ಣ ಡೊಂಕಾಗಿ, ಕುಳಿತರೆ ಏಳಲಾಗದೆ, ಮೆಟ್ಟಿಲು ಹತ್ತಲು ಭಯಪಡುವ ಸ್ಥಿತಿಯಲ್ಲಿರುವವರು.
ಉಚಿತ ಸಮಾಲೋಚನೆ: ಅನುಭವೀ ಮೂಳೆ ಶಸ್ತ್ರಚಿಕಿತ್ಸಕರು (ಔಡಿಣhoಠಿeಜiಛಿ Sಠಿeಛಿiಚಿಟisಣs) ಪ್ರತಿಯೊಬ್ಬ ರೋಗಿಯ ಸಮಸ್ಯೆಯನ್ನು ಕೂಲಂಕಷವಾಗಿ ತಪಾಸಣೆ ಮಾಡಿ, ಸೂಕ್ತ ಸಲಹೆ ಮತ್ತು ಚಿಕಿತ್ಸಾ ಮಾರ್ಗದರ್ಶನ ನೀಡಲಿದ್ದಾರೆ. (ಗಮನಿಸಿ: ನಂಜಪ್ಪ ಲೈಫ್ ಕೇರ್ನಲ್ಲಿ ಪ್ರಥಮ ಬಾರಿಗೆ ಸಮಾಲೋಚನೆ ಪಡೆಯುತ್ತಿದ್ದಲ್ಲಿ ನೋಂದಣಿ ಶುಲ್ಕ ಮಾತ್ರ ಅನ್ವಯಿಸುತ್ತದೆ).
ಲಭ್ಯರಿರುವ ತಜ್ಞರು: ಮೂಳೆ ತಜ್ಞರ ಜೊತೆಗೆ ನುರಿತ ಫಿಸಿಯೋಥೆರಪಿಸ್ಟ್ (Phಥಿsioಣheಡಿಚಿಠಿisಣs), ಸೂಕ್ತ ಆಹಾರ ಪದ್ಧತಿ ತಿಳಿಸಲು ಆಹಾರ ತಜ್ಞರು (ಆieಣiಣiಚಿಟಿs) ಹಾಗೂ ಮಾನಸಿಕ ಧೈರ್ಯ ತುಂಬಲು ಸೈಕಾಲಜಿಸ್ಟ್ಗಳು (Psಥಿಛಿhoಟogisಣs) ಸ್ಥಳದಲ್ಲೇ ಲಭ್ಯವಿರಲಿದ್ದಾರೆ.